ಲೈಸೆನ್ಸ್ ನವೀಕರಣವಾಗದ ಚಾಲಕನಿಂದ ಬಸ್ ಚಾಲನೆ
ಬಿಸಿರೋಡ್ -ಸ್ಟೇಟ್ಬ್ಯಾಂಕ್ ನಡುವೆ ಕೆಎಸ್ಸಾರ್ಟಿಸಿ ಬಸ್ ಸಂಚಾರ
![ಲೈಸೆನ್ಸ್ ನವೀಕರಣವಾಗದ ಚಾಲಕನಿಂದ ಬಸ್ ಚಾಲನೆ ಲೈಸೆನ್ಸ್ ನವೀಕರಣವಾಗದ ಚಾಲಕನಿಂದ ಬಸ್ ಚಾಲನೆ](https://www.varthabharati.in/sites/default/files/images/articles/2016/07/27/IMG_20160727_115856.jpg)
ಮಂಗಳೂರು,ಜು.27: ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ನಡುವೆಯೆ ಇಂದು ಬಸ್ ಚಾಲನ ಪರವಾನಿಗೆ ನವೀಕರಣಗೊಳ್ಳದೆ ತರಬೇತಿಯಲ್ಲಿರುವ ಚಾಲಕರೊಬ್ಬರು ಬಸ್ ಚಲಾಯಿಸಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆಯಿಂದ ಪುತ್ತೂರು ಡಿಪೋದ ಕೆಎಸ್ಸಾರ್ಟಿಸಿ ಬಸ್ಸೊಂದು ಬಿಸಿರೋಡ್ ಮತ್ತು ನಗರದ ಸ್ಟೇಟ್ ಬ್ಯಾಂಕ್ ನಡುವೆ ಬಸ್ ಸಂಚಾರ ನಡೆಸಿದೆ. ಬಸ್ಸಿನಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು ಪೊಲೀಸ್ ಭದ್ರತೆಯ ನಡುವೆ ಬಸ್ ಸಂಚಾರ ನಡೆಯುತ್ತಿದೆ.
ನಗರದ ಸ್ಟೇಟ್ ಬ್ಯಾಂಕ್ ನಲ್ಲಿ ಬಸ್ ಬಂದ ಸಂದರ್ಭದಲ್ಲಿ ಚಾಲಕ ಮಂಜುನಾಥ ಅವರನ್ನು ಮಾಧ್ಯಮದವರು ಮಾತನಾಡಿಸಿದಾಗ ಟ್ರೈನಿಯಲ್ಲಿರುವ ನನಗೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಂದ ಸೂಚನೆ ಬಂದಿದ್ದು ಅದರಂತೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ನನ್ನ ಲೈಸೆನ್ಸ್ ನವೀಕರಣಕ್ಕೆ ನೀಡಲಾಗಿದ್ದು ಇದನ್ನು ಅಧಿಕಾರಿಗೆ ತಿಳಿಸಿದ್ದೇನೆ. ಅವರ ಸೂಚನೆಯಂತೆ ಬಸ್ ಚಲಾಯಿಸುತ್ತೇದ್ದೇನೆ ಎಂದು ತಿಳಿಸಿದರು.
Next Story