ಮಟ್ಕಾ ಅಡ್ಡೆಗೆ ದಾಳಿ: ಓರ್ವನ ಬಂಧನ
ಮಂಗಳೂರು, ಜು. 23: ಮಟ್ಕಾ ಅಡ್ಡೆಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿಂದ ಆಟಕ್ಕೆ ಸಂಗ್ರಹಿಸಿದ್ದ 54,000 ರೂ.ವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಾವರ ಜಪ್ಪು ಮಾರ್ಕೆಟ್ ಬಳಿ ಇರುವ ಲೂಯಿಸ್ ಲೋಬೋ ಬೇಕರಿಯ ಬಳಿಯಲ್ಲಿ ಮಟ್ಕ ಆಟದಲ್ಲಿ ನಿರತರಾಗಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಮಟ್ಕಾ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಜೆಪ್ಪು ನಿವಾಸಿ ಕಿಶೋರ್ ಶೆಟ್ಟಿ (42) ಎಂಬಾತನನ್ನು ಬಂಧಿಸಿದ್ದಾರೆ.
ಮಟ್ಕ ಆಟದಲ್ಲಿ ಸಂಗ್ರಹವಾಗಿದ್ದ ಒಟ್ಟು 54,000 ನಗದು , ಮಟ್ಕ ಚೀಟಿ, ಬಾಲ್ಪೆನ್ ಸಹಿತ ಒಟ್ಟು ಬೆಲೆ 55,000 ರೂ. ವೌಲ್ಯದ ಸೊತ್ತನ್ನು ವಶಪಡಿಸಿಒಕಂಡಿದ್ದಾರೆ. ಆರೋಪಿಯನ್ನು ಮತ್ತು ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ವೈ.ನಾಯ್ಕ್ ಮತ್ತು ಪಿಎಸೈ ಶ್ಯಾಮ್ ಸುಂದರ್ ಎಚ್.ಎಂ. ಮತ್ತು ಸಿಬ್ಬಂದಿ ಭಾಗವಹಿಸಿದ್ದರು.