ಸ್ವಾಮಿ ವಿರುದ್ಧದ ಆರು ಮಾನಹಾನಿ ಪ್ರಕರಣಗಳಿಗೆ ಹೈಕೋರ್ಟ್ ತಡೆ
![ಸ್ವಾಮಿ ವಿರುದ್ಧದ ಆರು ಮಾನಹಾನಿ ಪ್ರಕರಣಗಳಿಗೆ ಹೈಕೋರ್ಟ್ ತಡೆ ಸ್ವಾಮಿ ವಿರುದ್ಧದ ಆರು ಮಾನಹಾನಿ ಪ್ರಕರಣಗಳಿಗೆ ಹೈಕೋರ್ಟ್ ತಡೆ](https://www.varthabharati.in/sites/default/files/images/articles/2016/07/27/443067-swamy.jpg)
ಚೆನ್ನೈ,ಜು.27: ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅವಮಾನಕಾರಿ ಹೇಳಿಕೆಗಳಿಗಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ವಿರುದ್ಧ ತಮಿಳು ನಾಡು ಸರಕಾರವು ದಾಖಲಿಸಿರುವ ಎಲ್ಲ ಆರೂ ಮಾನಹಾನಿಕರ ಪ್ರಕರಣಗಳ ವಿಚಾರಣೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಬುಧವಾರ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.
ನ್ಯಾ.ಪಿ.ಎನ್.ಪ್ರಕಾಶ ಅವರು ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಸ್ವಾಮಿಯವರ ಖುದ್ದು ಹಾಜರಾತಿಗೆ ವಿನಾಯಿತಿಯನ್ನೂ ನೀಡಿದರು.
ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎಲ್.ಜಗನ್ ಅವರು ಜಯಲಲಿತಾರ ಪರವಾಗಿ ಈ ಪ್ರಕರಣಗಳನ್ನು ದಾಖಲಿಸಿದ್ದರು.
ಎಲ್ಲ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿರುವಂತೆ ಸ್ವಾಮಿಯವರಿಗೆ ಸೂಚಿಸಲಾಗಿತ್ತು.
ಉಚ್ಚ ನ್ಯಾಯಾಲಯದ ಹೊರಗೆ ಸುದ್ದಿಗಾರರೊಡನೆ ಮಾತನಾಡಿದ ಸ್ವಾಮಿ,ಈ ಆದೇಶವನ್ನು ತಾನು ಸ್ವಾಗತಿಸುವುದಾಗಿ ಹೇಳಿದರು.
Next Story