Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಮ್ಮ ಸೈನ್ಯವನ್ನು ನಮ್ಮದೇ ಜನರ ವಿರುದ್ಧ...

ನಮ್ಮ ಸೈನ್ಯವನ್ನು ನಮ್ಮದೇ ಜನರ ವಿರುದ್ಧ ಯಾಕೆ ನಿಯೋಜಿಸಬೇಕು?

ನೌಕಾದಳದ ಮಾಜಿ ಮುಖ್ಯಸ್ಥರ ಪತ್ನಿ ಲಲಿತಾ ರಾಮದಾಸ್

ವಾರ್ತಾಭಾರತಿವಾರ್ತಾಭಾರತಿ28 July 2016 11:46 AM IST
share
ನಮ್ಮ ಸೈನ್ಯವನ್ನು ನಮ್ಮದೇ ಜನರ ವಿರುದ್ಧ ಯಾಕೆ ನಿಯೋಜಿಸಬೇಕು?

ಮುಂಬೈ, ಜು.28 : ನಮ್ಮ ದೇಶದ ಗಡಿಗಳನ್ನು ಕಾಯಬೇಕಿರುವ ನಮ್ಮ ಸೈನ್ಯವನ್ನು ನಮ್ಮದೇ ಜನರ  ವಿರುದ್ಧ ಏಕೆ ನಿಯೋಜಿಸಬೇಕು? ಮೇಲಾಗಿ  ಅವರನ್ನು ನಿಯೋಜಿಸಿದರೂ ಅವರಿಗೇಕೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ ರಕ್ಷಣೆಯೊದಗಿಸಲಾಗಿದೆ ?'' ಎಂಬ ಮಹತ್ವದ ಪ್ರಶ್ನೆಯನ್ನು ನೌಕಾದಳದ ಮಾಜಿ ಮುಖ್ಯಸ್ಥರ ಪತ್ನಿ ಲಲಿತಾ ರಾಮದಾಸ್ ಎತ್ತಿದ್ದಾರೆ.

ಈ ಬಗ್ಗೆ ಅವರು ಬರೆದಿರುವ ಲೇಖನವೊಂದನ್ನು  ದಿ ಸಿಟಿಝನ್ ಆನ್ಲೈನ್ ದೈನಿಕ ಪ್ರಕಟಿಸಿದೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ತಮ್ಮ ನಮನ ಸಲ್ಲಿಸುತ್ತಾ  ತಾವು ನೌಕಾಪಡೆಯ ಮಾಜಿ ಮುಖ್ಯಸ್ಥರ ಪತ್ನಿಯಾಗಿಯೂ  ಸಮವಸ್ತ್ರಧಾರಿಗಳ ಬಗ್ಗೆ ಏಕೆ ಟೀಕೆ ವ್ಯಕ್ತಪಡಿಸುತ್ತಿದ್ದೇನೆಂದು ಹಲವರು ತಮ್ಮನ್ನು ಪ್ರಶ್ನಿಸುತ್ತಿರುವುದನ್ನು ಉಲ್ಲೇಖಿಸಿದ ಅವರು  ``ನಮ್ಮ ಸೇನಾ ಪಡೆಗಳ ವೃತ್ತಿಪರತೆ, ತ್ಯಾಗ ಹಾಗೂ ಶೌರ್ಯದ ಬಗ್ಗೆ ತಮಗೆ ಹೆಮ್ಮೆಯಿದೆ'' ಎಂದು ಹೇಳಿದ ಲಲಿತಾ ರಾಮದಾಸ್ ಅದೇ ಸಮಯ 1984 ರಲ್ಲಿ ದೆಹಲಿಯಲ್ಲಿ ಸಿಕ್ಖರ ವಿರುದ್ಧವೇ ನಮ್ಮ ಸೇನೆಯನ್ನು ಅಧಿಕಾರಸ್ಥರ ಸ್ವಾರ್ಥಕ್ಕಾಗಿ ಬಳಸಿದ್ದು ವಾಸ್ತವತೆಯ ಬಗ್ಗೆ ತಮ್ಮ ಕಣ್ಣು ತೆರೆಸಿತು. ಮುಂದೆ ಇದೇ ಮಾದರಿ ಬಾಬ್ರಿ ಮಸೀದಿ ಧ್ವ್ವಂಸ ಹಾಗೂ 2002ರ ಗುಜರಾತ್ ಗಲಭೆ ಸಂದರ್ಭಗಳಲ್ಲಿ ವ್ಯಕ್ತವಾಗಿತ್ತು,'' ಎಂದು ಬರೆದಿದ್ದಾರೆ.

