Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯಾರನ್ನೋ ತೆಗಳಲು ಹೋಗಿ ತನ್ನ...

ಯಾರನ್ನೋ ತೆಗಳಲು ಹೋಗಿ ತನ್ನ ಪುತ್ರಿಯನ್ನೇ ಗುರಿಯಾಗಿಸಿದ ಸುಬ್ರಹ್ಮಣ್ಯನ್ ಸ್ವಾಮಿ

ಪ್ರಮಾದದಿಂದ ಮುಜುಗರಕ್ಕೀಡಾದ ಬಿಜೆಪಿ ನಾಯಕ

ವಾರ್ತಾಭಾರತಿವಾರ್ತಾಭಾರತಿ18 July 2016 1:22 PM IST
share
ಯಾರನ್ನೋ ತೆಗಳಲು ಹೋಗಿ ತನ್ನ ಪುತ್ರಿಯನ್ನೇ ಗುರಿಯಾಗಿಸಿದ ಸುಬ್ರಹ್ಮಣ್ಯನ್ ಸ್ವಾಮಿ

ಹೊಸದಿಲ್ಲಿ, ಜು.18: : ಹಿರಿಯ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಹಿಂದಿನ ಕಾಂಗ್ರೆಸ್ ಸರಕಾರವನ್ನು ಟೀಕಿಸುವ ಯಾವುದೇ ಅವಕಾಶವನ್ನು ಕೈಬಿಡುವುದಿಲ್ಲವೆಂಬುದು ಜನಜನಿತ. ಅಂತೆಯೇ ಕಾಂಗ್ರೆಸ್ ಪಕ್ಷದ ಪರ ಮೃದು ಧೋರಣೆ ಹೊಂದಿರುವ ಕೆಲ ಪತ್ರಕರ್ತರನ್ನೂ ಕಂಡರೆ ಅವರಿಗಾಗದು ಎನ್ನುವುದೂ ರಹಸ್ಯವಲ್ಲ.

ಆದರೆ ರವಿವಾರದಂದು ಯುಪಿಎ ಸರಕಾರದ ಆಡಳಿತದ ಸಂದರ್ಭ ಕೆಲ ಪತ್ರಕರ್ತರ ಸ್ವಜನಪಕ್ಷಪಾತ ನೀತಿಯನ್ನು ಬಹಿರಂಗಗೊಳಿಸಲು ಹೋಗಿ ಅವರು ತಾವೇ ಮುಜುಗರಕ್ಕೀಡಾಗಿರುವುದು ಸೋಜಿಗದ ಸಂಗತಿ.

‘‘ಜರ್ನಲಿಸ್ಟ್ಸ್ ಹೂ ಬಿಕೇಮ್ ಫ್ರೀಕ್ವೆಂಟ್ ಮೀಡಿಯಾ ಡೆಲಿಗೇಟ್ಸ್ ಡ್ಯುರಿಂಗ್ ಪ್ರೈಮ್ ಮಿನಿಸ್ಟರ್ಸ್ ಅಫೀಶಿಯಲ್ ಫಾರಿನ್ ವಿಸಿಟ್ಸ್ ಅಂಡರ್ ಯುಪಿಎ ರಿಜೈಮ್’ ಎಂಬ ಶೀರ್ಷಿಕೆಯಡಿಯಲ್ಲಿ ಜನ್ ಸತ್ಯಾಗ್ರಹ್ ಎಂಬ ವೆಬ್‌ಸೈಟ್ ಪ್ರಕಟಿಸಿದ ಲೇಖನವೊಂದರ ಲಿಂಕ್ ಟ್ವೀಟ್ ಮಾಡಿದ್ದರು ಸ್ವಾಮಿ. ‘‘ಪ್ರಧಾನಿ ವಿದೇಶ ಪ್ರವಾಸದ ಸಂದರ್ಭ ಅವರೊಂದಿಗೆ ಪ್ರಯಾಣಿಸಲು ಅವಕಾಶ ದೊರೆಯುತ್ತಿದ್ದ, ಸರಕಾರಕ್ಕೆ ಹತ್ತಿರವಾಗಿದ್ದ ಸಂಪಾದಕರು ಹಾಗೂ ಪತ್ರಕರ್ತರ ಒಳ್ಳೆಯ ದಿನಗಳು ಮುಗಿದು ಹೋದವು. ಆರ್‌ಟಿಐ ಅರ್ಜಿಗಳ ಮುಖಾಂತರ ಸಂಗ್ರಹಿಸಲಾದ ಮಾಹಿತಿಯಾಧಾರದ ವಿಶೇಷ ವರದಿ ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತಲ್ಲದೆ, ಅದರಲ್ಲಿ ಹಿಂದಿನ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಅವರೊಂದಿಗೆ ವಿದೇಶ ಪ್ರವಾಸ ಮಾಡಿದ ಪತ್ರಕರ್ತರ ಹೆಸರುಗಳನ್ನು ನೀಡಲಾಗಿತ್ತು.

