ಜು.17: ಕಲ್ಲಮುಂಡ್ಕೂರಿನಲ್ಲಿ `ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ'
![ಜು.17: ಕಲ್ಲಮುಂಡ್ಕೂರಿನಲ್ಲಿ `ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ ಜು.17: ಕಲ್ಲಮುಂಡ್ಕೂರಿನಲ್ಲಿ `ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ](https://www.varthabharati.in/sites/default/files/images/articles/2016/07/14/14 mood Pressmeet.jpg)
ಮೂಡುಬಿದಿರೆ, ಜು.14 : ಕಲ್ಲಮುಂಡ್ಕೂರು ಕಲ್ಪಸಿರಿ ಶಟ್ಲ್ ಕ್ಲಬ್, ವ್ಯ.ಸೇ.ಸ. ಸಂಘ, ಗ್ರಾ.ಪಂ. ಮತ್ತು ಓಂಕಾರ್ ಸ್ಪೋಟರ್್ಸ ಕ್ಲಬ್ ಇವುಗಳ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕಲ್ಲಮುಂಡ್ಕೂರು ಗ್ರಾಮದ ಮಾಣಿಲ ಮನೆಯ ಬಾಕಿಮಾರು ಗದ್ದೆಯಲ್ಲಿ ಕೃಷಿ ಬದುಕನ್ನು ಹಾಸು ಹೊಕ್ಕಾದ ಕಾರ್ಯಕ್ರಮ ದ್ವಿತೀಯ ವರ್ಷದ `ಕೆಸರ್ದ ಕಂಡೊಡು ಆಟಿಡ್ ಒಂಜಿ ದಿನ' ಎಂಬ ಕಾರ್ಯಕ್ರಮವು ಜು.17ರಂದು ನಡೆಯಲಿದೆ ಎಂದು ಸಂಘಟಕರ ಪರವಾಗಿ ಗಂಗಾಧರ ಶೆಟ್ಟಿ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕೃಷಿ ಬದುಕಿನೊಂದಿಗೆ ಹಾಸುಹೊಕ್ಕಾದ ಆಟೋಟ, ಆಹಾರ ಪದ್ಧತಿ, ಕ್ರೀಡೆಗಳೊಂದಿಗೆ ನಡೆಯುವ ಈ ಕಾರ್ಯಕ್ರಮವು ಸೌಹಾರ್ದ, ಸಾಮರಸ್ಯದ ಮಹತ್ವ, ಅಗತ್ಯವನ್ನು ಸಾರಲಿದೆ. ಆಟೋಟಗಳಲ್ಲಿ ಕಲ್ಲಮುಂಡ್ಕೂರು, ನಿಡ್ಡೋಡಿ, ತೆಂಕ/ಬಡಗ ಮಿಜಾರು ಗ್ರಾಮಸ್ಥರಿಗೆ ಸ್ರ್ಪಸಲು ಅವಕಾಶವಿದೆ. ಎಂದ ಅವರು ತಿಳಿಸಿದರು. ಎಂದು ಅವರು ತಿಳಿಸಿದರು.
ಮಹಿಳೆಯರು, ಮಕ್ಕಳಿಗೆ ಲಿಂಬೆ ಚಮಚ ಓಟ, ಪುರುಷರು ಮತ್ತು ಮಹಿಳೆಯರಿಗೆ 100 ಮೀ., 200 ಮೀ. ಓಟ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಮಹಿಳೆಯರಿಗೆ ತ್ರೋ ಬಾಲ್, ಪುರುಷರಿಗೆ ವಾಲಿಬಾಲ್ ಪಂದ್ಯಾಟ,ಪಿರಮಿಡ್ ಮತ್ತು ಓಟದ ಕೋಣಗಳ ಸ್ಪರ್ಧೆ ನಡೆಯಲಿವೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ವಿಜಯ ಕಾಂಚನ್ ಮತ್ತು ಅಕ್ಷತಾ ಪೂಜಾರಿ ಬೋಳ ಇವರನ್ನು ಸಮ್ಮಾನಿಸಲಾಗುವುದು. ಆಟಿ ತಿಂಗಳ ತಿಂಡಿ, ತಿನಿಸು, ಊಟೋಪಚಾರ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದೆ.
ನಿಡ್ಡೋಡಿಯ ಉದ್ಯಮಿ ಎಂ.ಬಿ. ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಕಲ್ಲಮುಂಡ್ಕೂರು ವ್ಯ.ಸೇ. ಸಹಕಾರಿ ಸಂಘದ ಅಧ್ಯಕ್ಷ ಕೆ. ವರದರಾಯ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವೇ.ಮೂ. ಮಂಜುನಾಥ ಭಟ್, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ನಾಯ್ಕ್ , ಸುಭಾಶ್ಚಂದ್ರ ಪಡಿವಾಳ್, ಸಂತೋಷ್ಶೆಟ್ಟಿ , ಶ್ರೀಧರ ಶೆಟ್ಟಿ,ಜಯರಾಮ ಶೆಟ್ಟಿ, ರತ್ನಾಕರ ದೇವಾಡಿಗ ಸಹಿತ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 4.30ಕ್ಕೆ ನಿಡ್ಡೋಡಿ ಚಚ್ನ ರೆ.ಫಾ. ಗ್ರೆಗೊರಿ ಸೆರಾವೋ, ದೈಲಬೆಟ್ಟು ದೇವಸ್ಥಾನದ ಶ್ರೀಧರ ಭಟ್, ಜಯಪ್ರಕಾಶ ಪಡಿವಾಳ್, ಕರುಣಾಕರ ಶೆಟ್ಟಿ, ಕಲ್ಲಮುಂಡ್ಕೂರು ಹೈಸ್ಕೂಲಿನ ಮುಖ್ಯಶಿಕ್ಷಕ ಪಶುಪತಿ ಶಾಸ್ತ್ರಿ ಮೊದಲಾದವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಪ್ರಮುಖರಾದ ಜೊಕಿಂ ಕೊರೆಯ, ನಾಗರಾಜ ಕಾಮತ್, ಗುರು ಎಂ.ಪಿ., ಅಲೋನ್ಸ್ ಡಿ'ಸೋಜ, ಸುಖಾನಂದ ಶೆಟ್ಟಿ ಉಪಸ್ಥಿತರಿದ್ದರು.