Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುಜರಾತ್ ದಲಿತ ದೌರ್ಜನ್ಯ ಸಂತ್ರಸ್ತರ...

ಗುಜರಾತ್ ದಲಿತ ದೌರ್ಜನ್ಯ ಸಂತ್ರಸ್ತರ ನಿವಾಸಕ್ಕೆ ರಾಹುಲ್ ಭೇಟಿ

ವಾರ್ತಾಭಾರತಿವಾರ್ತಾಭಾರತಿ21 July 2016 6:26 PM IST
share
ಗುಜರಾತ್ ದಲಿತ ದೌರ್ಜನ್ಯ ಸಂತ್ರಸ್ತರ ನಿವಾಸಕ್ಕೆ ರಾಹುಲ್ ಭೇಟಿ

ಉನಾ, ಜು.21: ಸತ್ತ ದನದ ಚರ್ಮ ಸುಲಿದುದಕ್ಕಾಗಿ ಬರ್ಬರವಾಗಿ ಥಳಿಸಲ್ಪಟ್ಟಿದ್ದ ನಾಲ್ವರು ದಲಿತ ಸಹೋದರರ ಮನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಭೇಟಿ ನೀಡಿದ್ದಾರೆ. ಕುಟುಂಬಕ್ಕೆ ರೂ. 5 ಲಕ್ಷ ಸಹಾಯವನ್ನು ಅವರು ಘೋಷಿಸಿದ್ದಾರೆ.
ಇಂದು ಮುಂಜಾನೆ ಗುಜರಾತ್‌ಗೆ ವಿಮಾನದಲ್ಲಿ ಪ್ರಯಾಣಿಸಿದ ರಾಹುಲ್, ನೇರವಾಗಿ ಉನಾದ ಸಮಾಧಿಯಾಲ ಗ್ರಾಮದಲ್ಲಿರುವ ದಲಿತ ಸೋದರರ ತಂದೆ ಬಾಬುಭಾಯಿ ಸರ್ವೈಯ ಎಂಬವರ ಮನೆಗೆ ತೆರಳಿ, ಕುಟುಂಬದೊಂದಿಗೆ 40 ನಿಮಿಷ ಕಳೆದರು.
ಕಾಂಗ್ರೆಸ್‌ನ ಗುಜರಾತ್ ಪ್ರಭಾರಿ ಗುರುದಾಸ್ ಕಾಮತ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್‌ಸಿಂಹ ಸೋಳಂಕಿ, ಕಾಂಗ್ರೆಸ್ ಹಾಗೂ ದಲಿತ ನಾಯಕಿ ಕುಮಾರಿ ಸೆಲ್ಜಾ ಹಾಗೂ ಪಕ್ಷದ ಇತರ ನಾಯಕರು ಅವರ ಜೊತೆಗಿದ್ದರು.
ರಾಹುಲ್ ಗ್ರಾಮಕ್ಕೆ ಬಂದುದು ತಿಳಿಯುತ್ತಿದ್ದಂತೆ ಹಲವು ಮಂದಿ ಸಮಾಧಿಯಾಲಕ್ಕೆ ಧಾವಿಸಿದ್ದರು.
ಕುಟುಂಬದೊಂದಿಗೆ ಮುಕ್ತ ಮಾತುಕತೆ ಮುಂದುವರಿಯುತ್ತಿದ್ದಂತೆಯೇ ರಾಹುಲ್, ಇಂತಹ ಘಟನೆ ಮೊದಲ ಬಾರಿ ನಡೆದುದೇ ಅಥವಾ ದೀರ್ಘ ಕಾಲದಿಂದ ಅಲ್ಲಿ ಅಂತಹ ಜಾತಿ ತಾರತಮ್ಯವಿದೆಯೇ? ಎಂದು ಬಾಬುಭಾಯಿಯ ಸೋದರ ಸಂಬಂಧಿ ಜಿತು ಸರ್ವೈಯ ಎಂಬವರಲ್ಲಿ ಪ್ರಶ್ನಿಸಿದರು.
ಇದರಲ್ಲಿ ಹೊಸದೇನೂ ಇಲ್ಲ. ಇಲ್ಲಿ ಇದು ಮಾಮೂಲು ಎಂದು ಸರ್ವೈಯ ಉತ್ತರಿಸಿದರು.
20ರ ಹರೆಯದ ಜಿತು, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಕುಟುಂಬದ ಏಕಮಾತ್ರ ವಿದ್ಯಾವಂತ ಸದಸ್ಯನಾಗಿದ್ದಾರೆ. ಬೇರೆ ಕೆಲಸದ ಅವಕಾಶವಿಲ್ಲದ ಕಾರಣ ತಾವು ಚರ್ಮೋದ್ಯಮಕ್ಕಾಗಿ ಸತ್ತ ಪ್ರಾಣಿಗಳ ಚರ್ಮ ಸುಲಿಯುವ ಉದ್ಯೋಗದಲ್ಲಿ ತೊಡಗಿದ್ದೇವೆಂದು ಅವರು ತಿಳಿಸಿದರು.
ತಮಗೆ ಹಣ ಬೇಡ. ಆದರೆ, ಬದುಕಿರಲು, ಜೀವನ ಸಾಗಿಸಲು ಬೆಂಬಲ ಬೇಕು. ತಾವು ಸಮಾಜದ ಕೊಳೆಯನ್ನು ಸ್ವಚ್ಛಗೊಳಿಸುತ್ತೇವೆ. ಆದರೆ ಸಮಾಜ ಅದಕ್ಕೆ ಪ್ರತಿಯಾಗಿ ಹಿಂಸೆಯನ್ನು ನೀಡಿದೆಯೆಂದು ಜಿತು ಹೇಳಿದರು.
ರಾಹುಲ್, ಕುಟುಂಬದವರೊಂದಿಗೆ ಕುಳಿತು ಬಾಬುಭಾಯಿಯ ಕೈಗಳನ್ನು ಹಿಡಿದುಕೊಂಡಾಗ ಎಲ್ಲರೂ ಭಾವುಕರಾದರು. ಅವರು ದಲಿತ ಕುಟುಂಬದೊಂದಿಗೆ ಚಹಾ ಸೇವಿಸಿದರು. (ಸಾಮಾನ್ಯವಾಗಿ ದಲಿತರಲ್ಲಿ ಮೇಲ್ಜಾತಿಯವರು ಅನ್ನ-ಪಾನ ಸೇವಿಸುವುದಿಲ್ಲ).
ಗ್ರಾಮದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆಯ ವೀಡಿಯೊವನ್ನು ರಾಹುಲ್ ವೀಕ್ಷಿಸಿದರು. ಬಳಿಕ ಅವರು ರಾಜಕೋಟ ನಗರಕ್ಕೆ ತೆರಳಿ, ಘಟನೆಯನ್ನು ಪ್ರತಿಭಟಿಸಿ ವಿಷ ಸೇವಿಸಿದ್ದ ದಲಿತ ಯುವಕರನ್ನು ಅಲ್ಲಿನ ನಾಗರಿಕ ಆಸ್ಪತ್ರೆಯಲ್ಲಿ ಭೇಟಿಯಾದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X