ನರಸಿಂಗ ಡೋಪ್ ವೈಫಲ್ಯದ ಹಿಂದೆ ಇನ್ನೊಬ್ಬ ಕುಸ್ತಿಪಟು ಕೈವಾಡ
ಆಹಾರ ಕಲಬೆರಕೆ ಮಾಡಿದ ಆರೋಪಿಯ ಗುರುತು ಪತ್ತೆ
![ನರಸಿಂಗ ಡೋಪ್ ವೈಫಲ್ಯದ ಹಿಂದೆ ಇನ್ನೊಬ್ಬ ಕುಸ್ತಿಪಟು ಕೈವಾಡ ನರಸಿಂಗ ಡೋಪ್ ವೈಫಲ್ಯದ ಹಿಂದೆ ಇನ್ನೊಬ್ಬ ಕುಸ್ತಿಪಟು ಕೈವಾಡ](https://www.varthabharati.in/sites/default/files/images/articles/2016/07/27/53405968.jpg)
ಹೊಸದಿಲ್ಲಿ, ಜು.27: ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಡೋಪಿಂಗ್ ಪ್ರಕರಣ ಇದೀಗ ವಿಚಿತ್ರ ತಿರುವು ಪಡೆದುಕೊಂಡಿದೆ. ಉದ್ದೀಪನ ಔಷಧ ಪತ್ತೆಯಲ್ಲಿ ಯಾದವ್ ವಿಫಲವಾಗಲು ಆಹಾರದಲ್ಲಿ ಕಲಬೆರಕೆ ಆಗಿದ್ದುದು ಕಾರಣ ಎಂದು ಹೇಳಲಾಗುತ್ತಿದೆ. ಸೂಪರ್ ಹೆವಿವೈಟ್ ವಿಭಾಗದ ಕುಸ್ತಿಪಟುವೊಬ್ಬರ ತಮ್ಮ ಸೋನೆಪತ್ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನರಸಿಂಗ ಯಾದವ್ ಅವರ ಕೊಠಡಿಯನ್ನು ಪತ್ತೆ ಹಚ್ಚಿ ಅವರ ಪೂರಕ ಆಹಾರ ಕಲಬೆರಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಆ ವ್ಯಕ್ತಿ ಸ್ವತಃ 65 ಕೆ.ಜಿ. ವಿಭಾಗದ ಕುಸ್ತಿಪಟುವಾಗಿದ್ದು, ಕಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಆತ ತರಬೇತಿ ಪಡೆದಿದ್ದ ಹಾಗೂ ರಾಷ್ಟ್ರೀಯ ತರಬೇತಿ ಶಿಬಿರ ವೇಳೆ ಸೋನೆಪತ್ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದ. 74 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಪಟು ಭಾರತೀಯ ತಂಡದ ಜತೆ ಬಲ್ಗೇರಿಯಾದಲ್ಲಿ ಇದ್ದಾಗ, ಯಾದವ್ ಅವರ ಕೊಠಡಿಯನ್ನು ಪತ್ತೆ ಮಾಡಿದ್ದ. ಜೆ.ಡಿ.ಯಾದವ್ ಹಾಸ್ಟೆಲ್ ನಲ್ಲಿ ಯಾದವ್ ಕೊಠಡಿಯ ಕೀಲಿಯನ್ನೂ ಕೇಳಿದ್ದ. ಅಧಿಕಾರಿಗಳು ಸಂಶಯದಿಂದ ವಿಚಾರಿಸಿದಾಗ, ಇದು ಪವನ್ ಕೊಠಡಿ ಅಲ್ಲವೇ ಎಂದು ಪ್ರಶ್ನಿಸಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಭಾರತದ ಕುಸ್ತಿ ಸಂಸ್ಥೆ ಎಫ್ಐಆರ್ ದಾಖಲಿಸಿದೆ. ಸ್ವತಃ ನರಸಿಂಗ ಯಾದವ್ ಕೂಡಾ ಪಾಣಿಮತ್ ಸಮೀಪದ ಸಮಲ್ಖಾ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೆಲ ವ್ಯಕ್ತಿಗಳು ತಮ್ಮ ಪೂರಕ ಆಹಾರ ಮತ್ತು ನೀರನ್ನು ಕಲಬೆರಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಗಿ ಹರ್ಯಾಣ ಪೊಲೀಸ್ ಮೂಲಗಳು ಹೇಳಿವೆ.