ದೇವದಾಸಿ ಪದ್ಧತಿ ಸಂಪೂರ್ಣ ತೊಡೆದು ಹಾಕಲು ಕ್ರಮ: ಸಿಎಂ ಸಿದ್ದರಾಮಯ್ಯ

ಎಂಪಿಎಂ ಕಾರ್ಮಿಕರಿಗೆ ವಿಆರ್ಎಸ್ ಭಾಗ್ಯ
ತುಂಗಾಭದ್ರಾ ಹೂಳೆತ್ತಲು ಕ್ರಮ
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
ನೂತನ ಮರಳು ನೀತಿ ಜಾರಿ
ಬೆಂಗಳೂರು, ಜು. 16: ರಾಜ್ಯದಲ್ಲಿನ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸರಕಾರ ಕ್ರಮಕೈಗೊಂಡಿದ್ದು, ದೇವದಾಸಿಯರ ಮಾಸಾಶನವನ್ನು ಈಗಾಗಲೆ ಹೆಚ್ಚಳ ಮಾಡಿದ್ದು ದೇವದಾಸಿಯರ ಹೆಣ್ಣುಮಕ್ಕಳ ಶೈಕ್ಷಣಿಕ ಉನ್ನತಿಗೆ ಹೋಬಳಿಮಟ್ಟದ ವಸತಿ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮ ಅಕಾಡಮಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆ ಗಳಿಗೆ ಉತ್ತರ ನೀಡಿದ ಅವರು, ರಾಜ್ಯ ಸರಕಾರ ರೂಪಿಸಿ ರುವ ಜನಪರ ಯೋಜನೆಗಳ ಪ್ರಚಾರಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಶಾಪಗ್ರಸ್ಥ ಜಿಲ್ಲೆಯೆಂಬ ಹಣೆಪಟ್ಟಿಗೆ ಗುರಿಯಾಗಿದ್ದ ಚಾಮರಾಜನಗರ ಜಿಲ್ಲೆಗೆ ತಾನು ಆರು ಬಾರಿ ಭೇಟಿ ನೀಡಿದ್ದು, ನಗರದ ಅಭಿವೃದ್ಧಿ ಪ್ರಸಕ್ತ ಆಯವ್ಯಯದಲ್ಲಿ 50 ಕೋಟಿ ರೂ.ಮೀಸಲಿಡಲಾಗಿದೆ. ಆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಸಾರಿಗೆ ವ್ಯವಸ್ಥೆ: ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ಕಲಬುರಗಿ ಜಿಲ್ಲೆ, ಜೇರ್ವಗಿ ತಾಲೂಕಿನಖಾದ್ಯಪುರ ಗ್ರಾಮದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸದಿ ರುವುದು ಶೋಚನೀಯ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿ ದರು. ಸುತ್ತೋಲೆ: ಹಾಲು ಒಕ್ಕೂಟಗಳು ಹಾಲಿಗೆ ನೀಡುತ್ತಿ ರುವ 2ರೂ.ಹಾಲಿನ ದರವನ್ನು ಕಡಿತಗೊಳಿಸಲಾಗಿದೆ ಎಂಬ ಪತ್ರಕರ್ತರ ಆರೋಪಕ್ಕೆ ಉತ್ತರಿಸಿದ ಸಿಎಂ, ಸರಕಾರ ನೀಡುತ್ತಿರುವ ಸಬ್ಸಿಡಿ ಹಣ ಎಲ್ಲಿಯೂ ಕಡಿತಗೊಳಿಸಿಲ್ಲ. ಆದರೂ, ಹಾಲು ಒಕ್ಕೂಟಗಳು ದರ ಕಡಿತ ಗೊಳಿಸಿರುವ ಬಗ್ಗೆ ದೂರುಗಳಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಯೂನಿಯನ್ಗಳಿಗೆ ಸುತ್ತೋಲೆ ಹೊರಡಿಸ ಲಾಗಿದೆ ಎಂದರು.
