ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತ್ಯು
ಮಲ್ಪೆ, ಜು.29: ಬಡಾನಿಡಿಯೂರು ತೊಟ್ಟಂ ಬಳಿಯ ಸಮುದ್ರದಲ್ಲಿ ಜು.28ರಂದು ಅಪರಾಹ್ನ ವೇಳೆ ಮೀನುಗಾರರೊಬ್ಬರು ಆಕಸ್ಮಿಕವಾಗಿ ದೋಣಿಯಿಂದ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪೌಲ್ ಡಿಸಿಲ್ವ(57) ಎಂದು ಗುರುತಿಸಲಾಗಿದೆ.
ಇವರು ತೊಟ್ಟಂ ಕದಿಕೆಯ ಜನಾದರ್ನ ತಿಂಗಳಾಯ ಎಂಬವರ ಜಾಹ್ನವಿ ದೋಣಿ ಯಲ್ಲಿ ಇತರ ಮೀನುಗಾರರೊಂದಿಗೆ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದರು. ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ತರಲಾಯಿತಾದರೂ, ತೀವ್ರ ಅಸ್ವಸ್ಥಗೊಂಡು ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





