ಪೂಜಾರಿ ಹೇಳಿಕೆಗೆ ಕಾಂಗ್ರೆಸಿಗರ ಖಂಡನೆ
ಉಡುಪಿ, ಜು.27: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಂತೆ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯನ್ನು ಪರ್ಕಳ ಕಾಂಗ್ರೆಸ್ನ ನಾಯಕರು ತೀವ್ರವಾಗಿ ಖಂಡಿಸಿದರು.
ಪಕ್ಷದ ಉಳಿವಿಗಾಗಿ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಾ, ತಾನು ಎಂಪಿ ಆಗುವ ಮೊದಲು ಇವರು ಎಲ್ಲಿದ್ದರು ಎಂಬ ಭಂಡತನದ ಹೇಳಿಕೆ ಕೊಡುವ ಮೂಲಕ ಜನಾರ್ದನ ಪೂಜಾರಿ ಕಾಂಗ್ರೆಸ್ ಕಾರ್ಯಕರ್ತರು ಅವರ ಮೇಲಿದ್ದ ಗೌರವ, ನಂಬಿಕೆ ಮತ್ತು ವಿಶ್ವಾಸಗಳನ್ನು ಕಳೆದುಕೊಂಡಿದ್ದಾರೆ ಎಂದು ಪರ್ಕಳ ಕಾಂಗ್ರೆಸ್ನ ಜಯಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಸತೀಶ್ ಶೆಟ್ಟಿ ಕೆಳಪರ್ಕಳ, ಸುಧಾಕರ ಪೂಜಾರಿ, ವೆಂಕಟೇಶ ಶೆಟ್ಟಿಗಾರ್ ಮುಂತಾದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story