ಕಾರ್ಮಿಕರಿಗೆ ವಿಆರ್ಎಸ್: ನಷ್ಟದ ಹಿನ್ನೆಲೆಯಲ್ಲಿ ಮುಚ್ಚಿರುವ ಭದ್ರಾವತಿ ಕಾಗದ ಕಾರ್ಖಾನೆ ಕಾರ್ಮಿ ಕರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ಕೈಗಾರಿಕಾ ಸಚಿವ ರೊಂದಿಗೆ ಚರ್ಚಿಸಲಾಗಿದೆ ಎಂದ ಅವರು, ಕಾರ್ಮಿ ಕರಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಹೂಳೆತ್ತಲು ಕ್ರಮ: ಹೊಸ ತಂತ್ರಜ್ಞಾನದ ಮೂಲಕ ತುಂಗಾಭದ್ರಾ ಅಣೆಕಟ್ಟಿನಲ್ಲಿ ತುಂಬಿರುವ ಹೂಳೆತ್ತಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದ ಸಿದ್ದರಾಮಯ್ಯ, ಮರಳು ಅಕ್ರಮ ದಂಧೆ ನಿಯಂತ್ರಣ ಸಂಬಂಧದ ವಿಧಾನ ಮಂಡಲ ಸದನ ಸಮಿತಿ ವರದಿ ನೀಡಿದ ಬಳಿಕ ಸಂಪುಟ ಉಪ ಸಮಿತಿ ನೂತನ ಮರಳು ನೀತಿ ಜಾರಿಗೆ ತರಲಿದ್ದು, ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಅಕಾಡಮಿ ಅಧ್ಯಕ್ಷ ಎಂ.ಸಿದ್ದರಾಜು ಮಾತನಾಡಿ, ಅಕಾಡಮಿಯ ಮೂವತ್ತೈದು ವರ್ಷಗಳ ಇತಿಹಾಸದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಪತ್ರಕರ್ತರೊಂದಿಗೆ ಸಿಎಂ ಸಂವಾದ ನಡೆಸುತ್ತಿರುವುದು ಇದೆ ಮೊದಲು. ಸರಕಾರದ ಭಾಗ್ಯಗಳ ಘೋಷಣೆಗೆ ಪತ್ರಕರ್ತರೇ ಪ್ರೇರಣೆ ಎಂದರು.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಡ ವಿದ್ಯಾರ್ಥಿಗಳಿಗೆ ಹತ್ತು ತಿಂಗಳವರೆಗೆ ಕೌಶಲ್ಯ ಅಭಿವೃದ್ಧಿ ಕುರಿತು ಅಕಾಡಮಿ ವತಿಯಿಂದ ತರಬೇತಿ ನೀಡುತ್ತಿದ್ದು ಮುಂದಿನ ವರ್ಷದಿಂದ ಈ ನೂತನ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದರು.
ಗೊಂದಲ-ಪೈಪೋಟಿ
‘ಅಭಿವೃದ್ಧಿ ನಿಟ್ಟಿನಲ್ಲಿ ಸಾಗಲು ಮಾಧ್ಯಮಗಳ ಪ್ರತಿನಿಧಿಗಳ ಪ್ರತಿ ಸ್ಪಂದನೆ ಪಡೆಯುವ ದೃಷ್ಟಿ ಯಿಂದ ಮಾಧ್ಯಮ ಅಕಾಡಮಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಜಿಲ್ಲಾ ಪತ್ರಕರ್ತರ ನಡುವೆ ಪೈಪೋಟಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಂವಾದ ಗೊಂದಲದ ಗೂಡಾಗಿದ್ದು, ಮಾತ್ರವಲ್ಲ, ಐತಿಹಾಸಿಕ ಮಹತ್ವದ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಂತಾಯಿತು’
‘ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ‘ಎತ್ತಿನಹೊಳೆ’ ಯೋಜನೆ ಜಾರಿಯ ಬಗ್ಗೆ ಯಾವುದೇ ಗೊಂದಲವಿಲ್ಲ. ಮಳೆಗಾಲದಲ್ಲಿ ಸಮುದ್ರ ಸೇರುವ 24 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಜನತೆಗೆ ಯಾವುದೇ ತೊಂದರೆ ಆಗುವುದಿಲ್ಲ. 13 ಸಾವಿರ ಕೋಟಿ ರೂ.ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಈ ಬಗ್ಗೆ ದ್ವಂದ್ವಗಳಿಗೆ ಅವಕಾಶವೇ ಇಲ್ಲ’
- ಸಿದ್ದರಾಮಯ್ಯ, ಮುಖ್ಯಮಂತ್ರಿ







