ಸ್ವಚ್ಛ ಭಾರತದಲ್ಲಿ ಮಂಗಳೂರಿಗೆ ಪ್ರಥಮ ಸ್ಥಾನದ ಗುರಿ
ಮುಂದಿನ ಮನಪಾ ಸಾ. ಸಭೆಯಲ್ಲಿ ‘ನಗರ ಕ್ರಿಯಾ ಪಡೆ’ ಮಂಡನೆ

ಮಂಗಳೂರು,ಜು.21: ಸ್ವಚ್ಛ ಭಾರತ ಮಿಷನ್ನಡಿ ಪ್ರಸಕ್ತ ಸಾಲಿನಲ್ಲಿ ಮೂರನೆ ಸ್ಥಾನದಲ್ಲಿರುವ ಮಂಗಳೂರು ನಗರವನ್ನು 2017ರಲ್ಲಿ ಪ್ರಥಮ ಸ್ಥಾನಕ್ಕೇರಿಸುವ ಗುರಿಯೊಂದಿಗೆ ಸೂಕ್ತ ಯೋಜನೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ನಗರ ಕ್ರಿಯಾ ಪಡೆಯೊಂದನ್ನು ರಚಿಸಿ ಮುಂದಿನ ಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಅನುಷ್ಠಾನದಲ್ಲಿ ಸ್ವಚ್ಛ ಸರ್ವೇಕ್ಷಣ- 2017ರ ಕುರಿತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಬೇಕಾಗಿರುವ ಕ್ರಮದ ಕುರಿತು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ನಗರ ಸ್ವಚ್ಛತೆಗೆ ಸಂಬಂಧಿಸಿ ಚರ್ಚೆಯ ಬಳಿಕ ಪ್ರತಿಕ್ರಿಯಿಸಿದ ನೂತನ ಆಯುಕ್ತ ಮುಹಮ್ಮದ್ ನಝೀರ್, ನಗರದಲ್ಲಿ 408 ಶೌಚಾಲಯ ರಹಿತ ಮನೆಗಳನ್ನು ಗುರುತಿಸಿ ಅಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಸ್ವಚ್ಛ ಭಾರತ್ನಿಂದ ಈಗಾಗಲೇ ಶೇ.50ರಷ್ಟು ಸಹಾಯಧನ ಒದಗಿಸಲಾಗಿದೆ. ಸ್ವರೋಜ್ಗಾರ್ ಯೋಜನೆಯಡಿ ನೀಡಬೇಕಾಗಿರುವ ಹಣ ಪಾವತಿಯಾಗಬೇಕಿದೆ. ಅದನ್ನು ಮೂರ್ನಾಲ್ಕು ದಿನಗಳಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛ ಭಾರತ ಯೋಜನೆಗೆ ಸಂಬಂಸಿ ನಗರ ಮಟ್ಟದ ಕ್ರಿಯಾ ಪಡೆಯನ್ನು ರಚಿಸಿ ಮುಂದಿನ ಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗುವುದು ಎಂದರು.
ಸ್ವಚ್ಛ ಭಾರತ್ ಯೋಜನೆಗೆ ಸಂಬಂಧಿಸಿ ಆರೋಗ್ಯ ಇಲಾಖೆಯಲ್ಲಿ ನಿರೀಕ್ಷಕರ ಕೊರತೆ ಇರುವುದರಿಂದ ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಐದು ವಾರ್ಡ್ಗೆ ಒಬ್ಬರನ್ನು ನೋಡಲ್ ಅಕಾರಿಯನ್ನಾಗಿ ನೇಮಕ ಮಾಡಲಾಗುವುದು. ಅವರ ಜತೆ ಐದರಿಂದ ಆರು ಮಂದಿಯನ್ನು ಒಳಗೊಂಡ ತಂಡ ರಚಿಸಿ ಜವಾಬ್ಧಾರಿಯನ್ನು ವಹಿಸಲಾಗುವುದು. ಇದೇ ವೇಳೆ ಸ್ಥಳೀಯ ಕಾರ್ಪೊರೇಟರ್ ಸಹಭಾಗಿತ್ವದಲ್ಲಿ ವಾರ್ಡ್ ಮಟ್ಟದ ಸಭೆಯನ್ನೂ ರಚಿಸಲಾಗುವುದು. ಈ ಮೂಲಕ ಸ್ಪರ್ಧಾತ್ಮಕ ರೀತಿಯಲ್ಲಿ ನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.
