ರೈಲ್ವೆ ಸೇತುವೆಯಿಂದ ಬಿದ್ದು ಮೃತ್ಯು
ಕುಂದಾಪುರ, ಜು.28: ಕನ್ಯಾನ ರೈಲ್ವೆ ಸೇತುವೆಯಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತರನ್ನು ತಲ್ಲೂರು ಗ್ರಾಮದ ರಾಜಾಡಿ ನಿವಾಸಿ ತಿಮ್ಮ ಪೂಜಾರಿ ಎಂಬವರ ಮಗ ರಾಘವೇಂದ್ರ ಪೂಜಾರಿ(29) ಎಂದು ಗುರುತಿಸಲಾಗಿದೆ. ಇವರು ರೈಲ್ವೆ ಸೇತುವೆಯಲ್ಲಿ ನಡೆದುಕೊಂಡು ಮನೆಗೆ ವಾಪಸು ಬರುತ್ತಿರುವಾಗ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story