ಕಡಬ: ವಾಹನಗಳಲ್ಲಿ ನೇತಾಡಿಕೊಂಡೇ ಶಾಲೆ, ಕಾಲೇಜುಗಳಿಗೆ ತೆರಳಿದ ವಿದ್ಯಾರ್ಥಿಗಳು
![ಕಡಬ: ವಾಹನಗಳಲ್ಲಿ ನೇತಾಡಿಕೊಂಡೇ ಶಾಲೆ, ಕಾಲೇಜುಗಳಿಗೆ ತೆರಳಿದ ವಿದ್ಯಾರ್ಥಿಗಳು ಕಡಬ: ವಾಹನಗಳಲ್ಲಿ ನೇತಾಡಿಕೊಂಡೇ ಶಾಲೆ, ಕಾಲೇಜುಗಳಿಗೆ ತೆರಳಿದ ವಿದ್ಯಾರ್ಥಿಗಳು](https://www.varthabharati.in/sites/default/files/images/articles/2016/07/25/WhatsApp-Image-20160725-(4).jpg)
ಕಡಬ, ಜು.25: ಸರಕಾರಿ ಬಸ್ಸುಗಳ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲೆಡೆ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿದ್ದರೂ, ಕಡಬ ವ್ಯಾಪ್ತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ರಜೆಯ ಕುರಿತು ಗೊಂದಲದಿಂದಾಗಿ ಶಾಲೆಗೆ ಆಗಮಿಸಿಲ್ಲ.
ಖಾಸಗಿ ವಾಹನಗಳು ಓಡಾಟ ನಡೆಸುತ್ತಿವೆಯಾದರೂ ಪ್ರಯಾಣಿಕರಿಲ್ಲದೆ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಜೀಪುಗಳಲ್ಲಿ ನೇತಾಡಿಕೊಂಡೇ, ಅಪಾಯಕಾರಿಯಾಗಿ ಶಾಲಾ ಕಾಲೇಜುಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.
Next Story