ದಲಿತ ಯುವತಿ ದೇವಾಲಯ ಪ್ರವೇಶ: ಗಂಗಾಜಲದಿಂದ ಶುದ್ಧೀಕರಿಸಿದ ಅರ್ಚಕರು!
![ದಲಿತ ಯುವತಿ ದೇವಾಲಯ ಪ್ರವೇಶ: ಗಂಗಾಜಲದಿಂದ ಶುದ್ಧೀಕರಿಸಿದ ಅರ್ಚಕರು! ದಲಿತ ಯುವತಿ ದೇವಾಲಯ ಪ್ರವೇಶ: ಗಂಗಾಜಲದಿಂದ ಶುದ್ಧೀಕರಿಸಿದ ಅರ್ಚಕರು!](https://www.varthabharati.in/sites/default/files/images/articles/2016/07/15/rj00ho7t.jpg)
ಕಾನ್ಪುರ,ಜುಲೈ 15: ದೇವಸ್ಥಾನಕ್ಕೆ ದಲಿತ ಯುವತಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇವಸ್ಥಾನವನ್ನೇ ಗಂಗಾಜಲ ಹಾಕಿ ಶುದ್ಧೀಕರಿಸಿದ ಘಟನೆ ಉತ್ತರಪ್ರದೇಶದ ಮಂಗಲ್ಪುರ ಗ್ರಾಮದಿಂದ ವರದಿಯಾಗಿದೆ. ಈ ಕುರಿತು ಬಿತಾನಿ ದೇವಿ ಎಂಬ ದಲಿತ ಯುವತಿಚತುರ್ಭುಜ ದೇವಳದ ಪೂಜಾರಿಗಳ ವಿರುದ್ಧ ದೂರು ನೀಡಿದ್ದುಪೊಲೀಸರು ಪೂಜಾರಿಗಳನ್ನು ವಿಚಾರಿಸಿದ್ದಾರೆ.ಆದರೆ ಯುವತಿ ಕೇಸು ಬರೆದು ಕೊಟ್ಟಿಲ್ಲ ಎಂಬ ನೆಪ ಮುಂದೊಡ್ಡಿ ಪೊಲೀಸರು ಕೇಸು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
ಈ ನಡುವೆ ದೇವಸ್ಥಾನದ ಪೂಜಾರಿಗಳು ದೇವಸ್ಥಾನದಲ್ಲಿ ಗಂಗಾಜಲದಿಂದ ಶುದ್ಧೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯೇ ಈ ಯುವತಿ ಇನ್ನೊಬ್ಬ ಯುವತಿಯ ಜೊತೆಗೆ ದೇವಳಕ್ಕೆ ಪೂಜೆಗೆ ಬಂದಿದ್ದಳು. ಗಂಗಾಜಲ ಹಾಕಿ ಶುದ್ಧೀಕರಿಸುವುದು ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ ಎಂದು ತಿಳಿಸಿದ್ದಾರೆಂದು ವರದಿ ತಿಳಿಸಿದೆ.
Next Story