Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮೌಢ್ಯ ನಿಷೇಧ ಕಾಯ್ದೆಗೆ ‘ಮುಹೂರ್ತ’ ಕೂಡಿ...

ಮೌಢ್ಯ ನಿಷೇಧ ಕಾಯ್ದೆಗೆ ‘ಮುಹೂರ್ತ’ ಕೂಡಿ ಬಂದಿಲ್ಲ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು13 July 2016 10:40 PM IST
share
ಮೌಢ್ಯ ನಿಷೇಧ ಕಾಯ್ದೆಗೆ ‘ಮುಹೂರ್ತ’ ಕೂಡಿ ಬಂದಿಲ್ಲ

ಇಗೋ ಮೌಢ್ಯ!

‘‘ಮೌಢ್ಯ ನಿಷೇಧ ಕಾಯ್ದೆಯಲ್ಲಿ ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (ಐಇ) ಇಲ್ಲದ್ದು ಏನಿದೆ? ಅದು ಬಹಳ ಞಚಿಜಿಜ್ಠಟ್ಠ ಕಾಯ್ದೆ’’ - ಹೀಗೆಂದು ಮೌಢ್ಯ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ವಿರೋಧಿಸಿದವರು ಇಂದಿನ ಮುಖ್ಯಮಂತ್ರಿಯೂ, ಅಂದಿನ ಪ್ರತಿಪಕ್ಷ ನಾಯಕರೂ ಆಗಿದ್ದ ದೇವೇಂದ್ರ ಫಡ್ನವೀಸ್. ಮುಂದೆ ದಾಭೋಲ್ಕರ್ ಅವರ ಹತ್ಯೆಯ ಬಳಿಕ, 2013 ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಈ ಶಾಸನವನ್ನು ಜಾರಿಗೆ ತಂದಿತು.
ಕರ್ನಾಟಕದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡು 2013ರಲ್ಲೇ ಸಿದ್ಧಗೊಂಡಿದ್ದರೂ, ಇನ್ನೂ ವಿಧಾನಮಂಡಲ ಹೊಕ್ಕು ಹೊರಬರಲು ಅದಕ್ಕೆ ‘‘ಮುಹೂರ್ತ’’ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಆದದ್ದು, ಕರ್ನಾಟಕದಲ್ಲಿ ಯಾಕೆ ಆಗೋದಿಲ್ಲ ಎಂದು ಹುಡುಕಿ ಹೊರಟಾಗ ಕಾಣಸಿಕ್ಕಿದ ಅಂಶಗಳಿವು:
1. ಕರ್ನಾಟಕ - ಮಹಾರಾಷ್ಟ್ರಗಳ ಎರಡೂ ಕಾಯ್ದೆಗಳೂ ಬಹುತೇಕ ಒಂದೇ ವಿಧದ್ದೇ ಆಗಿದ್ದು, ಈಗಾಗಲೇ ಭಾರತೀಯ ದಂಡಸಂಹಿತೆಯ ಬೇರೆ ಕಲಮುಗಳಲ್ಲಿ ಅಪರಾಧ ಎಂದು ವಿಧಿಸಲಾಗಿರುವ ವಿಚಾರಗಳೇ ಈ ಕಾಯ್ದೆಯಲ್ಲೂ ಇವೆ.
2. ಮಹಾರಾಷ್ಟ್ರದ ಕಾಯ್ದೆ ಸ್ವಲ್ಪವಿಶಾಲ ತಳಹದಿ ಹೊಂದಿದ್ದು, ಯಾವುದೆಲ್ಲ ಈ ಕಾಯ್ದೆಯ ಅಡಿ ಬರುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಕರ್ನಾಟಕದ ಕರಡು, ಮಹಾರಾಷ್ಟ್ರದ ಕಾಯ್ದೆಯ ಹಾದಿಯಲ್ಲೇ ಇದ್ದರೂ ಅನುಷ್ಠಾನಕ್ಕೆ ಕುರಿತಾದಂತೆ ಮಹಾರಾಷ್ಟ್ರದ್ದಕ್ಕಿಂತ ಹೆಚ್ಚು ಖಚಿತವಾದ ಹಾದಿಯನ್ನು ಹೊಂದಿದೆ.
3. ಕರ್ನಾಟಕದ ಕರಡಿನಲ್ಲಿ ಮಹಾರಾಷ್ಟ್ರದ ಕಾಯ್ದೆಗೆ ಹೊರತಾಗಿ ನಿರ್ದಿಷ್ಟವಾಗಿರುವ ಮತ್ತು ಹೆಚ್ಚಿನಂಶ ಇದನ್ನು ವಿರೋಧಿಸುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿರುವ ಅಂಶಗಳೆಂದರೆ: ಸಿಡಿ ಆಚರಣೆ, ಮಕ್ಕಳನ್ನು ಮುಳ್ಳುಗಳ ಮೇಲೆ ಎಸೆಯುವುದು, ದುರ್ಬಲ ವರ್ಗದ ಮಹಿಳೆಯರ ಮೇಲೆ ಓಕುಳಿ ನೀರೆರಚುವುದು, ಪ್ರಾಣಿ ಹಿಂಸೆ, ಮಡೆಸ್ನಾನ, ಪಾದರಕ್ಷೆ ತಲೆಯ ಮೇಲೆ ಒಯ್ಯುವುದು, ಆಹಾರ ವಿತರಣೆಯಲ್ಲಿ ಜಾತಿ-ಪಂಕ್ತಿ ಭೇದ, ಭವಿಷ್ಯ ಹೇಳಿ ಆರ್ಥಿಕ ಹಾನಿ ಮಾಡುವುದು.
ಯಾವುದು ವಿರೋಧದ ಮೂಲ?
ಕರ್ನಾಟಕದ ಕರಡಿನಲ್ಲಿ ನಿರ್ದಿಷ್ಟವಾಗಿ ಹೇಳಿರುವ ಅಂಶಗಳೆಲ್ಲ ಅಮಾನವೀಯವಾಗಿದ್ದರೂ, ರಾಜ್ಯದಲ್ಲಿ ಅಲ್ಲಲ್ಲಿ ಬೇರೆ ಬೇರೆ ಮುಸುಕುಗಳಲ್ಲಿ ಇನ್ನೂ ಆಚರಣೆಯಲ್ಲಿರುವುದು; ಈ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಾಗರಿಕ ಸಮಾಜ ನಿಜವಾಗಿಯೂ ನಾಗರಿಕ ಅನ್ನಿಸಿಕೊಳ್ಳಲು ಇವತ್ತಲ್ಲ ನಾಳೆ ಇವು ಜಾರಿಗೆ ಬರಲೇ ಬೇಕು ಎಂಬುದರಲ್ಲಿ ಸಂಶಯ ಇಲ್ಲ.
 ಆದರೆ, ಈ ಕರಡನ್ನು ರಾಜಕೀಯ ನೆಲೆಯಲ್ಲಿ ವಿರೋಧಿಸುವವರು ಈ ಅಂಶಗಳನ್ನು ನೇರವಾಗಿ ಎತ್ತದೆ, ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ, ಜನರಲ್ಲಿ ಚರ್ಚೆ ಮಾಡದೇ ಯಾರೋ ಕೆಲವರು ತಯಾರಿಸಿದ ಕಾಯ್ದೆ ಎಂದೆಲ್ಲ ಚಿಛಿಠಿಜ್ಞಿಜ ಚ್ಟಟ್ಠ್ಞ ಠಿಛಿ ಚ್ಠಿ ನಡೆಸಿದ್ದಾರೆ. ಜೊತೆಗೆ, ಆಳುವ ಪಕ್ಷದಲ್ಲೇ ಈ ಕಾಯ್ದೆಯ ಬಗ್ಗೆ ಅನುಮಾನಗಳು, ಅಸಮಾಧಾನಗಳೂ ಇದ್ದಂತಿದೆ.

