ಸುಬ್ರಹ್ಮಣ್ಯ: ತೀರ್ಥಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲು
![ಸುಬ್ರಹ್ಮಣ್ಯ: ತೀರ್ಥಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲು ಸುಬ್ರಹ್ಮಣ್ಯ: ತೀರ್ಥಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲು](https://www.varthabharati.in/sites/default/files/images/articles/2016/07/17/17sub01-d r venkatesh.jpg)
ಸುಬ್ರಹ್ಮಣ್ಯ, ಜು.17: ಕುಮಾರಧಾರಾ ಸ್ನಾನಘಟ್ಟದ ಬಳಿ ತೀರ್ಥಸ್ನಾನಕ್ಕೆ ಇಳಿದಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವ ನದಿಯಲ್ಲಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ನೆಲಮಂಗಲ ದಾಬಸ್ ಪೇಟೆ ನಿವಾಸಿ ಡಿ.ಆರ್.ವೆಂಕಟೇಶ್(31) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದವರು. ಇವರು ಸಂಬಂಧಿಕರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರವಿವಾರ ಮುಂಜಾನೆ ಆಗಮಿಸಿದ್ದರು. ಈ ವೇಳೆ ತೀರ್ಥಸ್ನಾನಕ್ಕೆಂದು ಕುಮಾರಧಾರಾ ನದಿಗೆ ಇಳಿದಿದ್ದರು. ಆಗ ಈ ದುರ್ಘಟನೆ ಸಂಭವಿಸಿದೆ.
ವೆಂಕಟೇಶ್ಗಾಗಿ ಪುತ್ತೂರು ಅಗ್ನಿಶಾಮಕ ದಳ ಶೋಧಕಾರ್ಯದಲ್ಲಿ ನಿರತವಾಗಿದ್ದು, ಸಂಜೆತನಕ ಅವರು ಪತ್ತೆಯಾಗಿಲ್ಲ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story