``ಸರಕಾರ ನೀಡುವ ಹೇಳಿಕೆಗಳು ಹಾಗೂ ನಮ್ಮ ರಾಷ್ಟ್ರೀಯ ಸುದ್ದಿ ಚಾನೆಲ್ ಗಳು  ಪ್ರಸಾರ ಮಾಡುವ ಪೂರ್ವಾಗ್ರಹ ಪೀಡಿತ ವರದಿಗಳಿಂದ ನಾವು ದೂರ ಸರಿದು ವಾಸ್ತವತೆಯನ್ನು ಇತರ ಮೂಲಗಳಿಂದ ಅರಿತು ನಮ್ಮದೇ ತೀರ್ಮಾನಗಳಿಗೆ ಬರುವ ಅಗತ್ಯವಿದೆ,''ಎಂದು ಅವರು ಬರೆದಿದ್ದಾರೆ.

``ಇಂದು ಸಮವಸ್ತ್ರದಲ್ಲಿರುವ ನಮ್ಮ ಜನರು, ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಬಡ ಯುವಕರು ಸೇನೆಗೆ ಉದ್ಯೋಗ, ಸುರಕ್ಷೆಗಾಗಿ ಸೇರಿದರೂ ಮುಂದೆ  ಅವರನ್ನು ಅತ್ಯುನ್ನತ ದೇಶಭಕ್ತಿ ಹಾಗೂ ದೇಶ ಸೇವೆ ಮೀಸಲಾದವರೆಂಬ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡಲಾಗುತ್ತದೆ,'' ಎಂದು ಅವರು ಬಣ್ಣಿಸಿದ್ದಾರೆ.

``ಇಂತಹ ಯುವಕರು  ಕರ್ತವ್ಯದಲ್ಲಿರುವಾಗ ಕೊಲ್ಲಲ್ಪಟ್ಟರೆ, ಅದು ಆ ವೃತ್ತಿಯಲ್ಲಿರುವವರು ಎದುರಿಸಬೇಕಾಗಿರುವ ಅಪಾಯವಾದರೂ,. ಹೆಚ್ಚಿನ ಸಂದರ್ಭಗಳಲಿ ನಮ್ಮ ರಾಜಕಾರಣಿಗಳು ಹಾಗೂ  ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿಯಿಂದಾಗಿಯೇ ಅವರು ತಮ್ಮ ಜನರ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ,'' ಎಂದು ಲಲಿತಾ ರಾಮದಾಸ್ ವಿರಿಸಿದ್ದಾರೆ.

ಕಾಶ್ಮೀರದಲ್ಲಿ ಶಂಕಿತ ಉಗ್ರನೊಬ್ಬನ ಹತ್ಯೆ ಹಾಗೂ ತದನಂತರ ಭುಗಿಲೆದ್ದ ಹಿಂಸೆಯನ್ನು ಉಲ್ಲೇಖಿಸುತ್ತಾ ``22 ವರ್ಷದ ಯುವಕನೊಬ್ಬ `ಉಗ್ರವಾದಿಯೇ ಅಥವಾ ಕೊಲೆಗಾರನೇ"' ಎಂಬುದನ್ನು  ಅರ್ನಬ್ ಗೋಸ್ವಾಮಿ ಅಥವಾ ಝೀ ನ್ಯೂಸ್  ಹೇಳಿದರೆ ನಾವು ನಂಬಬೇಕೇನು ?'' ಎಂದು ಪ್ರಶ್ನಿಸಿದ ಅವರು  ``ಹೌದು- ಆತ ಉಗ್ರವಾದಿ- ಆದರೆ ಆತ ಉಗ್ರವಾದಿಯೇಕೆ ಆದ ಎಂಬುದರ ಹಿಂದೆ ಒಂದು ದುರಂತ ಕಥೆಯಿದೆ. ಆದರೆ ಎನ್ ಕೌಂಟರ್ ನಲ್ಲಿ ಅಂಥವರನ್ನು ಸಾಯಿಸುವುದು ಅದಕ್ಕೆ ಪರಿಹಾರವಲ್ಲ, ಸ್ನೇಹಿತರೇ ಅದಕ್ಕೆ ಉತ್ತರವಿದ್ದರೆ-ಗಾಳಿಯನ್ನು ಒಳಕ್ಕೆ ಊದುವುದಾಗಿದೆ. ಆದರೆ ನಾವು ನಮ್ಮ ಕಿವಿಗಳನ್ನು ಕಾಂಕ್ರೀಟ್ ನಿಂದ ಹಾಗೂ ತಲೆಯನ್ನು ಗಂಟುಮೂಟೆಯಿಂದ ಮುಚ್ಚಿರುವಾಗ ಗಾಳಿ ಹೇಳುವುದನ್ನು ನಾವು ಹೇಗೆ ಕೇಳಲು ಸಾಧ್ಯ?'' ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X