ಸೇವೆಯಲ್ಲಿ ಜೀವಂತಿಕೆ ಮತ್ತು ನೈಜ್ಯತೆ ಇರಲಿ: ಅಭಿನಂದನ್ ಶೆಟ್ಟಿ
![ಸೇವೆಯಲ್ಲಿ ಜೀವಂತಿಕೆ ಮತ್ತು ನೈಜ್ಯತೆ ಇರಲಿ: ಅಭಿನಂದನ್ ಶೆಟ್ಟಿ ಸೇವೆಯಲ್ಲಿ ಜೀವಂತಿಕೆ ಮತ್ತು ನೈಜ್ಯತೆ ಇರಲಿ: ಅಭಿನಂದನ್ ಶೆಟ್ಟಿ](https://www.varthabharati.in/sites/default/files/images/articles/2016/07/17/_DSC2887.jpg)
ಮೂಡುಬಿದಿರೆ, ಜು.16: ರೋಟರಿ ಸೇವಾ ಸಂಸ್ಥೆಯಲ್ಲಿ ಅವಕಾಶಗಳು ಮತ್ತು ಸಾಧ್ಯತೆಗಳು ಸಿಗುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ನಾವು ಮಾಡುವ ಸೇವೆಯಲ್ಲಿ ಜೀವಂತಿಕೆ ಮತ್ತು ನೈಜತೆ ಇದ್ದಾಗ ಅದರ ವೌಲ್ಯ ಹೆಚ್ಚುತ್ತದೆ ಎಂದು ರೋಟರಿ ಜಿಲ್ಲೆ 3181ರ ಸಬಾಪತಿ ಅಭಿನಂದನ್ ಶೆಟ್ಟಿ ಹೇಳಿದ್ದಾರೆ.
ಪಂಚರತ್ನ ಹೋಟೆಲ್ ಸಭಾಭವನದಲ್ಲಿ ಶುಕ್ರವಾರ ರಾತ್ರಿ ನಡೆದ ರೋಟರಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ರೋಟರಿ ಸದಸ್ಯರು ರೋಟರಿ ಕ್ಲಬ್ಗೆ ಮಾತ್ರ ಸೀಮಿತವಾಗದೆ ಸಮಾಜವನ್ನು ಪ್ರತಿನಿಧಿಸುವವರಾಗಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ನೂತನ ಅಧ್ಯಕ್ಷ ಧೀರಜ್ ಕುಮಾರ್ ಕ್ಲಬ್ನ ಅಭಿವೃದ್ಧಿಗೆ ಎಲ್ಲರ ಸಹಕಾರ ಯಾಚಿಸಿದರು.
ಇರುವೈಲಿನ ವಿದ್ಯಾರ್ಥಿಗಳಾದ ಕಾರ್ತಿಕ್ ಮತ್ತು ಕೌಶಿಕ್ ಎಂಬಿಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಇತರ ವೆಚ್ಚ ಭರಿಸಲು ಒಂದು ವರ್ಷದ ಮಟ್ಟಿಗೆ ದತ್ತು ಸ್ವೀಕರಿಸಲಾಯಿತು. ಉಪಸಭಾಪತಿ ಜಿನರಾಜ್ ಸಾಲ್ಯಾನ್, ಜೋನಲ್ ಲೆಫ್ಟಿನೆಂಟ್ ಮಾಧವ ಅಮೀನ್, ರೋಟರಿ ಮಿಡ್ಟೌನ್ನ ನಿರ್ಗಮನ ಅಧ್ಯಕ್ಷ ಪ್ರತಾಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಪ್ರಕಾಶ್ ಕೆ.ಎಸ್.ಗತವರ್ಷದ ವರದಿ ಮಂಡಿಸಿದರು. ಅಶೋಕ್ ಕುಮಾರ್ ಜೈನ್ ಮತ್ತು ಪ್ರವೀಣ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಸೂರ್ಯ ಪಿ. ವಂದಿಸಿದರು.