ಮಂಗಳೂರು: ಜುಲೈ 31 ರಿಂದ ಆಗಸ್ಟ್ 6ರ ವರೆಗೆ 15 ನೇ ವರ್ಷದ ಯಕ್ಷಗಾನ ಸಪ್ತಾಹ
ಮಂಗಳೂರು,ಜು.27: ಕದ್ರಿ ಮಲ್ಲಿಕಟ್ಟೆ ಶ್ರೀ ಕೃಷ್ಣ ಯಕ್ಷಸಭಾ ಇದರ ವತಿಯಿಂದ 15 ನೇ ವರ್ಷದ ಯಕ್ಷಗಾನ ಸಪ್ತಾಹ ಜುಲೈ 31 ರಿಂದ ಆಗಸ್ಟ್ 6 ರವರೆಗೆ ಬೋಳಾರ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಲಿದೆ.
ಪ್ರತೀ ದಿನ ಸಂಜೆ 5.30 ರಿಂದ 9.30 ರವರೆಗೆ ಹಿರಿಯ ಕಲಾ ಸಾಧಕರಿಗೆ ಸಂಮಾನ ಹಾಗೂ ಪ್ರಸಿದ್ಧ ಯಕ್ಷಗಾನ ಬಯಲಾಟಗಳು ನಡೆಯಲಿವೆ. ಜುಲೈ 31 ರಂದು ಬಾಲಲೀಲೆ ಕಂಸವಧೆ, ಆಗಸ್ಟ್ 1 ರಂದು ಜಟಾಯುಮೋಕ್ಷ- ಇಂದ್ರಜಿತು ಕಾಳಗ, ಆ.2 ರಂದು ಸುಭದ್ರಾ ಕಲ್ಯಾಣ, ಆ.3 ಚಿತ್ರಸೇನ ಕಾಳಗ- ಕೀಚಕ ವಧೆ, ಆ.4 ಇಂದ್ರಕೀಲಕ- ಊರ್ವಶಿ ಶಾಪ,ಆ.5 ಚಕ್ರ- ಚಂಡಿಕಾ, ಆ.6 ಮಧ್ಯಾಹ್ನ 2.30 ರಿಂದತಾಳಮದ್ದಳೆ, ಸಂಜೆ 6ರಿಂದ ಹಿಡಿಂಬಾ ವಿವಾಹ , ಬಕಾಸು- ಕಿಮ್ಮೀರ ವಧೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story