Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘‘ದಲಿತರ ಮೇಲಿನ ಹಲ್ಲೆಗೆ ಪರೋಕ್ಷ ಸಹಕಾರ...

‘‘ದಲಿತರ ಮೇಲಿನ ಹಲ್ಲೆಗೆ ಪರೋಕ್ಷ ಸಹಕಾರ ನೀಡಿದ ಗುಜರಾತ್ ಪೊಲೀಸರು’’

ಸತ್ಯ ಶೋಧನಾ ವರದಿ

ವಾರ್ತಾಭಾರತಿವಾರ್ತಾಭಾರತಿ21 July 2016 5:45 PM IST
share
‘‘ದಲಿತರ ಮೇಲಿನ ಹಲ್ಲೆಗೆ ಪರೋಕ್ಷ ಸಹಕಾರ ನೀಡಿದ ಗುಜರಾತ್ ಪೊಲೀಸರು’’

ಅಹ್ಮದಾಬಾದ್,ಜು.21 : ಸತ್ತ ಗೋವುಗಳ ಚರ್ಮ ಸುಲಿದಿದ್ದಾರೆಂಬ ಆರೋಪ ಹೊರಿಸಿ ನಾಲ್ಕು ಮಂದಿ ದಲಿತರ ಮೇಲೆ ಸ್ವಘೋಷಿತ ನೈತಿಕ ಪೊಲೀಸರಿಂದ ನಡೆದ ಅಮಾನುಷ ಹಲ್ಲೆಯನ್ನು ಪೊಲೀಸರು ತಡೆಯಬಹುದಾಗಿತ್ತು ಹಾಗೂ ಹಲ್ಲೆಗೆ ಪೊಲೀಸರೇ ಪರೋಕ್ಷ ಸಹಕಾರ ನೀಡಿದ್ದರು, ಎಂದು ಘಟನೆಯ ಬಗೆಗೆ ಎಂಟು ಮಂದಿ ಸ್ವತಂತ್ರ ದಲಿತ ಹಕ್ಕುಗಳ ಕಾರ್ಯಕರ್ತರು ಸಿದ್ಧಪಡಿಸಿರುವ ಸತ್ಯ ಶೋಧನಾ ವರದಿಯಲ್ಲಿ ಹೇಳಲಾಗಿದೆ.

ಸ್ವಘೋಷಿತ ಗೋ ರಕ್ಷಕರು ಸಂತ್ರಸ್ತರನ್ನು ಕಾರೊಂದರಲ್ಲಿ ಕುಳ್ಳಿರಿಸಿ ಹೋಗುತ್ತಿದ್ದಾಗ ಅವರನ್ನು ಪೊಲೀಸ್ ವಾಹನವೊಂದು ತಡೆದರೂ, ಪೊಲೀಸರು ದುಷ್ಕರ್ಮಿಗಳೊಂದಿಗೆ ಮಾತನಾಡಿ ಮುಂದೆ ಸಾಗಲು ಅನುಮತಿಸಿದ್ದರು, ಎಂದು ಮೂರು ಪುಟಗಳ ಸತ್ಯ ಶೋಧನಾ ವರದಿ ತಿಳಿಸಿದೆ.

ಉನಾ ಪೊಲೀಸರು ಘಟನೆಯ ಬಗ್ಗೆ ಎಫ್ ಐ ಆರ್ ದಾಖಲಿಸಲು ಆರು ಗಂಟೆಗಳನ್ನೇಕೆ ತೆಗೆದುಕೊಂಡರು ಹಾಗೂ ಸಂತ್ರಸ್ತರ ಹೆತ್ತವರು ಅವರನ್ನು ನೋಡಲು ಜುಲೈ 11 ರ ರಾತ್ರಿಹೋಗದಂತೆ ಪೊಲೀಸರು ಏಕೆ ತಡೆದರು, ಎಂದು ವರದಿ ಪ್ರಶ್ನಿಸಿದೆ.

ಮೆಹಸಾನಾದ ಕಾನೂನು ವಿದ್ಯಾರ್ಥಿ ಸುಬೋಧ್ ಪರ್ಮಾರ್, ದಲಿತ ಕಾರ್ಯಕರ್ತರಾದ ಕಿರಿತ್ ರಾಥೋಡ್, ಕಾಂತಿಭಾಯಿ ಪರ್ಮಾರ್ ಹಾಗೂ ಕೌಶಿಕ್ ಪರ್ಮಾರ್ ಸತ್ಯ ಶೋಧನಾ ತಂಡದಲ್ಲಿದ್ದರು.

