Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪುಟ್ಟ ಮನೆಯೊಳಗೇ ಮೀನು, ತರಕಾರಿ ಬೆಳೆಸಿ...

ಪುಟ್ಟ ಮನೆಯೊಳಗೇ ಮೀನು, ತರಕಾರಿ ಬೆಳೆಸಿ ಆದಾಯ ಗಳಿಸುತ್ತಿರುವ ಸುಲೈಮಾನ್

ವಾರ್ತಾಭಾರತಿವಾರ್ತಾಭಾರತಿ21 July 2016 5:00 PM IST
share
ಪುಟ್ಟ ಮನೆಯೊಳಗೇ ಮೀನು, ತರಕಾರಿ ಬೆಳೆಸಿ ಆದಾಯ ಗಳಿಸುತ್ತಿರುವ ಸುಲೈಮಾನ್

 ಕೋಟಯ್ಕಲ್, ಜುಲೈ 21:ಇರುವುದು ನಾಲ್ಕೆ ಸೆಂಟ್ಸ್ ಸ್ಥಳ. ಅದರಲ್ಲಿ ಒಂದು ಮನೆ.ಮತ್ತೆ ಎಲ್ಲಿಮೀನು ಸಾಕುವುದು? ಆದರೆ ಮೀನು ಸಾಕಲು ಎಕರೆಗಟ್ಟಲೆ ಸ್ಥಳದ ಅಗತ್ಯವಿಲ್ಲ ಎಂಬುದನ್ನು ಕೇರಳದ ಕೋಟಯ್ಕಲ್‌ನ ಕ್ಲಾರಿ ಮುಚ್ಚಿಕ್ಕಲ್ ಚೋಲ ಎಂಬಲ್ಲಿನ ನಿವಾಸಿ ಸುಲೈಮಾನ್ ನಿಜ ಮಾಡಿ ತೋರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮನೆಯ ಟೆರೇಸ್‌ನಲ್ಲಿ ಅವರು ಮೀನುಕೃಷಿ ಮಾಡುತ್ತಿದ್ದು ಅಷ್ಟೇಅಲ್ಲ ಮನೆಯ ಬೆಡ್‌ರೂಂವರೆಗೂ ಮೀನುಸಾಕಣೆ ನಡೆಸಿ ಕಡಿಮೆ ಸ್ಥಳದಲ್ಲಿ ಮೀನು ಕೃಷಿ ಸಾಧ್ಯ ಎಂದು ತೋರಿಸಿದ್ದಾರೆ.

ಸುಲೈಮಾನ್ ಪೆಯಿಟಿಂಗ್ ಕೆಲಸಮಾಡುತ್ತಿದ್ದು ಇವರು ಮೀನು ಸಾಕಣೆಗಿಳಿದು ಇಪ್ಪತ್ತು ವರ್ಷ ಕಳೆದಿವೆ. ಸ್ಥಳದ ಅಭಾವ ಇರುವುದರಿಂದ ಟೆರೆಸ್‌ನಲ್ಲಿ ಟ್ಯಾಂಕ್ ಕಟ್ಟಿಸಿ ಮೀನು ಸಾಕಲು ಸುಲೈಮಾನ್ ನಿರ್ಧರಿಸಿದ್ದರು. ಇದಕ್ಕೆ ಅಗತ್ಯವಾದ ಸಿದ್ಧತೆಗಳೊಂದಿಗೆಯೇ ಮನೆ ಕಟ್ಟಿಸಿದ್ದೇನೆ ಎಂದು ಅವರು ಹೇಳುತ್ತಾರೆ.

