Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದ್ದಕ್ಕಿದ್ದಂತೆ ಒಂದು ದಿನ ನೀವು 'ಅಕ್ರಮ...

ಇದ್ದಕ್ಕಿದ್ದಂತೆ ಒಂದು ದಿನ ನೀವು 'ಅಕ್ರಮ ವಲಸಿಗ' ಎಂದು ಸರಕಾರ ಹೇಳಿದರೆ ?

ಮೊಯಿನುಲ್ ಮುಲ್ಲಾರ ಕರುಣಾಜನಕ ವ್ಯಥೆ ಕೇಳಿ

ವಾರ್ತಾಭಾರತಿವಾರ್ತಾಭಾರತಿ30 July 2016 3:13 PM IST
share
ಇದ್ದಕ್ಕಿದ್ದಂತೆ ಒಂದು ದಿನ ನೀವು ಅಕ್ರಮ ವಲಸಿಗ ಎಂದು ಸರಕಾರ ಹೇಳಿದರೆ ?

ನಿಮ್ಮ ಪೂರ್ಣ ಕುಟುಂಬಕ್ಕೆ ನೀವು ದೇಶದ ಪ್ರಜೆಯೆಂದು ಸಾಬೀತು ಮಾಡಲು ನೊಟೀಸು ಸಿಗುತ್ತದೆ ಎಂದುಕೊಳ್ಳಿ. ನಿಮ್ಮ ಹೆತ್ತವರು ಈ ದೇಶದ ಪ್ರಜೆಯೆಂದು ಮಾನ್ಯತೆ ಕೊಡುತ್ತಾರೆ. ಆದರೆ ನೀವು ಅನಕ್ಷರಸ್ಥರಾಗಿದ್ದು ಬಡತನದ ಕೆಳಗಿನ ರೇಖೆಯಲ್ಲಿ ನೆಲೆಸಿರುತ್ತೀರಿ. ವಕೀಲರ ಪ್ರಕಾರ ಹೆತ್ತವರು ಈ ದೇಶದ ಪ್ರಜೆಗಳೆನ್ನುವ ಪುರಾವೆ ಇರುವ ಕಾರಣ ಭಯಪಡಬೇಕಾಗಿಲ್ಲ.

ವಕೀಲರ ಮಾತು ಕೇಳಿ ಚಿಂತೆ ಮಾಡದೆ ಸುಮ್ಮನಿದ್ದಾಗಲೇ ವಿದೇಶಿಯರ ನ್ಯಾಯಮಂಡಳಿ ಅಕ್ರಮ ವಲಸಿಗರೆಂದು ಹೇಳುತ್ತದೆ. ಹೈಕೋರ್ಟ್ ಕೂಡ ನ್ಯಾಯ ಕೊಡುವುದಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಲು ಹಣವಿರುವುದಿಲ್ಲ. ಹೀಗಾಗಿ ವರ್ಷಗಟ್ಟಲೆ ಬಂಧನದಲ್ಲಿ ಕಳೆಯಬೇಕಾಗುತ್ತದೆ. ಅಂತಿಮವಾಗಿ ನಾಗರಿಕ ಹಕ್ಕುಗಳ ಸಂಘಟನೆ ಎಂವೈಸ್ ಫ್ಯಾಕ್ಟ್ಸ್ ನೆರವಿಗೆ ಬಂದು ಕುಟುಂಬ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತದೆ. ಸುಪ್ರೀಂಕೋರ್ಟ್ ನ್ಯಾಯಮಂಡಳಿ ಬಳಿ ಮರುವಿಚಾರಣೆಗೆ ಆದೇಶಿಸುತ್ತದೆ. ಆದರೆ ಅದಾಗಲೇ ವರ್ಷಾನುಗಟ್ಟಲೆ ಜೈಲಿನಲ್ಲಿ ಕಾಲ ಕಳೆದಾಗಿರುತ್ತದೆ. ಇದು ಮೊಯಿನುಲ್ ಮುಲ್ಲಾ ಎನ್ನುವ ಬರ್ಪೆಟ್ಟಾದ ಬಂಗಾಳಿ ಮುಸ್ಲಿಂ ಕುಟುಂಬದ ಕತೆ. 1998ರಲ್ಲಿ ಬರ್ಪೆಟ್ಟಾದ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಾಂತದಿಂದ ಮೂರು ಅಕ್ರಮ ವಲಸಿಗರ ಪ್ರಕರಣಗಳನ್ನು ನ್ಯಾಯಮಂಡಳಿಗೆ ಕಳುಹಿಸಿದ್ದರು. 2003ರಲ್ಲಿ ಐಎಂಡಿಟಿ ಬರ್ಪೆಟ್ಟಾದ ನ್ಯಾಯಮಂಡಳಿ ಮೊನಾಲ್ ಮೊಲ್ಲಾಹ್ ಹೆತ್ತವರು ಭಾರತೀಯ ಪ್ರಜೆಗಳೆಂದು ಹೇಳಿದೆ. ಐಎಂಡಿಟಿ ನ್ಯಾಯಮಂಡಳಿ ಮೊನಾಲ್ ಮೊಲ್ಲಾಹ್ ಪ್ರಕರಣ ಕೈಗೆತ್ತಿಕೊಳ್ಳಲಿಲ್ಲ. ಆದರೆ ಆಗ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿದ್ದ ಈಗಿನ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಕಾರಣ ಐಎಂಡಿಟಿ ಕಾಯ್ದೆ ರದ್ದಾಯಿತು. ಆಗ ಡಿ-ವೋಟರ್ ಮೊನಾಲ್ ಮೊಲ್ಲಾಹ್ ಪ್ರಕರಣ ಬರ್ಪೆಟ್ಟಾದ ವಿದೇಶಿಗರ ನ್ಯಾಯಮಂಡಳಿಗೆ ವರ್ಗಾವಣೆಯಾಯಿತು.

