ಪುತ್ತೂರು:ಸಮುದಾಯದ ಸಹಭಾಗಿತ್ವದಿಂದ ಸರಕಾರಿ ಶಾಲೆಗಳ ಬೆಳವಣಿಗೆ- ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು
ಚೆನ್ನಾವರ ಶಾಲಾ ಅಕ್ಷರದಾಸೋಹ ಕೊಠಡಿಗೆ ಶಿಲಾನ್ಯಾಸ
![ಪುತ್ತೂರು:ಸಮುದಾಯದ ಸಹಭಾಗಿತ್ವದಿಂದ ಸರಕಾರಿ ಶಾಲೆಗಳ ಬೆಳವಣಿಗೆ- ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪುತ್ತೂರು:ಸಮುದಾಯದ ಸಹಭಾಗಿತ್ವದಿಂದ ಸರಕಾರಿ ಶಾಲೆಗಳ ಬೆಳವಣಿಗೆ- ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು](/images/placeholder.jpg)
ಪುತ್ತೂರು,ಜು.27: ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಾರ್ವಜನಿಕರ ಸಹಬಾಗಿತ್ವ ಅಗತ್ಯ.ಶಾಲೆಯ ಅಭಿವೃದ್ದಿ ಊರಿನ ಬೆಳವಣಿಗೆಗೆ ಪೂರಕ ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಜು.27ರಂದು ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲಾ ಅಕ್ಷರ ದಾಸೋಹ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಬೆಳವಣಿಗೆಗೆ ಸರಕಾರ ವಿಶೇಷವಾದ ಯೋಜನೆಗಳನ್ನು ತಂದಿದೆ.ಇದರಲ್ಲಿ ಅಕ್ಷರದಾಸೋಹವೂ ಮಹತ್ವದ್ದು,ಜತೆಗೆ ಸ್ಪೋಕನ್ ಇಂಗ್ಲೀಷ್ ತರಗತಿ ಗುಬ್ಬಚ್ಚಿ ಸ್ಪೀಕಿಂಗ್ ಈ ಶಾಲೆಯಲ್ಲಿ ಆರಂಭಗೊಳ್ಳುತ್ತಿರುವುದು ಸಂತಸದ ವಿಚಾರ.ಶಾಲೆಯೊಂದಿಗೆ ಮಕ್ಕಳು ಬೆಳವಣಿಗೆಹೊಂದಿ ದೇಶದ ಭವಿಷ್ಯದ ಉತ್ತಮ ಪ್ರಜೆಯಾಗಲಿ ಎಂದರು.
ಗುಬ್ಬಚ್ಚಿ ಸ್ಪೀಕಿಂಗ್ ತರಗತಿಯನ್ನು ಉದ್ಘಾಟಿಸಿದ ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಮಾತನಾಡಿ,ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ.ಈಗ ಖಾಸಗಿ ಶಾಲೆಯನ್ನೂ ಮೀರಿಸುವಂತಹ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ.ಜತೆಗೆ ಗುಬ್ಬಚ್ಚಿ ಸ್ಪೀಕಿಂಗ್ ಕಾರ್ಯಕ್ರಮದ ಮೂಲಕ ಪುಟಾಣಿ ಮಕ್ಕಳ ಬಾಯಲ್ಲೂ ಇಂಗ್ಲೀಷ್ ಅನುರಣಿಸಲಿದೆ.ಇದು ಮಕ್ಕಳ ಭವಿಷ್ಯಕ್ಕೆ ಉತ್ತಮ ಅವಕಾಶ.ಗ್ರಾಮೀಣ ಭಾಗದ ಶಾಲೆ ಇಂತಹ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ,ಸರಕಾರಿ ಶಾಲೆಗಳಲ್ಲಿ ಉತ್ತಮವಾದ ಶಿಕ್ಷಣ ದೊರಕುತ್ತಿದೆ.ಆಂಗ್ಲಭಾಚೆಯ ಶಿಕ್ಷಣದ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಪವಾದದ ನಡುವೆಯೂ ಇಲ್ಲಿ ಶಾಲೆಯಲ್ಲಿ ಗರಿಷ್ಠ ಮಕ್ಕಳ ದಾಖಲಾತಿಯಿದೆ,ಇನ್ನು ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಗೊಂಡಿದ್ದು ಇನ್ನಷ್ಟು ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರಿಗೂ ಜವಾಬ್ದಾರಿ ಇದೆ ಎಂದರು.
ಸಮೂಹ ಸಂಪನ್ಮೂಲ ಕೇಂದ್ರದ ಬಿಆರ್ಪಿ ಸವಿತಾ ಗುಜರನ್ ,ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ.ಅಧ್ಯಕ್ಷೆ ಬಿ.ಕೆ.ಇಂದಿರಾ , ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಡಿ.ಕನ್ಯಾಮಂಗಲ,ತಾ.ಪಂ.ಯೋಜನಾಧಿಕಾರಿ ಗಣಪತಿ,ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ಪ್ರಕಾಶ್ ಕುದ್ಮನಮಜಲು,ಅಭಿವೃದ್ದಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ಣನವರ್,ಅಕ್ಷರದಾಸೋಹದ ಸಹಾಯಕ ನಿರ್ದೇಶಕ ನವೀನ್ ಸ್ಟೀಫನ್ ವೇಗಸ್,ಚೆನ್ನಾವರ ಶಾಲಾ ಬೆಳ್ಳಿಹಬ್ಬ ಸಮಿತಿ ಸಂಚಾಲಕ ಗಣೇಶ್ ಶೆಟ್ಟಿ ಕುಂಜಾಡಿ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಇಬ್ರಾಹಿಂ,ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನಿವೃತ ಶಿಕ್ಷಕ ಬಾಬು ಎನ್ ಹಾಗೂ ಐಸಿಸಿ ಕೋಚ್,ದುಬೈನ ಇಂಡಿಯನ್ ಹೈಸ್ಕೂಲ್ನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ದಿನೇಶ್ ಎನ್ ಸುವರ್ಣ ಚೆನ್ನಾವರ ಇವರನ್ನು ಜಿ.ಪಂ.ಅಧ್ಯಕ್ಷೆ ಮೀನಾಕ್ಷೀ ಶಾಂತಿಗೋಡು ಅವರು ಅಭಿನಂದಿಸಿದರು.ಶಾಲಾ ಮುಖ್ಯಗುರು ಶಾಂತಾಕುಮಾರಿ ಸ್ವಾಗತಿಸಿ,ಕೆಯ್ಯೂರು ಕ್ಲಸ್ಟರ್ ಸಿಆರ್ಪಿ ಅಬ್ದುಲ್ ಬಶೀರ್ ವಂದಿಸಿದರು.ಶಿಕ್ಷಕಿ ಶ್ವೇತಾ ನಿರೂಪಿಸಿದರು.