ಪಶುಭಾಗ್ಯ ಯೋಜನೆಯ ಅನುಷ್ಠಾನಕೆ ಪೂರ್ವಭಾವಿ ಸಭೆ

ಮಡಿಕೇರಿ, ಜು.19 : ಪಶುಭಾಗ್ಯ ಯೋಜನೆ ಅನುಷ್ಠಾನ ಸಂಬಂಧ ನಗರದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಯಿತು. ಸಣ್ಣ ಮತ್ತು ಅತೀ ಸಣ್ಣ ರೈತರು ಪಶುಭಾಗ್ಯ ಯೋಜನೆಯಡಿ ಹಸು, ಹಂದಿ, ಕೋಳಿ, ಆಡು ಘಟಕಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬನೆ ಗಳಿಸಿ ಉತ್ತಮ ಜೀವನ ನಡೆಸುವಂತಾಗಬೇಕು ಎಂಬ ಆಶಯದಿಂದ ಸರಕಾರ ಪಶುಭಾಗ್ಯ ಯೋಜನೆಯನ್ನು ಕಳೆದ ವರ್ಷದಿಂದ ಜಾರಿಗೊಳಿಸಿದೆ. ಸಭೆಯಲ್ಲಿ ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷ ರೂ.ವರೆಗೆ ಸಾಲ ಪಡೆದು ಹಸು, ಹಂದಿ, ಕೋಳಿ, ಆಡು, ಕುರಿ ಘಟಕಗಳನ್ನು ಸ್ಥಾಪಿಸಲು ಸಹಾಯ ಧನವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.50ರಷ್ಟು, ಇತರೆ ಸಮುದಾಯದವರಿಗೆ ಶೇ.25 ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ. ಹಂದಿ ಸಾಕಣೆಯಲ್ಲಿ 4 ಹಂದಿಗಳನ್ನು ನೀಡಲಾಗುತ್ತಿದ್ದು, 94 ಸಾವಿರ ರೂ.ಘಟಕ ವೆಚ್ಚವಾಗಿದೆ. ಆಡು ಸಾಕಣೆಯಲ್ಲಿ 11 ಆಡುಗಳನ್ನು ನೀಡಲಾಗುತ್ತಿದ್ದು, 67,440ರೂ. ಘಟಕ ವೆಚ್ಚ ಒದಗಿಸಲಾಗುತ್ತದೆ. ಹಾಗೆಯೇ 200 ಮಾಂಸದ ಕೋಳಿ ಸಾಕಣೆೆಗಾಗಿ 85 ಸಾವಿರ ರೂ. ಘಟಕ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ನಾಗರಾಜು ಅವರು ಮಾಹಿತಿ ನೀಡಿದರು. ಒಟ್ಟಾರೆ ಮಡಿಕೇರಿ ತಾಲೂಕಿನಲ್ಲಿ ಹೈನುಗಾರಿಕೆ 15 ಗುರಿಯಲ್ಲಿ ಸಾಮಾನ್ಯ 7, ಪರಿಶಿಷ್ಟ ಜಾತಿ 3, ಮಹಿಳೆ 5, ಆಡು ಸಾಕಣೆೆ 6, ಹಂದಿ ಸಾಕಣೆ 2, ಕೋಳಿ ಸಾಕಣೆ 3 ಫಲಾನುಭವಿಗಳನ್ನು ನಿಗದಿ ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಹೈನುಗಾರಿಕೆಗೆ ಒಟ್ಟು 181 ಫಲಾನುಭವಿಗಳಿಗೆ ನಿಗದಿ ಮಾಎಲಾಗಿದ್ದು,್ದ, ಸಾಮಾನ್ಯ 130, ಪರಿಶಿಷ್ಟ ಜಾತಿ 14, ಪರಿಶಿಷ್ಟ ಪಂಗಡ 8, ಮಹಿಳೆಯರು 29, ಕೋಳಿ ಸಾಕಣೆೆಯಲ್ಲಿ ಒಟ್ಟು 5 ನಿಗದಿ ಮಾಡಲಾಗಿದ್ದು, 5 ಸಾಮಾನ್ಯ ಫಲಾನುಭವಿಗಳಿಗೆ ನಿಗದಿ ಮಾಡಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಆಡು ಸಾಕಣೆೆಯಲ್ಲಿ ಒಟ್ಟು 15 ನಿಗದಿ ಮಾಡಲಾಗಿದ್ದು, ಸಾಮಾನ್ಯ 14, ಪರಿಶಿಷ್ಟ ಜಾತಿ 1., ಹಂದಿ ಸಾಕಣೆೆಯಲ್ಲಿ 10 ನಿಗದಿ ಮಾಡಲಾಗಿದ್ದು,, ಸಾಮಾನ್ಯ 7, ಪರಿಶಿಷ್ಟ ಜಾತಿ 2, ಪರಿಶಿಷ್ಟ ಪಂಗಡ 1., ಕೋಳಿ ಸಾಕಣೆಯಲ್ಲಿ ಒಟ್ಟು 20 ನಿಗದಿ ಮಾಡಲಾಗಿದ್ದು, ಸಾಮಾನ್ಯ 15, ಪರಿಶಿಷ್ಟ ಜಾತಿ 3, ಪರಿಶಿಷ್ಟ ಪಂಗಡ 2 ಗುರಿ ನಿಗದಿ ಮಾಡಲಾಗಿದೆ. ಆಸಕ್ತ ಅರ್ಹರು ಹತ್ತಿರದ ಪಶು ಚಿಕಿತ್ಸಾಲಯಗಳು, ತಾಲೂಕು ಪಶು ಸಂಗೋಪನಾ ಇಲಾಖೆಯಲ್ಲಿ ಅರ್ಜಿ ಪಡೆದು ಆ.14 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನಬಾರ್ಡ್ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕಾಬ್ಸೆಟ್ ನಿರ್ದೇಶಕರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ಪಶುಪಾಲನಾ ಇಲಾಖೆ ಕಚೇರಿಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಡಾ.ಸಿ.ನಾಗರಾಜು ತಿಳಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ.ದೇವಯ್ಯ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಸಿ.ನಾಣಯ್ಯ, ಕಾಬ್ಸೆಟ್ ನಿರ್ದೇಶಕ ನಾಗೇಂದ್ರ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಾಂತೇಶ್, ಡಾ.ಚೆಟ್ಟಿಯಪ್ಪ, ಡಾ.ಪ್ರಸನ್ನ ಉಪಸ್ಥಿತರಿದ್ದರು.





