ದೇವಸ್ಥಾನದಿಂದ ಸೊತ್ತು ಕಳವು
ಉಡುಪಿ, ಜು.14: ಪುತ್ತೂರು ಗ್ರಾಮದ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನಕ್ಕೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಹಲವು ಸೊತ್ತುಗಳನ್ನು ಕಳವುಗೈದಿದ್ದಾರೆ.
ದೇವಸ್ಥಾನದ ದ್ವಾರದ ಬಳಿಯ ಕಬ್ಬಿಣದ ಕಾಣಿಕೆ ಹುಂಡಿಯನ್ನು ಒಡೆಯಲು ವಿಫಲ ಯತ್ನ ನಡೆಸಿರುವ ಕಳ್ಳರು ಅದರ ಹತ್ತಿರದ ನವಗ್ರಹ ಗುಡಿಯ ಹೊರಗೆ ಇಟ್ಟಿದ್ದ ಕಬ್ಬಿಣದ ಕಾಣಿಕೆ ಹುಂಡಿಯನ್ನು ಕಳವು ಮಾಡಿದ್ದಾರೆ.
ದೇವಸ್ಥಾನದ ಮುಖ್ಯದ್ವಾರದ ಕೋಣೆಯಲ್ಲಿನ ಮಂಟಪದಲ್ಲಿದ್ದ ವಿಠಲ ರಖುಮಾಯಿ ದೇವರ ವಿಗ್ರಹಗಳೆರಡು ಹಾಗೂ ಅದಕ್ಕೆ ಅಳವಡಿಸಿರುವ ಬೆಳ್ಳಿ ಲೇಪನದ ಪ್ರಭಾವಳಿ ಹಾಗೂ ಪದ್ಮಾವತಿ ಕಲಾ ಮಂದಿರದ ಗೇಟಿನ ಬೀಗ ಒಡೆದು ಒಳಗೆ ಹೋಗಿದ್ದಾರೆ. ಕಳವಾಗಿರುವ ಸೊತ್ತಿನ ವೌಲ್ಯ 11 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story