ದಯಾಶಂಕರ್ ಬಂಧನಕ್ಕೆ ಆಗ್ರಹಿಸಿ ಧರಣಿ
![ದಯಾಶಂಕರ್ ಬಂಧನಕ್ಕೆ ಆಗ್ರಹಿಸಿ ಧರಣಿ ದಯಾಶಂಕರ್ ಬಂಧನಕ್ಕೆ ಆಗ್ರಹಿಸಿ ಧರಣಿ](https://www.varthabharati.in/sites/default/files/images/articles/2016/07/22/DSC_2769.gif)
ಮಂಗಳೂರು, ಜು.22; ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ದಯಾಶಂಕರ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಮಿತಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿತು.
ಧರಣಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು, ಜಿಲ್ಲಾ ಸಂಯೋಜಕ ನಾರಾಯಣ ಬೋಧಿ, ಜಿಲ್ಲಾ ಮುಖಂಡ ಮಹಾಬಲ ಮೂಡುಬಿದಿರೆ, ರಾಕೇಶ್ ಕುಂದರ್, ದಸಂಸ ಮುಖಂಡ ಆರ್.ಸಿ.ಅಮೀನ್ ಉಪಸ್ಥಿತರಿದ್ದರು.
Next Story