ಮಂಗಳೂರು: ಅಮಲು ಪದಾರ್ಥ ಸೇವನೆ - ಓರ್ವನ ಬಂಧನ
ಮಂಗಳೂರು, ಜು. 27: ಅಮಲು ಪದಾರ್ಥ ಸೇವನೆಯ ಆರೋಪದಲ್ಲಿ ಕಾವೂರು ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪಾಂಡೇಶ್ವರ ಶಾಂತಾಳ್ವ ಕೌಂಪಾಂಡ್ನ ನಿವಾಸಿ ನಿರಂಜನ್ ರಾವ್ ಯಾನೆ ರಂಜಿತ್ (27)ಎಂದು ಗುರುತಿಸಲಾಗಿದೆ.
ಈತ ಬುಧವಾರ ಬೆಳಗ್ಗೆ ಕಾವೂರು ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕೂಳೂರು ಬಸ್ ನಿಲ್ದಾಣ ಬಳಿ ಅಮಲು ಪದಾರ್ಥ ಸೇವಿಸಿ ತಿರುಗಾಡುತ್ತಿದ್ದ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story