ಕ್ರೀಡಾಭಾರತಿಯಿಂದ ‘ಜೀಜಾಬಾಯಿ ಪ್ರಶಸ್ತಿ’ ಪ್ರದಾನ

ಮಂಗಳೂರು, ಜು.22: ಕ್ರೀಡಾ ಭಾರತಿ ಮಂಗಳೂರು ವಿಭಾಗ ಹಾಗೂ ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಶುಕ್ರವಾರ ನಗರದ ಸಂಘ ನಿಕೇತನದಲ್ಲಿ ಕ್ರೀಡಾಭಾರತಿ ಪ್ರತಿಭಾ ಪುರಸ್ಕಾರ ಹಾಗೂ ಜೀಜಾಬಾಯಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಣಿಪಾಲ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ, ದೈಹಿಕ ಶಿಕ್ಷಣ ಎಂಬುದು ಕೂಡ ಮನೋ ವಿಕಾಸದ ಮಾನಸಿಕ ಶಿಕ್ಷಣವೇ ಆಗಿದೆ ಎಂದರು. ಶಾಸಕ ಜೆ.ಆರ್.ಲೋಬೊ ಕಾರ್ಯ ಕ್ರಮ ಉದ್ಘಾಟಿಸಿದರು. ಸಾಧಕರಾದ ಜಗದೀಶ್ ಕುಂಬ್ಳೆ ಮತ್ತು ಅವರ ಸಹೋದರಿ ಕಮಲಾರಿಗೆ, ಅಭಿಷೇಕ್ ಶೆಟ್ಟಿಯವರ ತಾಯಿ ತುಳಸಿ ಶೆಟ್ಟಿ, ರಕ್ಷಿತ್ ಎಸ್. ಅವರ ತಾಯಿ ಗೀತಾ ಮತ್ತು ತಂದೆ ಶಂಕರ್, ಸಂಧ್ಯಾ ಸಿ.ಆರ್. ಅವರ ತಾಯಿ ಕಲಾವತಿ ಮತ್ತು ತಂದೆ ರಾಜು, ದೀಕ್ಷಾ ಕೆ. ಅವರ ತಾಯಿ ಪ್ರೇಮಾ ಮತ್ತು ತಂದೆ ಕೊರಗಪ್ಪ ಗೌಡ, ಎಸ್.ಬಿ.ಸುಪ್ರಿಯಾರ ತಾಯಿ ಕೆ.ಸಿ.ವಾಣಿ ಮತ್ತು ಬಸವರಾಜು ಎಸ್.ಎನ್. ಅವರಿಗೆ ‘ಜೀಜಾಬಾಯಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿಶೇಷ ಸಾಮರ್ಥ್ಯ ಮಕ್ಕಳಾದ ಧನಾನ್ ಜೆ. ಸಲ್ಡಾನ ಮತ್ತು ಮೊಯ್ದಿನ್ ತಸ್ಮನ್ ಮುಹಮ್ಮದ್ರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಕರಾದ ಸೇವಂತಿ, ತುಕರಾಮ ಹೊಳ್ಳ, ಚಿದಾನಂದ ರೈ, ಸುೀರ್ ಹೆಗ್ಡೆ, ಚಂದ್ರಶೇಖರ್ ರೈ, ಆ್ಯಗ್ನೆಸ್ ಗೋಮ್ಸ್, ರಾಘವ ವೈದ್ಯ, ಕೆ.ಹರಿಣಾಕ್ಷಿ, ರಮೇಶ್ ಕಾರಂತ್, ಜಯಶ್ರೀ, ಪೃಥ್ವಿರಾಜ್ ಜೈನ್, ಕರುಣಾಕ್ಷಿಯವರನ್ನು ಸನ್ಮಾನಿಸಲಾಯಿತು. ್ಯಾತ ಕ್ರೀಡಾಪಟುವಾಗಿದ್ದು, ತರಬೇತು ದಾರರಾಗಿ ಸೇವೆ ಸಲ್ಲಿಸುತ್ತಿರುವ ಸಾಧಕ ಪ್ರೇಮನಾಥ ಉಳ್ಳಾಲ್, ಲಕ್ಷ್ಮಣ್ ರೈ, ಮಹೇಶ್, ದೀನಾಮಣಿ, ಸುಮನಾ ಶ್ರೀಕಾಂತ್, ಪ್ರತೀಪ್ಕುಮಾರ್, ಡಿ.ಎಂ.ಅಸ್ಲಮ್ರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾ ಭಾರತಿಯ ಸಾಧಕರಾದ ಗೀತಾಬಾಯಿ, ಜಯಪ್ಪ ಲಮಾಣಿ, ಪ್ರಣಾಳಿ ಶೆಟ್ಟಿ, ಆರತಿ ಶೆಟ್ಟಿ, ರಾಜ್ಕುಮಾರ್ ಕೋಟ್ಯಾನ್ರನ್ನು ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಲ್ಲದೆ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿಶೇಷ ಮಕ್ಕಳು, ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ವಿದ್ಯಾರ್ಥಿ ಸಾಧಕ ರನ್ನು ಗೌರವಿಸಲಾಯಿತು. ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು.್ರೀಡಾ ಭಾರತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಹೃದ್ರೋಗ ತಜ್ಞ ಡಾ.ಮುಕುಂದ, ಡಾ.ಸತೀಶ್ ಭಂಡಾರಿ, ಆರೆಸ್ಸೆಸ್ ಪ್ರಾಂತ ಸಹಸಂಘ ಚಾಲಕ್ ಡಾ.ಪಿ.ವಾಮನ್ ಶೆಣೈ, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಪಾಲಿಕೆ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ರಾಜ್ಯ ಅಲ್ಪಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಪ್ರಮುಖರಾದ ದಿವಾಕರ್, ಲೀಲಾಕ್ಷ ಕರ್ಕೇರ, ಕೇಶವ, ಅಲೋಶಿಯಸ್ ಡಿಸೋಜ, ಚಂದ್ರಶೇಖರ ಜಹಗೀರ್ ದಾರ್, ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್, ಕ್ರೀಡಾಭಾರತಿ ಸಂಯೋಜಕ ಭೋಜರಾಜ ಕಲ್ಲಡ್ಕ ಉಪಸ್ಥಿತರಿದ್ದರು.
ಕ್ರೀಡಾಭಾರತಿ ಅಧ್ಯಕ್ಷ ಚಂದ್ರಶೇಖರ ರೈ ಸ್ವಾಗತಿಸಿದರು.





