ನೆಲ್ಲಿಕಾರು: ಕೋಟಿವೃಕ್ಷ ಕಾರ್ಯಕ್ರಮ
ಮೂಡುಬಿದಿರೆ, ಜು.22: ರಾಜ್ಯವ್ಯಾಪಿ ನಡೆಯುತ್ತಿರುವ ಕೋಟಿ ವೃಕ್ಷ ಗಿಡ ನೆಡುವ ಕಾರ್ಯಕ್ರಮವು ನೆಲ್ಲಿಕಾರು ಗ್ರಾಪಂ ವ್ಯಾಪ್ತಿಯ ಪೆಂಚಾರು ಕಿ.ಪ್ರಾ. ಶಾಲಾ ವಠಾರದಲ್ಲಿ ಜರಗಿತು.
ಜಿಪಂ ಸದಸ್ಯೆ ಸುಜಾತಾ ಕೆ.ಪಿ. ಕಾರ್ಯಕ್ರಮ ಉದ್ಘಾಟಿಸಿದರು. ನೆಲ್ಲಿಕಾರು ಗ್ರಾಪಂ ಅಧ್ಯಕ್ಷ ಹಾಗೂ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಜಯಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ವಲಯದ ಅರಣ್ಯಾಕಾರಿ ಜಿ.ಡಿ.ದಿನೇಶ್ ಮಾತನಾಡಿದರು. ತಾಪಂ ಸದಸ್ಯೆ ರೇಖಾ ಸಾಲ್ಯಾನ್, ಗ್ರಾಪಂ ಸದಸ್ಯರಾದ ಕುಶಲ, ಸುನಂದಾ, ಸರಸ್ವತಿ ನಾಯ್ಕ, ಉದಯ, ಶಶಿಧರ ಎಂ., ಭಾರತಿ ಸಂತೋಷ್, ಶಾಲಾ ಮುಖ್ಯ ಶಿಕ್ಷಕಿ ಅರ್ಚನಾ ಮಹಾವೀರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಪವಲಯ ಅರಣ್ಯಾಕಾರಿ ಚಂದ್ರಕಾಂತ ಸ್ವಾಗತಿಸಿದರು. ಗ್ರಾಪಂ ಸಿಬ್ಬಂದಿ ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಧುಶ್ರೀ ವಂದಿಸಿದರು.
Next Story