Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮಾಹಿತಿ - ಮಾರ್ಗದರ್ಶನ
  3. ಉತ್ತಮ ಸಂವಹನಕ್ಕೆ ಇಲ್ಲಿವೆ ಹತ್ತು...

ಉತ್ತಮ ಸಂವಹನಕ್ಕೆ ಇಲ್ಲಿವೆ ಹತ್ತು ಅತ್ಯುತ್ತಮ ಸಲಹೆಗಳು

ವಾರ್ತಾಭಾರತಿವಾರ್ತಾಭಾರತಿ30 July 2016 11:00 AM IST
share
ಉತ್ತಮ ಸಂವಹನಕ್ಕೆ ಇಲ್ಲಿವೆ ಹತ್ತು ಅತ್ಯುತ್ತಮ ಸಲಹೆಗಳು

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಕೇಳಿದ್ದೀರಲ್ಲ? ಆದರೆ ತಂತ್ರಜ್ಞಾನ ಅಭಿವೃದ್ಧಿ, ಚಾಟಿಂಗ್ ಆಪ್‌ಗಳ ಸರಣಿಯಂಥ ಅಂಶಗಳು ಸಹಜವಾಗಿಯೇ ನಮ್ಮ ಸಂವಹನ ಸಾಮರ್ಥ್ಯವನ್ನು ಕುಂದಿಸುತ್ತವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಮಾತಿಗಿಂತ ಟೆಕ್ಸ್ಟ್ ಮೆಸೇಜ್ ಅಥವಾ ಬ್ಲಾಗ್‌ಗಳಲ್ಲೇ ತಮ್ಮನ್ನು ಉತ್ತಮವಾಗಿ ಬಣ್ಣಿಸಿಕೊಳ್ಳುವ ಯುಗ ಇದು. ಬಹುಶಃ ನಾವು ಮಾತನಾಡುವುದು ಇನ್ನೊಬ್ಬರಿಗೆ ಉತ್ತರ ನೀಡಲು ಮಾತ್ರ! ಇಷ್ಟೇ ಅಲ್ಲ ಕೇಳಿಸಿಕೊಳ್ಳುವುದು ಕೂಡಾ ಹೊರೆ ಎಂಬ ಪರಿಸ್ಥಿತಿ. ಸಂವಹನವನ್ನು ಸಂಕ್ಷಿಪ್ತವಾಗಿ ಮುಗಿಸಲು ಬಯಸುವವರೇ ಅಧಿಕ. ನಮ್ಮ ಮಾತಿನ ಕಲೆ ನಿಧಾನವಾಗಿ ನಶಿಸಿಹೋಗುತ್ತಿದೆ. ಹಾಗಾದರೆ ಉತ್ತಮ ಸಂವಹನಕ್ಕೆ ಏನು ಮಾಡಬೇಕು? ಇಲ್ಲಿವೆ ನೋಡಿ, ಹತ್ತು ಉಪಯುಕ್ತ ಸಲಹೆಗಳು.

ಪ್ರಸ್ತುತವಾಗಿರಿ:

ಅನಗತ್ಯ ಅಂಶಗಳು ಬೇಡ. ನಿಮ್ಮ ಮಾತುಗಾರಿಕೆಯಲ್ಲಿ ನೀವು ಪ್ರಸ್ತುತವಾಗಿದ್ದಷ್ಟೂ, ನಿಮ್ಮ ಮಾತು ಕೇಳಲು ಸಹ್ಯವಾಗಿರುತ್ತದೆ. ನಿಮ್ಮ ಮಾತು ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವಂತಿರಲಿ. ಆ ಕ್ಷಣಕ್ಕೆ ಯಾವುದು ಪ್ರಸ್ತುತವೋ ಅಷ್ಟೇ ಇರಲಿ.

ಕೇಳಲು ಕಲಿಯಿರಿ:

ನಿಮಗೆ ಮಾತ್ರ ಎಲ್ಲ ತಿಳಿದಿದೆ ಎಂಬ ಮನೋಭಾವ ಬೇಡ. ಬೇರೆಯವರು ಹೇಳುವುದನ್ನು ಕೂಡಾ ಗಮನವಿಟ್ಟು ಕೇಳುವ ವ್ಯವಧಾನ ಇರಲಿ.

