ಜು.17ರಂದು ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆಯವರಿಗೆ ಅಭಿನಂದನಾ ಸಮಾರಂಭ
![ಜು.17ರಂದು ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆಯವರಿಗೆ ಅಭಿನಂದನಾ ಸಮಾರಂಭ ಜು.17ರಂದು ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆಯವರಿಗೆ ಅಭಿನಂದನಾ ಸಮಾರಂಭ](https://www.varthabharati.in/sites/default/files/images/articles/2016/07/16/47522f45-4a90-4e10-bde3-df2731778db0.jpg)
ಮಂಗಳೂರು, ಜು.16: ಅಭಿಮಾನಿ ಬಳಗ ತುಂಬೆ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆಯವರಿಗೆ ಅಭಿನಂದನಾ ಸಮಾರಂಭ ಜು.17 ರಂದು ಸಂಜೆ 4ಕ್ಕೆ ತುಂಬೆ ಸೆಂಟರ್ನಲ್ಲಿ ನಡೆಯಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ವಕ್ತಾರ ಹರಿಕೃಷ್ಣ ಬಂಟ್ವಾಳ, ಅರಫ ಗ್ರೂಪ್ ಮಾಲಕ ಕೆ.ಎಸ್. ಸಾವುಂಞಿ ಹಾಜಿ, ಜಯರಾಮ್ ಸಾಮಾನಿ ತುಂಬೆ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story