ಆದರೆ ಆ ಟ್ವೀಟ್‌ನಲ್ಲಿ ಪೋಸ್ಟ್ ಮಾಡಲಾದ ಫೋಟೊ ಒಂದರಲ್ಲಿ ಕಾಣಿಸಿಕೊಂಡವರಲ್ಲಿ ಸ್ವಾಮಿಯ ಪುತ್ರಿ ಸುಹಾಸಿನಿ ಹೈದರ್ ಕೂಡ ಇದ್ದರು. ಹಾಲಿ ದಿ ಹಿಂದೂ ಪತ್ರಿಕೆಗೆ ವರದಿ ಮಾಡುತ್ತಿರುವ ಸುಹಾಸಿನಿ ಈ ಹಿಂದೆ ಸಿಎನ್‌ಎನ್ ಐಬಿಎನ್ ಸುದ್ದಿ ಚಾನಲ್‌ನ ಫಾರಿನ್ ಎಡಿಟರ್ ಆಗಿದ್ದರು. ಸ್ವಾಮಿ ಟ್ವೀಟ್ ಮಾಡಿದ್ದ ಲೇಖನದಲ್ಲಿ ‘‘ಹಿಂದಿನ ಯುಪಿಎ ಸರಕಾರದಲ್ಲಿ ಪ್ರಧಾನಿ, ರಾಷ್ಟ್ರಪತಿ ಹಾಗೂ ವಿದೇಶಾಂಗ ಸಚಿವರೊಂದಿಗೆ ವಿದೇಶ ಪ್ರವಾಸ ಮಾಡಿದ ಹಲವಾರು ಪ್ರಮುಖರಲ್ಲಿ ಸುಹಾಸಿನಿ ಸೇರಿದ್ದರು’’ ಎಂಬ ಅಂಶ ವರದಿಯಾಗಿತ್ತು.

ಟ್ವೀಟ್ ಮಾಡಿದ ಬಳಿಕ ಈ ಬಗ್ಗೆ ಎಚ್ಚೆತ್ತುಕೊಂಡ ಸ್ವಾಮಿ ಇನ್ನೊಂದು ಸ್ಪಷ್ಟೀಕರಣ ಟ್ವೀಟ್ ಮಾಡಿ ‘‘ನಾನು ರಿಟ್ವೀಟ್ ಮಾಡಿದ ಫೊಟೋದಲ್ಲಿ ಸುಹಾಸಿನಿಯ ಫೋಟೊ ಕೂಡ ಇತ್ತು .! ಅವಳು ಯಾರ ಪರವಾಗಿಯೂ ಇಲ್ಲ. ಅವಳನ್ನು ನಾನು ನಿರ್ಭೀತಿಯ ಯುವತಿಯನ್ನಾಗಿ ಬೆಳೆಸಿದ್ದೇನೆ. ಆದುದರಿಂದ ಫೋಟೊ ತಿದ್ದುಪಡಿ ಮಾಡಿಕೊಳ್ಳಿ.’’

ಆದರೆ ಸ್ವಾಮಿ ಸ್ಪಷ್ಟೀಕರಣ ನೀಡಿದಂತೆ ಅವರು ರಿಟ್ವೀಟ್ ಮಾಡಿಲ್ಲ, ಬದಲಾಗಿ ಲೇಖನದ ಲಿಂಕ್‌ನೊಂದಿಗೆ ಹೊಸ ಟ್ವೀಟ್ ಮಾಡಿದ್ದರಷ್ಟೇ. ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಾಮಿಯ ಈ ಪ್ರಮಾದ ಸಾಕಷ್ಟು ಸುದ್ದಿಯಾಗಿತ್ತು.

Exclusive : UPA And Media Cronyism https://t.co/QejkhnsOCZ #Jan-SatyaGrah via @Jan_Satyagrah

— Subramanian Swamy (@Swamy39) July 17, 2016

That awkward moment when Subramanian Swamy realised he ended up attacking his own daughter. https://t.co/xbJthXEvQ1

— Rahul Kanwal (@rahulkanwal) July 17, 2016

So when swamy abuses other's daughters it's ok?
He wants a different treatment for his own daughter https://t.co/9J4ANMiNKq

— Priyashmita Guha (@priyashmita) July 17, 2016

SuSu Swamy Retweets an Article about Cronies of UPA in Media. Later realises article includes his daughter.. pic.twitter.com/Dsy9sNOdtt

— Joy (@Joydas) July 17, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X