ಒಂದು ರಾಜಿ ಪಂಚಾಯಿತಿ!
                     ಈ ಇಗೋಗಳ ಸಂಘರ್ಷದಲ್ಲಿ, ಮಾನವೀಯ ಕಾಯ್ದೆಯೊಂದು ಹೊರಬರದೇ ನನೆಗುದಿಗೆ ಬೀಳುವ ಸ್ಥಿತಿ ಇದು. ಇದಕ್ಕೆ ಸರಳ ಪರಿಹಾರ ಎಂದರೆ, ಹೆಚ್ಚಿನಂಶ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವಷ್ಟು ಅಂಶಗಳನ್ನು ಕರ್ನಾಟಕದಲ್ಲೂ ತಕ್ಷಣ ಜಾರಿಗೆ ತರುವುದು. ಅದಕ್ಕೆ ಯಾವುದೇ ಪಕ್ಷದ ತಕರಾರು ಇರಲಾರದು. ಅದಾದ ಮೇಲೆ, ಹಂತ ಹಂತವಾಗಿ ಉಳಿದ ಅಮಾನವೀಯ ಅಂಶಗಳನ್ನು ಕಾಯ್ದೆಗೆ ಸೇರಿಸಲು ಅವಕಾಶ ಯಾವತ್ತಿಗೂ ಇದೆ. ಕರಡು ಈಗ ಎತ್ತಿರುವ ನಿರ್ದಿಷ್ಟ ಅಂಶಗಳ ಬಗ್ಗೆ ಮುಂದೆ ಒಂದೊಂದಾಗಿ ಚರ್ಚೆ ನಡೆದರೆ, ಯಾವುದು ಮಾನವೀಯ ಯಾವುದು ಅಮಾನವೀಯ ಎಂದು ನೇರಾನೇರ ಹೊರಬರುವ ಅವಕಾಶ ಇರುವಾಗ, ಈ ಮುಸುಕು ಹಾಕಿ ಗುದ್ದಾಡುವ ಗೊಡವೆ ಯಾಕೆ?

ಕೃಪೆ: ಅವಧಿ

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X