ವರದಿಯಲ್ಲಿ ತಿಳಿಸಿದಂತೆ ಯುವಕರ ಮೇಲೆ ಹಲ್ಲೆ ಮೊದಲು ಮೋಟಾ ಸಮಾಧಿಯಾಲದಲ್ಲಿ ಜುಲೈ 11 ರ ಬೆಳಗ್ಗೆ ಆರಂಭವಾಗಿತ್ತು. ಬಾಲು ಭಾಯಿಯ ಪುತ್ರರಾದ ರಮೇಶ್ ಹಾಗೂ ವೇಶ್ರಮ್ ಹಾಗೂ ಆತನ ಸೋದರಳಿಯರಾದಬೆಚಾರ್ ಹಾಗೂ ಅಶೋಕ್ ಗ್ರಾಮದಲ್ಲಿ ಸತ್ತ ದನಗಳ ಚರ್ಮ ಸುಲಿಯುತ್ತಿದ್ದಾಗ ಆ ದಾರಿಯಾಗಿ ಹಾದು ಹೋದ ಕಾರೊಂದು ಕೆಲ ನಿಮಿಷಗಳ ನಂತರ ಮತ್ತೆರಡು ಕಾರುಗಳೊಂದಿಗೆ ಹಿಂದಿರುಗಿದ್ದವು, ಅದರಲ್ಲಿ ದೊಣ್ಣೆ ಹಾಗೂ ಕಬ್ಬಿಣದ ಪೈಪುಗಳನ್ನು ಹಿಡಿದುಕೊಂಡಿದ್ದ 35 ಮಂದಿಯಿದ್ದರು ಎಂದು ವರದಿ ಹೇಳಿದೆ. ಯುವಕರು ತಾವು ಅದಾಗಲೇ ಸತ್ತಿರುವ ದನಗಳ ಚರ್ಮ ಸುಲಿಯುತ್ತಿರುವುದಾಗಿ ಹೇಳಿಕೊಂಡರೂ ಕೇಳದೆ ಅವರ ಮೇಲೆ ಸ್ವಘೋಷಿತ ಗೋರಕ್ಷಕರು ಹಲ್ಲೆ ನಡೆಸಿದರೆಂದು ವರದಿ ತಿಳಿಸಿದೆ.

ಆರೋಪಿಗಳು ಘಟನೆಯ ವೀಡಿಯೊ ಚಿತ್ರೀಕರಣ ನಡೆಸಿ ನಂತರ ಸಂತ್ರಸ್ತರನ್ನು ಉನಾ ಪೊಲೀಸ್ ಠಾಣೆಯಲ್ಲಿ ಬಿಟ್ಟರೂಪೊಲೀಸರು ದಾಳಿಕೋರರನ್ನು ಬಂಧಿಸದೆ ಸಂತ್ರಸ್ತರನ್ನು ಠಾಣೆಯಲ್ಲಿ ಮುಂದಿನ ಕೆಲ ಗಂಟೆಗಳ ಕಾಲ ಉಳಿಸಿದ್ದರು, ಎಂದು ವರದಿ ಹೇಳಿದೆ.

ಮೇಲಾಗಿ ದಾಳಿಕೋರರು ಹಲವು ಮಂದಿಯಿದ್ದರೂ ಪೊಲೀಸರು ಕೇವಲ ಆರು ಮಂದಿಯನ್ನು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆಂದೂ ವರದಿ ತಿಳಿಸಿದೆ.

ಘಟನೆಯ ನಂತರ ಮೋಟಾ ಸಮಾಧಿಯಾಲ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಒಂದನ್ನು ಬರ ಹೇಳಿದ್ದರೂ ಪೊಲೀಸರುಅವರನ್ನು ಉನಾ ಪಟ್ಟಣಕ್ಕೆ ಕರೆದುಕೊಂಡು ಹೋಗುವ ಬದಲು ಗಿರಿ ಗಡ್ಡಾಗೆ ಹೋಗುವಂತೆ ತಾಕೀತು ಮಾಡಿದ್ದರೆಂದು ವರದಿಯಲ್ಲಿ ವಿವರಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X