ಉಪ್ಪಿನಂಗಡಿ: ಜಾತಿ ನಿಂದನೆ ಪ್ರಕರಣದ ಆರೋಪಿಗಳಿಗೆ ಜಾಮೀನು
![ಉಪ್ಪಿನಂಗಡಿ: ಜಾತಿ ನಿಂದನೆ ಪ್ರಕರಣದ ಆರೋಪಿಗಳಿಗೆ ಜಾಮೀನು ಉಪ್ಪಿನಂಗಡಿ: ಜಾತಿ ನಿಂದನೆ ಪ್ರಕರಣದ ಆರೋಪಿಗಳಿಗೆ ಜಾಮೀನು](https://www.varthabharati.in/sites/default/files/images/articles/2016/07/13/BailBondsElPaso.jpg)
ಉಪ್ಪಿನಂಗಡಿ, ಜು.13: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಶಿರಾಡಿ ಗ್ರಾಮದ ಕುರಿಯಾ ಕೋಸ್, ಕಮಲಾಕ್ಷ ಗೌಡ ಹಾಗೂ ಗಣೇಶ್ ಗೌಡ ಅವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಶಿರಾಡಿ ಜನತಾ ಕಾಲನಿ ನಿವಾಸಿ ಲತಾ ಎಂಬವರು ತನ್ನ ಪತಿ ತಿಮ್ಮಪ್ಪ ನಲಿಕೆ ಎಂಬವರಿಗೆ ಈ ಮೂವರು ಆರೋಪಿಗಳು ಹಲ್ಲೆ ನಡೆಸಲು ಬಂದಿದ್ದು, ಇದನ್ನು ನಾವು ಪ್ರಶ್ನಿಸಿದಾಗ ನನಗೆ ಹಾಗೂ ನನ್ನ ಪತಿಗೆ ಜಾತಿನಿಂದನೆಗೈದು ಆರೋಪಿಗಳು ಜೀವಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅನಿಲ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲ್ ವಾದಿಸಿದರು.
Next Story