2016ರಲ್ಲಿ ಕೇಂದ್ರದ ನಗರಾಭಿವೃದ್ಧಿ ಇಲಾಖೆ ವತಿಯಿಂದ ನಡೆದ ಸ್ವಚ್ಛತಾ ಪರಿಶೀಲನೆಯಲ್ಲಿ 476 ನಗರ ಪೈಕಿ ಮಂಗಳೂರು ಮಹಾನಗರ ಪಾಲಿಕೆ 64.74 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ಪ್ರಥಮ ಸ್ಥಾನ ಪಡೆದ ನಗರಕ್ಕಿಂತ 0.35 ಅಂಕಗಳಿಂದ ಮಾತ್ರವೇ ಹಿಂದುಳಿದಿದ್ದ ನಗರವನ್ನು ಪ್ರಸಕ್ತ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೇರಿಸುವಲ್ಲಿ ಅಕಾರಿಗಳು, ಜನಪ್ರತಿನಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿದೆ.
ನಗರದ ಸ್ವಚ್ಛತೆಯನ್ನು ಕೆಲವೊಂದು ಮಾನದಂಡಗಳಡಿ ಪರಿಶೀಲನೆಗೆ ಕೇಂದ್ರದ ತಂಡವು 2017ರ ಜನವರಿ 4ರಿಂದ ಫೆ.4ರ ನಡುವೆ ಭೇಟಿ ನೀಡುವ ನಿರೀಕ್ಷೆ ಇದೆ. ನಗರದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ನಗರ ಪಾಲಿಕೆಯ ಸೇವಾ ನಿರ್ವಹಣೆ ಜನರಿಗೆ ತಲುಪಿಸುವಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತಂತೆ ಈ ತಂಡವು ಪರಿಶೀಲನೆ ನಡೆಸಲಿದೆ. ಬಳಿಕ 2017ರ ಫೆಬ್ರವರಿ 15ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಸ್ವಚ್ಛತೆಯ ಮಾನದಂಡಗಳ ಕುರಿತಂತೆ ಮಾಹಿತಿ ನೀಡಿದ ಪಾಲಿಕೆಯ ಆರೋಗ್ಯ ಇಲಾಖೆಯ ಅಭಿಯಂತರರಾದ ಮಧು ತಿಳಿಸಿದರು.
ಸಭೆಯಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಿಗಳು, ಗೂಡಂಗಡಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸದಸ್ಯರಾದ ರಾಜೇಶ್ ಗಮನ ಸೆಳೆದರೆ, ಕೇಂದ್ರ ಮಾರುಕಟ್ಟೆ ಬಳಿ ತ್ಯಾಜ್ಯಗಳ ರಾಶಿಯಿಂದ ತೊಂದರೆಯಾಗುತ್ತಿರುವುದಾಗಿ ಸದಸ್ಯೆ ಪೂರ್ಣಿಮಾ ಆಕ್ಷೇಪಿಸಿದರು. ಮನೆಗಳಿಂದ ಕಸ ಸಂಗ್ರಹ ಆರಂಭವಾದ ಬಳಿಕ ತೆರವಾಗಬೇಕಿದ್ದ ಕಸದ ತೊಟ್ಟಿಗಳು ನಗರದ ಕೆಲವು ಬಸ್ಸು ನಿಲ್ದಾಣಗಳ ಪಕ್ಕ ಇನ್ನೂ ಇದೆ ಎಂದು ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ತಿಳಿಸಿದರು.
ಸಭೆಯಲ್ಲಿ ಉಪ ಮೇಯರ್ ಸುಮಿತ್ರಾ ಕೆ., ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಹಾಗೂ ಮನಪಾದ ಕೆಲ ಸದಸ್ಯರು, ಅಕಾರಿಗಳು ಉಪಸ್ಥಿತರಿದ್ದರು.
ಸ್ವಚ್ಛತೆಗಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಮೇಯರ್
ಮಂಗಳೂರು ಮಹಾನಗರ ಪಾಲಿಕೆಯ ಕೆಲವೊಂದು ವಿಭಾಗಗಳಲ್ಲಿ ಅಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಇದರಿಂದಾಗಿ ನಗರದ ಅಭಿವೃದ್ಧಿಗೆ ತೊಡಕಾಗುತ್ತಿದೆ. ನಗರದಲ್ಲಿ ಅನಕೃತ ಗೂಡಂಗಡಿ, ಬೀದಿ ವ್ಯಾಪಾರವನ್ನು ಈಗಾಗಲೇ ತೆರವುಗೊಳಿಸುವಂತೆ ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ ಅಕಾರಿಗಳಿಂದ ಕ್ರಮ ಆಗಿಲ್ಲ. ಸಾರ್ವಜನಿಕರಿಂದಲೇ ಟೈಗರ್ ಕಾರ್ಯಾಚರಣೆಗೆ ಬೇಡಿಕೆ ಬರುತ್ತಿದೆ. ನಗರ ಸ್ವಚ್ಛತೆಗೆ ಸಂಬಂಸಿ ಅಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವುದು ಬೇಡ. ಹಾರಿಕೆ ಉತ್ತರ ಬೇಡ ಎಂದು ಮೇಯರ್ ಹರಿನಾಥ್ ಅಕಾರಿಗಳಿಗೆ ತಾಕೀತು ಮಾಡಿದರು.
