ಪೊಲೀಸರ ಕೊಲೆಯತ್ನ: ಆರೋಪಿ ಬಂಧನ
![ಪೊಲೀಸರ ಕೊಲೆಯತ್ನ: ಆರೋಪಿ ಬಂಧನ ಪೊಲೀಸರ ಕೊಲೆಯತ್ನ: ಆರೋಪಿ ಬಂಧನ](https://www.varthabharati.in/sites/default/files/images/articles/2016/07/22/MUHAMMAD RIYAAZ.jpg)
ಕಾಸರಗೋಡು, ಜು.22: ಹೊಳೆಗೆ ತಳ್ಳಿ ಪೊಲೀಸರ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಳು ಮಾಫಿಯಾ ಜಾಲದ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿದ್ಯಾನಗರ ಕೋಫೆಯ ಮುಹಮ್ಮದ್ ರಿಯಾಝ್ (30) ಎಂದು ಗುರುತಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ತಳಂಗರೆ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಕರಾವಳಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ್ದ ಪೊಲೀಸ್ ರಂಜಿತ್ ಮತ್ತು ರತೀಶ್ಚಂದ್ರನ್ರ ಮೇಲೆ ಹಲ್ಲೆ ನಡೆಸಿದ ತಂಡವು ದೋಣಿಯಲ್ಲಿ ಇಬ್ಬರು ಪೊಲೀಸರನ್ನು ಬಲವಂತವಾಗಿ ಎಳೆದೊಯ್ದು ಹೊಳೆಗೆ ತಳ್ಳಿದ್ದರು. ಆದರೂ ಈಜಿ ದಡ ಸೇರಿದ ಪೊಲೀಸರ ಮೇಲೆ ಮತ್ತೆ ಹಲ್ಲೆ ನಡೆಸಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ರಕ್ಷಿಸಿದ್ದರು.
ಘಟನೆಗೆ ಸಂಬಂಧಪಟ್ಟಂತೆ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.
Next Story