ಪ್ರವಾದಿ ಇಬ್ರಾಹೀಂರ ತ್ಯಾಗಪೂರ್ಣ ಬದುಕು ಮಾದರಿಯಾಗಲಿ: ಮೌ. ಅಬ್ದುಸ್ಸಲಾಮ್
ಮಂಗಳೂರು, ಜು.21: ತನ್ನ ಬದುಕನ್ನು ಸಂಪೂರ್ಣವಾಗಿ ದೇವ ಮಾರ್ಗದಲ್ಲಿ ಸಮರ್ಪಿಸಿದ ಪ್ರವಾದಿ ಇಬ್ರಾಹೀಂ ಮತ್ತು ಅವರ ಕುಟುಂಬದ ಮಾದರಿ ಜೀವನವನ್ನು ಅಳವಡಿಸಿ ಬದುಕಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ಕರೆ ನೀಡಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯು ಆಯೋಜಿಸಿದ ಹಜ್ಜ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌ.ಯಹ್ಯಾ ತಂಙಳ್ ಮದನಿ ಹಾಗೂ ಜಾಮಿಯಾ ಮಸೀದಿ ಕುದ್ರೋಳಿ ಇದರ ಖತೀಬ್ ಮುಫ್ತಿ ಮನ್ನಾನ್ ಸಾಹೇಬ್ ಅವರು ಹಜ್ಜ್ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅಬ್ದುಲ್ ಗಫೂರ್ ಕುಳಾಯಿ ಸ್ವಾಗತಿಸಿದರು. ಆರಂಭದಲ್ಲಿ ಅಬ್ದುಲ್ ಮಜೀದ್ ಕಿರಾಅತ್ ಪಠಿಸಿದರು. ಖಾಸಿಮ್ ಕಾರ್ಯಕ್ರಮ ನಿರೂಪಿಸಿದರು.
Next Story