ನಿಧನ,
![ನಿಧನ, ನಿಧನ,](https://www.varthabharati.in/sites/default/files/images/articles/2016/07/20/UD-Ju19 NARAYANA.jpg)
ನಾರಾಯಣ ಗೌಡ ಉಡುಪಿ, ಜು.19: ಸಿಂಗದೂರು ಮೇಳದ ಯಕ್ಷಗಾನ ಕಲಾವಿದ ಯಳಜಿತ್ ನಾರಾಯಣ ಗೌಡ (58) ಅಸೌಖ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಿವಿಧ ವೃತ್ತಿಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ಕಲಾಸೇವೆಗೈದಿದ್ದ ಇವರು ಮಾರಣಕಟ್ಟೆ, ಸಾಲಿಗ್ರಾಮ, ಅಮೃತೇಶ್ವರೀ, ಹಿರಿಯಡ್ಕ ಮತ್ತು ಸೌಕೂರು ಮೇಳಗಳಲ್ಲಿ ಪುರುಷ ಪಾತ್ರ, ಕಿರಾತ, ಬಣ್ಣದ ವೇಷಗಳಲ್ಲಿ ವಿಶೇಷ ಸಾಧನೆ ಮಾಡಿದ್ದರು. ಇವರ ನಿಧನಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story