Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಬಾಲಿ ಕ್ವಿಕ್ ರಿವ್ಯೂವ್

ಕಬಾಲಿ ಕ್ವಿಕ್ ರಿವ್ಯೂವ್

ಈ ಚಿತ್ರ ಕಟ್ಟಾ ರಜನಿ ಅಭಿಮಾನಿಗಳಿಗೆ

ವಾರ್ತಾಭಾರತಿವಾರ್ತಾಭಾರತಿ22 July 2016 11:41 AM IST
share
ಕಬಾಲಿ ಕ್ವಿಕ್ ರಿವ್ಯೂವ್

ಕಬಾಲಿಯ ರಜನೀಕಾಂತ್ ಜೀವನದಲ್ಲಿ ಒಂದು ದೊಡ್ಡ ಉದ್ದೇಶ ಈಡೇರಿಸಲು ಹೊರಟವನು. ವರ್ಷಗಳ ಹಿಂದೆ ಆತನಿಗೆ ಅನ್ಯಾಯವಾಗಿತ್ತು. ಅದಕ್ಕಾಗಿ ಕಬಾಲೀಸ್ವರಮ್ (ಕಬಾಲಿಯಲ್ಲಿ ರಜನೀಕಾಂತ್) ಸೇಡು ತೀರಿಸಲು ಹೊರಟವನು. ಆದರೆ ಆತ ಅದನ್ನು ಮಾಡುವ ಮೊದಲು ಪ್ರೇಕ್ಷಕಗಡಣವು ಸಂಪೂರ್ಣ ಎರಡೂವರೆ ಗಂಟೆಗಳ ಕಾಲ ರಜನೀಕಾಂತ್ ಸ್ಟೈಲ್, ಡೈಲಾಗ್ ಹಾಗೂ ನೃತ್ಯಗಳನ್ನು ಮನಸಾರೆ ತಣಿಯಬಹುದು.

ಕಬಾಲಿ ಬಗ್ಗೆ :

ಕಬಾಲಿ ಒಬ್ಬ ಕೆಲಸಗಾರನಾಗಿದ್ದು ತನ್ನ ಪತ್ನಿ (ರಾಧಿಕಾ ಆಪ್ಟೆ) ಹಾಗೂ ಪುತ್ರಿಯೊಂದಿಗೆ ಸುಖವಾಗಿ ಬಾಳುತ್ತಿದ್ದನು. ಆದರೆ ಬಹುಬೇಗನೇ ಎಲ್ಲವೂ ತಲೆಕೆಳಗಾಗಿ ನಮ್ಮ ಮುಗ್ಧ, ಶ್ರಮಜೀವಿ ಮನುಷ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ತನ್ನ ಜೀವನವನ್ನು ಆತ ಹೇಗೆ ಕಾಪಾಡಿಕೊಳ್ಳುತ್ತಾನೆ ಹಾಗೂ ಮಲೇಷ್ಯಾದಲ್ಲಿ ತುಳಿತಕ್ಕೊಳಗಾಗಿರುವ ತಮಿಳರಿಗೆ ಹೇಗೆ ಸಹಾಯ ಮಾಡುತ್ತಾನೆಂಬುದೇ ಕಬಾಲಿ ಚಿತ್ರದ ಕಥೆ.