 ಪಂಚಾಯತ್‌ನಿಂದ ಸಿಗುವ ಮೀನುಮರಿಗಳನ್ನು ತಂದು ಮನೆಗೆ ಸೇರಿದಂತೆ ಕಟ್ಟಲಾಗಿದ್ದ ಒಂದು ಟ್ಯಾಂಕ್‌ನಲ್ಲಿ ಸಾಕುತ್ತಾರೆ. ನಂತರ ಅದು ಬೆಳೆದಾಗ ಟೆರೆಸ್‌ನ ಟ್ಯಾಂಕ್‌ಗೆ ಹಾಕುತ್ತಾರೆ. ಮೀನು ಸಾಕಲು ಅಗತ್ಯವಾದ ನೀರನ್ನು ಬೋರ್‌ವೆಲ್ ನಿಂದ ಪಡೆಯುತ್ತಿದ್ದಾರೆ. ನೀರಿನ ಅಭಾವವಾಗದಂತೆ ಸೂಕ್ತ ಬದಲಿ ವ್ಯವಸ್ಥೆಯನ್ನು ಸುಲೈಮಾನ್ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಪೆಯಿಟಿಂಗ್ ವಸ್ತುಗಳನ್ನು ಇಡುವ ಸ್ಥಳ.ಬೆಡ್‌ರೂಂ ಹೀಗೆ ಎಲ್ಲೆಂದರಲ್ಲಿ ಮೀನು ಸಾಕುವ ತೊಟ್ಟಿಗಳನ್ನು ಇರಿಸಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.

  ಮೀನುಸಾಕಣೆಯಿಂದ ಸಿಗುವ ವರಮಾನಕ್ಕಿಂತಲೂ ಅದನ್ನು ಸಾಕುವ ತೃಪ್ತಿ ಮುಖ್ಯ ಎನ್ನುವ ಸುಲೈಮಾನ್ ಪರಿಶ್ರಮ, ಖರ್ಚು ಹೆಚ್ಚಾದ ರೂ ಮೀನು ಸಾಕಣೆಯಿಂದ ಪ್ರತಿಯೊಂದು ಸೀಸನ್‌ನಲ್ಲಿ ಸಾಕಷ್ಟು ವರಮಾನ ಸಿಗುತ್ತದೆ ಎನ್ನುತ್ತಾರೆ. ಗೆಳೆಯರ ಮುಖಾಂತರ ಮೀನು ಮಾರಾಟ ಮಾಡಿಸುತ್ತಾರೆ. ಮಾತ್ರವಲ್ಲ ಸುಲೈಮಾನ್ ಟೆರೆಸ್‌ನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಬೆಂಡೆಕಾಯಿ, ಹಸಿರು ಮೆಣಸು, ಕ್ಯಾಬೇಜ್, ಕೇನೆ, ಚೇವು ಇತ್ಯಾದಿ ತರಕಾರಿಗಳನ್ನು ಅವರು ಬೆಳೆಯುತ್ತಾರೆ. ಮೀನು ಸಾಕಣೆಯ ಟ್ಯಾಂಕ್‌ನ ಎಡೆಯಲ್ಲಿ ಉಳಿಯುವ ಸ್ಥಳವನ್ನು ಅವರು ಬಳಸಿಕೊಂಡಿದ್ದಾರೆ.

   ಇಷ್ಟೇ ಅಲ್ಲ ಕೋಳಿ, ಬಾತುಕೋಳಿ ಸಾಕುವ ಮೂಲಕ ಅವರು ಗಮನಸೆಳೆದಿದ್ದಾರೆ. ಈ ಕೆಲಸದಲ್ಲಿ ಅವರಿಗೆ ಅಮ್ಮ. ಪತ್ನಿ ಐವರು ಮಕ್ಕಳನ್ನೊಳಗೊಂಡ ಸಂಸಾರ ನೆರವಾಗುತ್ತಿದೆ. ಹತ್ತನೆ ಕ್ಲಾಸ್‌ನಲ್ಲಿ ಕಲಿಯುತ್ತಿರುವ ಅಬ್ದುಸ್ಸಲಾಂಗೆ ಮೀನುಸಾಕಣೆಯೆಂದರೆ ಬಲು ಇಷ್ಟ. ಕೃಷಿ ಮಾಡಲು ಮಣ್ಣಲ್ಲ ಮನಸ್ಸು ಅಗತ್ಯವೆಂದು ಸುಲೈಮಾನ್ ಹೇಳುತ್ತಾರೆಂದು ವರದಿ ವಿವರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X