ಮುಕ್ತ ಪ್ರಶ್ನೆಗಳಿರಲಿ:

ಸಂವಾದ ಮುಂದುವರಿಸಲು ಪ್ರಶ್ನೋತ್ತರ ಸರಣಿ ಉತ್ತಮ ಮಾರ್ಗ. ಉದಾಹರಣೆಗೆ ನಿಮಗೆ ಸಿಟ್ಟು ಬಂತೇ ಎಂದು ಕೇಳಬೇಡಿ. ಬದಲಾಗಿ ತಕ್ಷಣಕ್ಕೆ ನಿಮಗೆ ಹೇಗನಿಸುತ್ತದೆ? ಎಂಬಂಥ ಪ್ರಶ್ನೆ ಕೇಳಿ. ಆಗ ಹೌದು ಅಥವಾ ಇಲ್ಲ ಎನ್ನುವುದಕ್ಕಿಂತ ಬದಲಾಗಿ ವಿವರಣಾತ್ಮಕ ಉತ್ತರ ಬರುತ್ತದೆ. ಆಗ ನೀವು ಎದುರು ವ್ಯಕ್ತಿಯ ಜತೆ ಉತ್ತಮ ಸಂಪರ್ಕ ಸಾಧಿಸಬಹುದು.

ಓಘ ಸರಾಗವಾಗಿರಲಿ:

ನಿಮ್ಮ ಮನಸ್ಸಿನಲ್ಲಿ ಸಂದೇಹ ಮೂಡಿದರೆ, ಕೇಳುವುದನ್ನು ನಿಲ್ಲಿಸಿ ಸುಮ್ಮನಾಗಬೇಡಿ. ಮಾತಿನ ಓಘ ಮುಂದುವರಿಯಲಿ. ಪ್ರಶ್ನೆ ಮತ್ತೆ ನಿಮಗೆ ಹಿಂದೆ ಬರುತ್ತದೆ.

ಎಲ್ಲವೂ ಗೊತ್ತಿದೆ ಎಂಬ ಭಾವನೆ ಬೇಡ:

ಹಲವು ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಾರದು. ಅದನ್ನು ಒಪ್ಪಿಕೊಂಡರೆ ತೊಂದರೆಯೇನೂ ಇಲ್ಲ. ಗೊತ್ತಿಲ್ಲ ಎಂದರೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಹೇಳಿ.

ಅನುಭವ ಹೋಲಿಕೆ ಬೇಡ:

ನಿಮಗೆ ಆಗಿರುವ ಕೆಟ್ಟ ಅನುಭವವೊಂದರ ಬಗ್ಗೆ ಹೇಳಿದರೆ, ನೀವು ಕೂಡಾ ನಿಮ್ಮ ಅದೇ ಬೇಸರದ ಕಥೆ ಹೇಳುವುದು ಬೇಡ. ಅದು ಆತನಿಗೆ ಅನಗತ್ಯ. ಪುನರಾವರ್ತನೆಯಂತೂ ಬೇಡವೇ ಬೇಡ.

ಸಣ್ಣ ಪುಟ್ಟ ವಿಷಯ ಬಿಟ್ಟುಬಿಡಿ:

ನೇರವಾಗಿ ವಿಷಯಕ್ಕೆ ಬನ್ನಿ. ತೀರಾ ಚಿಕ್ಕಪುಟ್ಟ ಘಟನೆಗಳನ್ನೂ ವಿವರಿಸುವ ಸಾಹಸ ಬೇಡ.

ಕೇಳಿ:

ಇದು ತೀರಾ ಮುಖ್ಯ. ಕಲಿಯಲು ಕೇಳಿ. ಪ್ರತಿಕ್ರಿಯಿಸುವ ಸಲುವಾಗಿ ಅಲ್ಲ.

ಸಂಕ್ಷಿಪ್ತವಾಗಿರಲಿ:

ಎಲ್ಲಕ್ಕಿಂತ ಪ್ರಮುಖ ಎಂದರೆ ನಿಮ್ಮ ಮಾತು ಚುಟುಕಾಗಿರಲಿ. ಮತ್ತೊಬ್ಬರಿಗೆ ಬೋರ್ ಹೊಡೆಸುವಂತೆ ಬೇಡ. ಮಿನಿಸ್ಕರ್ಟ್‌ನಂತೆ ಏನು ಬಿಚ್ಚಿಡಬೇಕೋ ಅದನ್ನು ಬಿಚ್ಚಿಡಬೇಕು; ಏನು ಮುಚ್ಚಿಡಬೇಕೋ ಅದನ್ನು ಮುಚ್ಚಿಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X