ರಜನೀಕಾಂತ್ ಅವರೇ ಈ ಚಿತ್ರದ ಜೀವಾಳ. ರಜನಿಯ ಚರಿಷ್ಮಾವೇ ಚಿತ್ರದಾದ್ಯಂತ ತನ್ನ ಛಾಪನ್ನು ಮೂಡಿಸಿದೆ. ಕೆಲವೊಂದು ಫ್ಲಾಶ್ ಬ್ಯಾಕ್ ದೃಶ್ಯಗಳಿಂದ ಹಿಡಿದು, ಡಾನ್ ಆಗಿ ತನ್ನ ವಯಸ್ಸಿನ ವ್ಯಕ್ತಿಯಾಗಿಯೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ರಜನೀಕಾಂತ್ ಎಲ್ಲಿಯೂ ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ. ಹಿಟ್ ಹಾಡು ನೆರುಪ್ಪುಡಾ ಹಾಡಿನ ದೃಶ್ಯ ಆರಂಭವಾಗುವಾಗ ಚಿತ್ರಮಂದಿರ ತುಂಬಾ ಶಿಳ್ಳೆ ಹಾಗೂ ಚಪ್ಪಾಳೆಗಳೇ ಕೇಳಿಸುತ್ತವೆ.
ಚಿತ್ರದ ಇತರ ತಾರಾಗಣವೂ ಉತ್ತಮವಾಗಿದ್ದು ರಾಧಿಕಾ ಆಪ್ಟೆ ಹಾಗೂ ಧನ್ಸಿಕಾ ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಸಫಲರಾಗಿದ್ದಾರೆ. ರಜನೀಕಾಂತ್ ಪತ್ನಿಯಾಗಿ ರಾಧಿಕಾರನ್ನು ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವುದಲ್ಲದೆ, ರಜನಿಯ ಈ ಹಿಂದಿನ ಚಿತ್ರಗಳಲ್ಲಿ ಹೀರೋಯಿನ್ ಗಳಿಗೆ ಸಣ್ಣ ಪಾತ್ರಗಳು ಮಾತ್ರವಿದ್ದುದರಿಂದ ಈ ಚಿತ್ರದಲ್ಲಿ ಆ ನಿಟ್ಟಿನಲ್ಲಿ ಬದಲಾವಣೆ ಗೋಚರಿಸುತ್ತದೆ. ರಜನೀಕಾಂತ್ ಹಾಗೂ ರಾಧಿಕಾ ಬಹಳ ಕಾಲದ ನಂತರ ಭೇಟಿಯಾಗುವ ದೃಶ್ಯ ನಿಮ್ಮನ್ನು ರೋಮಾಂಚನಗೊಳಿಸುವುದು ಖಂಡಿತಾ.

ಆದರೆ ಕಬಾಲಿಯ ನಿಧಾನಗತಿ ಹಾಗೂ ತೇಪೆಭರಿತ ನಿರೂಪಣೆ ಸ್ವಲ್ಪ ಮಟ್ಟಿಗೆ ನಿರಾಶಾದಾಯಕ. ಕೆಲವೊಮ್ಮೆ ಚಿತ್ರ ಮಂದಗತಿಯಲ್ಲಿ ಮುಂದುವರಿಯುತ್ತಿದೆಯೇನೋ ಎಂಬ ಭಾವನೆ ಬಂದು ಪ್ರೇಕ್ಷಕನ ಗಮನ ಬೇರೆಡೆಗೆ ಹರಿಯುವಂತಾಗುತ್ತದೆ. ಇದೊಂದು ಕಾರಣದಿಂದ ರಜನಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಈ ಚಿತ್ರ ಜನರ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು.

ಆದರೂ ರಜನಿಯ ಕಟ್ಟಾ ಅಭಿಮಾನಿಗಳು ಈ ಚಿತ್ರದ ಪ್ರತಿ ಕ್ಷಣವನ್ನೂ ಆಸ್ವಾದಿಸಬಹುದು. ಇತರರಿಗೂ ಈ ಚಿತ್ರ ಇಷ್ಟವಾಗಬಹುದಾದರೂ ಕೆಲವೊಮ್ಮೆ ಚಿತ್ರದ ಗತಿ ಬಹಳ ನಿಧಾನವಾಗಿದೆಯೆಂಬ ಭಾವನೆ ಕಾಡಬಹುದು.

ಕೃಪೆ : ದಿ ಇಂಡಿಯನ್ ಎಕ್ಸ್‌ಪ್ರೆಸ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X