ಎಳತ್ತೂರು: ಮನೆಯಿಂದ ಅಡಿಕೆ ಕಳ್ಳತನ
ಮುಲ್ಕಿ, ಜು. 26: ಇಲ್ಲಿಗೆ ಸಮಪದ ಎಳತ್ತೂರು ಕಲ್ಕರೆ ಎಂಬಲ್ಲಿ ಮನೆಯೊಂದರ ಗೋಡೌನಿನ ಬೀಗ ಮುರಿದು ಅಡಿಕೆ ಚೀಲ ಕದ್ದ ಘಟನೆ ನಡೆದಿದೆ.
ಕಿನ್ನಿಗೋಳಿ ಸಮೀಪದ ಎಳತ್ತೂರು ಕಲ್ಕರೆ ಎಂಬಲ್ಲಿರುವ ಪ್ರಗತಿಪರ ಕೃಷಿಕ ದಿ. ಹಮೀದ್ ಕಲ್ಕರೆ ಎಂಬವರ ಮನೆಯ ಬದಿಯಲ್ಲಿರುವ ಗೋಡೌನಿನಲ್ಲಿ ಸುಮಾರು ಒಂದು ಲಕ್ಷ ರೂ. ವೌಲ್ಯದ ಅಡಿಕೆಯನ್ನು ಇರಿಸಲಾಗಿತ್ತು. ಸೋಮವಾರ ತಡರಾತ್ರಿ ಗೋಡೌನಿನ ಬೀಗ ಮುರಿದ ಕಳ್ಳರು ಅಡಿಕೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಮನೆಯವರು ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.
Next Story