ಕುಂಟಿಕಾನ ಅದ್ವೈತ್ ಹುಂಡೈ ವತಿಯಿಂದ ವನಮಹೋತ್ಸವ
![ಕುಂಟಿಕಾನ ಅದ್ವೈತ್ ಹುಂಡೈ ವತಿಯಿಂದ ವನಮಹೋತ್ಸವ ಕುಂಟಿಕಾನ ಅದ್ವೈತ್ ಹುಂಡೈ ವತಿಯಿಂದ ವನಮಹೋತ್ಸವ](https://www.varthabharati.in/sites/default/files/images/articles/2016/07/21/IMG_7813 (1) copy.jpg)
ಮಂಗಳೂರು, ಜು.21: ಕುಂಟಿಕಾನ ಅದ್ವೈತ್ ಹುಂಡೈ ವತಿಯಿಂದ ನಗರದ ಶಕ್ತಿನಗರ ನಾಲ್ಯಪದವು ಸರಕಾರಿ ಶಾಲೆಯಲ್ಲಿ ಜು.20ರಂದು ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಅದ್ವೈತ್ ಹುಂಡೈಯ ಗ್ರಾಹಕರ ಉಪಸ್ಥಿತಿಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಸತತ 4 ವರ್ಷಗಳಿಂದ ಕುಂಟಿಕಾನ ಅದ್ವೆತ್ ಹುಂಡೈಯು ವಿವಿಧ ಕಡೆಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಜಯಂತ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಜೇವನ್ ಶೆಟ್ಟಿ, ಧನರಾಜ್, ಗಣೇಶ, ಅವಿನಾಶ್ ಮಲ್ಯ ಮುಖ್ಯ ಪ್ರಬಂಧಕ ಮೆಲ್ವಿನ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಉದಯ ಕುಮಾರಿ ಹಾಗೂ ವಿಜಯ ಕುಮಾರಿ ಶೋರೂಂ ಮೆನೇಜರ್ ರಾಜೇಶ್ ಉಳ್ಳಾಲ್, ಮೀನಾ ರೇಗೊ, ವಿವೇಕ್ ನವನೀತ್, ಟೀಮ್ ಲೀಡರ್ ಹಾಗೂ ಸೇಲ್ಸ್ ಟೀಮ್ ಉಪಸ್ಥಿತರಿದ್ದರು.
Next Story