Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಾರ್ಖಂಡ್: ಆಡು ಖರೀದಿಸಲು ಎರಡು ಸಾವಿರ...

ಜಾರ್ಖಂಡ್: ಆಡು ಖರೀದಿಸಲು ಎರಡು ಸಾವಿರ ರೂಪಾಯಿಗಳಿಗಾಗಿ 3 ದಿನದ ಮಗುವನ್ನೇ ಮಾರಿದ ತಾಯಿ

ವಾರ್ತಾಭಾರತಿವಾರ್ತಾಭಾರತಿ14 July 2016 4:54 PM IST
share
ಜಾರ್ಖಂಡ್:  ಆಡು ಖರೀದಿಸಲು ಎರಡು ಸಾವಿರ ರೂಪಾಯಿಗಳಿಗಾಗಿ 3 ದಿನದ ಮಗುವನ್ನೇ ಮಾರಿದ ತಾಯಿ

ರಾಂಚಿ,ಜು.14 : ಕೇವಲ ಎರಡು ಆಡುಗಳನ್ನು ಖರೀದಿಸಲು ಬೇಕಾಗಿದ್ದ ಎರಡು ಸಾವಿರ ರೂಪಾಯಿಗಾಗಿ ತನ್ನ ಮೂರು ದಿನದ ಹಸುಳೆಯನ್ನೇ ತಾಯಿಯೊಬ್ಬಳು ಮಾರಿದ ಘಟನೆ ಜಾರ್ಖಂಡ್ ರಾಜ್ಯದ ಸಬರ್ ತೊಲಾ ಗ್ರಾಮದಿಂದ ವರದಿಯಾಗಿದೆ. ಜುಲೈ 10 ರಂದು ಮೂವತ್ತರ ಅಸುಪಾಸಿನ ವಯಸ್ಸಿನ ಆದಿವಾಸಿ ವಿಧವೆಯೊಬ್ಬಳು ತನ್ನ ನವಜಾತ ಶಿಶುವನ್ನು ಛಾತ್ರಾದ ಉದ್ಯಮಿ ಕೇದಾರ್ ಸಾಹುಗೆ ಕೆಲವು ರೂಪಾಯಿಗಳಿಗಾಗಿ ಮಾರಿದ್ದಳು. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ರಾಮಘರ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ತರುವಾಯ ಉದ್ಯಮಿಯಿಂದ ಮಗುವನ್ನು ಪಡೆದು ಆಕೆಗೆ ಹಿಂದಿರುಗಿಸಲಾಗಿತ್ತು.

ಬಿರ್ಹೋರ್ ಆದಿವಾಸಿ ಜನಾಂಗದ ಪದ್ಧತಿಯಂತೆ ಮಗುವೊಂದಕ್ಕೆ ಜನ್ಮ ನೀಡಿದ ಮಹಿಳೆ ಎರಡು ಆಡುಗಳನ್ನು ಬಲಿಗೊಟ್ಟು ಅರಣ್ಯದೇವರುಗಳನ್ನು ಸಂತುಷ್ಟಗೊಳಿಸಬೇಕೆಂಬ ನಂಬಿಕೆಯೇ ಆಕೆ ಹೀಗೆ ಮಾಡಲು ಕಾರಣವೆಂದು ಹೇಳಲಾಗಿತ್ತು. ತನ್ನ ಮಗುವಿಗೆ ಉತ್ತಮ ಬಾಳು ಕೊಡಬೇಕೆಂಬ ಇಚ್ಛೆಯಿಂದ ತಾನು ಹೀಗೆ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಳು.

ಆದರೆ ಮತ್ತೆ ದೊರೆತ ಮಾಹಿತಿಯಂತೆ ಆಕೆಗೆ ಮಗು ಜನಿಸಿದ ಕೂಡಲೇ ಸಾಮೂಹಿಕ ಭೋಜನಕ್ಕಾಗಿ ಗ್ರಾಮಸ್ಥರು ಆಕೆಯಿಂದ ಎರಡು ಬಿಳಿ ಗಂಡು ಆಡುಗಳಿಗಾಗಿ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸದಿದ್ದರೆ ತನ್ನನ್ನು ನಾಸ್ತಿಕಳೆಂದು ಎಲ್ಲರೂ ಜರಿಯಬಹುದೆಂದು ಬೆದರಿ ಆಕೆ ಮಗುವನ್ನು ಹಣಕ್ಕಾಗಿ ಮಾರಿದ್ದಳೆಂದು ಈಗ ತಿಳಿದು ಬಂದಿದೆ.

‘‘ನನಗೆ ಬೇರೆ ದಾರಿಯಿರಲಿಲ್ಲ. ನನ್ನ ಪತಿ ಆರು ತಿಂಗಳ ಹಿಂದೆ ನಾಲ್ಕು ಮಕ್ಕಳನ್ನು ನನ್ನ ಆರೈಕೆಯಲ್ಲಿ ಬಿಟ್ಟು ಮೃತ ಪಟ್ಟಿದ್ದಾರೆ. ಹಗ್ಗಗಳನ್ನು ಮಾರಿ ಜೀವನ ಸಾಗಿಸುತ್ತಿದ್ದೆ. ಈಗ ಈ ಮಗು ನನಗೊಂದು ಹೆಚ್ಚಿನ ಹೊರೆಯಾಗಿದೆ,’’ ಎಂದು ಆಕೆ ಹೇಳುತ್ತಾಳೆ. ಉದ್ಯಮಿ ನೀಡಿದ ಹಣವನ್ನು ಹಿಂದಿರುಗಿಸುವ ಜವಾಬ್ದಾರಿ ಆಕೆಗಿದ್ದು ತನ್ನ ಮಗುವನ್ನು ದತ್ತು ನೀಡಲು ಕೂಡ ತಾನು ಸಿದ್ಧವೆಂದು ಆಕೆ ಹೇಳುತ್ತಾಳೆ. ಮಗುವನ್ನು ದತ್ತು ನೀಡಲು ಸ್ಥಳೀಯಾಡಳಿತ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X