ಅನಂತನಾಗ್ ಹೊರತು ಕಾಶ್ಮೀರದ ಎಲ್ಲ ಭಾಗಗಳಲ್ಲಿ ಕರ್ಫ್ಯೂ ಹಿಂದಕ್ಕೆ
![ಅನಂತನಾಗ್ ಹೊರತು ಕಾಶ್ಮೀರದ ಎಲ್ಲ ಭಾಗಗಳಲ್ಲಿ ಕರ್ಫ್ಯೂ ಹಿಂದಕ್ಕೆ ಅನಂತನಾಗ್ ಹೊರತು ಕಾಶ್ಮೀರದ ಎಲ್ಲ ಭಾಗಗಳಲ್ಲಿ ಕರ್ಫ್ಯೂ ಹಿಂದಕ್ಕೆ](https://www.varthabharati.in/sites/default/files/images/articles/2016/07/26/barring-anantnag-curfew-lifted-from-all-parts-of-kashmir.jpg)
ಶ್ರೀನಗರ, ಜು.26: ಕಾಶ್ಮೀರ ಕಣಿವೆಯ ಅನಂತನಾಗ್ ಪಟ್ಟಣವನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಕರ್ಫ್ಯೂವನ್ನು ಹಿಂದೆಗೆಯಲಾಗಿದೆ. ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಣಿವೆಯಲ್ಲಿ 17 ದಿನಗಳ ಹಿಂಸಾಚಾರದಲ್ಲಿ 47 ಮಂದಿ ಬಲಿಯಾಗಿದ್ದು, ಇತರ 5,500 ಮಂದಿ ಗಾಯಗೊಂಡಿದ್ದಾರೆ.
ಅನಂತನಾಗ್ ಪಟ್ಟಣದ ಹೊರತು ಕಾಶ್ಮೀರದ ಎಲ್ಲ ಭಾಗಗಳಲ್ಲಿ ಕರ್ಫ್ಯೂ ಹಿಂದೆಗೆಯಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕರ್ಫ್ಯೂ ಆಗಲಿ, ಜನರ ಚಲನವಲನಕ್ಕೆ ನಿರ್ಬಂಧವಾಗಲಿ ಇಲ್ಲ. ಆದರೆ, ಕಣಿವೆಯ ಇತರ ಭಾಗಗಳಲ್ಲಿ ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ನಾಲ್ವರು ಅಥವಾ ಹೆಚ್ಚು ಮಂದಿ ಒಟ್ಟು ಸೇರುವುದರ ಮೇಲೆ ನಿರ್ಬಂಧ ಮುಂದುವರಿಯಲಿದೆಯೆಂದು ಅವರು ಹೇಳಿದ್ದಾರೆ.
ನಾಗರಿಕರ ಹತ್ಯೆಯ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿರುವ ಪ್ರತ್ಯೇಕತಾವಾದಿಗಳ ಪಾಳಯವು, ಇಂದು ಅಪರಾಹ್ಣ 2 ಗಂಟೆಯಿಂದ ಮುಷ್ಕರವನ್ನು ಸಡಿಲಿಸುವ ಘೋಷಣೆಯನ್ನು ಈಗಾಗಲೇ ಮಾಡಿದೆ. ಆದಾಗ್ಯೂ, ನಾಳೆಯಿಂದ ಜು.29ರ ವರೆಗೆ 3 ದಿನಗಳ ಬಂದ್ ಹಾಗೂ ನಾಳೆ ಕುಲ್ಗಾಂವ್ಗೆ ಮೆರವಣಿಗೆಯ ಕರೆಯನ್ನು ಅದು ನೀಡಿದೆ.