ದೇಶದಲ್ಲೇ ಪ್ರಥಮ ಕೋಳಿ ತ್ಯಾಜ್ಯ ಸಂಸ್ಕರಣಾ ಘಟಕ!
ಕೋಳಿ ತ್ಯಾಜ್ಯವನ್ನು ಸಂಸ್ಕರಿಸಿ ಅದನ್ನು ಪ್ರಾಣಿ ಆಹಾರದ ಜತೆ ಬಳಕೆ ಮಾಡುವ ವಸ್ತುವಾಗಿ ಪರಿವರ್ತಿಸುವ ಘಟಕವೊಂದನ್ನು ತೆರೆಯುವ ಮೂಲಕ ದೇಶದಲ್ಲೇ ಪ್ರಥಮ ವೈಜ್ಞಾನಿಕ ಕೋಳಿ ತ್ಯಾಜ್ಯ ಘಟಕವನ್ನು ರಚಿಸಲು ತಾವು ಸಿದ್ಧತೆ ನಡೆಸಿರುವುದಾಗಿ ಯುನಿಕ್ ವೇಸ್ಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥಯ ಪ್ರವೀಣ್ ಸಭೆಯಲ್ಲಿ ಮಾಹಿತಿ ನೀಡಿದರು.
ನಗರದಲ್ಲಿ ದಿನಕ್ಕೆ ಅಂದಾಜು 35 ಟನ್ಗಳಷ್ಟು ಕೋಳಿ ತಾಜ್ಯ ಸಂಗ್ರಹವಾಗುತ್ತಿದ್ದು, ಅದನ್ನು ಗುಂಡಿ ತೋಡಿ ಮಣ್ಣಿನಡಿ ಹಾಕುವ ಪ್ರಕ್ರಿಯೆ ಈವರೆಗೆ ನಡೆಯುತ್ತಿದೆ. ಆದರೆ ನಗರದಲ್ಲಿ ಜಾಗದ ಅಭಾವದಿಂದ ಈ ಪ್ರಕ್ರಿಯೆಗೆ ತೊಡಕಾಗಿದೆ. ಮಾತ್ರವಲ್ಲದೆ ಈ ಪ್ರಕ್ರಿಯೆಯಿಂದ ಸ್ಥಳೀಯರಿಗೂ ತೊಂದರೆಯಾಗುತ್ತಿರುವ ದೂರುಗಳಿವೆ. ಆದರೆ ದಿನನಿತ್ಯದ ಕೋಳಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ಅದರಿಂದ ಪ್ರಾಣಿ ಆಹಾರದ ಜತೆ ಬಳಸುವ ಪರ್ಯಾಯ ವಸ್ತುವಾಗಿ ಪರಿವರ್ತಿಸುವುದು ವೈಜ್ಞಾನಿಕ ಕ್ರಮದಿಂದ ಮನಪಾಕ್ಕೂ ಸಹಕಾರಿಯಾಗಲಿದೆ. 2013ರಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಸಂಸ್ಥೆಯಿಂದ ಈ ಕಾರ್ಯ ನಡೆಸಿ ಯಶಸ್ಸು ಕಾಣಲಾಗಿದೆ. ನಗರದಲ್ಲಿ 40 ಟನ್ ಸಾಮರ್ಥ್ಯದ 2 ಘಟಕಗಳನ್ನು ರಚಿಸಿ ಕೋಳಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುವುದು ಎಂದು ಪ್ರವೀಣ್ ವಿವರ ನೀಡಿದರು.
ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯೊಂದಿಗೆ ಈ ಪ್ರಕ್ರಿಯೆ ನಡೆಯಲಿ ಎಂದು ಮೇಯರ್ ಹರಿನಾಥ್ ಸಲಹೆ ನೀಡಿದರು.







