ಪ್ರತ್ಯೇಕ ಪ್ರಕರಣ: ನಾಲ್ವರ ಆತ್ಮಹತ್ಯೆ
ಕೋಟ, ಜು.19: ವೈಯಕ್ತಿಕ ಕಾರಣದಿಂದ ಮನನೊಂದ ಸಾಲಿಗ್ರಾಮದ ಕಮಲಾಕ್ಷ ಹೆಗ್ಡೆ ಎಂಬವರು ಮಂಗಳವಾರ ಮುಂಜಾನೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಬ್ರಹ್ಮಾವರ: ಕುದಿ ಗ್ರಾಮದ ಹೊರ್ಲಾಳಿಯ ಗುಣಕರ ಶೆಟ್ಟಿ (50) ಎಂಬವರು ಮಂಗಳವಾರ ಬೆಳಗ್ಗೆ ಕುದಿ ಗ್ರಾಮದ ನುಕ್ಕೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಳಿಯ ಹಾಡಿಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಕಾರ್ಕಳ: ರೆಂಜಾಳ ನಿವಾಸಿ ಗೋಪಾಲ ಆಚಾರ್ಯರ ಮಗ ರವಿಚಂದ್ರ ಆಚಾರ್ಯ ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ರಾತ್ರಿ ಮನೆ ಸಮೀಪದ ಹಾಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಬ್ರಹ್ಮಾವರ: ವೈಯಕ್ತಿಕ ಕಾರಣದಿಂದ ಮನನೊಂದ ಯಡ್ತಾಡಿ ಗ್ರಾಮದ ಮೂಡಬೆಟ್ಟುವಿನ ಸುರೇಶ್ ಪೂಜಾರಿ(35) ಎಂಬವರು ಸೋಮವಾರ ರಾತ್ರಿ ಮನೆ ಸಮೀಪ ಇರುವ ಹೊಳೆ ಬದಿಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.