ಹಲವು ಬಾರಿ ನ್ಯಾಯಮಂಡಳಿ ಮುಂದೆ ಮೊಯಿನುಲ್ ಮುಲ್ಲಾ ಹಾಜರಾದರು. ಮೊಯಿನುಲ್ ಮುಲ್ಲಾ ಅವರ ಹಿಂದಿನ ವಕೀಲರು ಸರಿಯಾಗಿ ಸಲಹೆ ನೀಡಿರಲಿಲ್ಲ ಎಂದು ಈಗಿನ ವಕೀಲರು ಹೇಳುತ್ತಾರೆ. ಹೆತ್ತವರು ಭಾರತೀಯ ಪ್ರಜೆಯಾಗಿರುವ ಕಾರಣ ಚಿಂತೆಗೆ ಕಾರಣವಿಲ್ಲ. ಹೀಗಾಗಿ ವಿದೇಶಿಗರ ನ್ಯಾಯಮಂಡಳಿ ಮುಂದೆ ಹಾಜರಾಗಬೇಕಿಲ್ಲ ಎಂದು ಹಿಂದಿನ ವಕೀಲರು ಹೇಳಿದ್ದರು. ಅನಕ್ಷರಸ್ತ ಮೊನಾಲ್ ಮೊಲ್ಲಾಹ್ ಈ ಕೌನ್ಸಲನ್ನು ನಂಬದೆ ಇರಲು ಕಾರಣಗಳಿರಲಿಲ್ಲ. ಆದರೆ ನ್ಯಾಯಮಂಡಳಿಯ ಮುಂದೆ ಹಾಜರಾಗದ ಮೊಯಿನುಲ್ ಮುಲ್ಲಾರಿಗೆ 2010ರಲ್ಲಿ ವಿದೇಶಿಗನೆನ್ನುವ ಪಟ್ಟ ಸಿಕ್ಕಿತು. ಮೊಯಿನುಲ್ ಮುಲ್ಲಾಗೆ ತನ್ನ ತಪ್ಪಿನ ಅರಿವಾಗಿ ತನ್ನ ವಕೀಲರ ಮೇಲೆ ಬಾರ್ ಕೌನ್ಸಿಲಲ್ಲಿ ದೂರು ನೀಡಿ ಹೈಕೋರ್ಟಿಗೆ ಹೋದರು. ಹೈಕೋರ್ಟ್ ಅರ್ಜಿ ತಿರಸ್ಕರಿಸಿ ಮೊಯಿನುಲ್ ಮುಲ್ಲಾರನ್ನು ದೇಶದಿಂದ ಹೊರಗೆ ಕಳುಹಿಸಲು ಆದೇಶಿಸಿತು. 2013 ಸೆಪ್ಟಂಬರಲ್ಲಿ ಪೊಲೀಸರು ಅವರನ್ನು ಬಂಧಿಸಿ ಗೋಲಾಪಾರ ಶಿಬಿರದಲ್ಲಿ ಬಂಧನದಲ್ಲಿಟ್ಟಿತು

ಸ್ವಾತಂತ್ರ್ಯ ಬಂದಂದಿನಿಂದ ಮೊಯಿನುಲ್ ಮುಲ್ಲಾ ಅವರ ಹೆತ್ತವರು, ಮುತ್ತಜ್ಜ ಕೂಡ ಭಾರತದಲ್ಲಿ ಮತ ಹಾಕಿದ್ದಾರೆ. ಮೊಯಿನುಲ್ ಮುಲ್ಲಾರ ಮುತ್ತಾತನ ಬಳಿ ಭೂಮಿಯ ದಾಖಲೆ ಕೂಡ ಸ್ವಾತಂತ್ರ್ಯಕ್ಕೆ ಮೊದಲೇ ಇತ್ತು. ಈ ದಾಖಲೆಗಳನ್ನು ಹೈಕೋರ್ಟ್ ಮುಂದಿಟ್ಟರೂ ಅದನ್ನು ಪರಿಗಣಿಸಿರಲಿಲ್ಲ. ಈಗ ಸುಪ್ರೀಂಕೋರ್ಟ್ ಮೊಯಿನುಲ್ ಮುಲ್ಲಾಗೆ ಎರಡನೇ ಅವಕಾಶ ನೀಡಿದೆ. ನಾಲ್ಕು ವಾರಗಳಲ್ಲಿ ಮತ್ತೆ ನ್ಯಾಯಮಂಡಳಿ ಮುಂದೆ ಅವರು ಹಾಜರಾಗಬೇಕಿದೆ. ಇದು ದೊಡ್ಡ ವಿಜಯ. ಬಡ ಅನಕ್ಷರಸ್ತ ಜನರನ್ನು ತಪ್ಪಾಗಿ ವಿದೇಶಿಗರು ಎಂದು ನ್ಯಾಯಮಂಡಳಿ ಮುಂದೆ ಇಡಲಾಗುತ್ತಿದೆ ಎಂದು ಮೈಫ್ಯಾಕ್ಟ್ಸ್‌ನ ವಕೀಲ ಅಮನ್ ವಾಡಡ್ ಹೇಳುತ್ತಾರೆ. 52,000ಕ್ಕೂ ಅಧಿಕ ಮಂದಿಯನ್ನು ನ್ಯಾಯಮಂಡಳಿ ವಿದೇಶಿಗರೆಂದು ಹೇಳಿದೆ. ಅವರಲ್ಲಿ ಬಹಳಷ್ಟು ಮಂದಿ ಅಕ್ರಮ ವಲಸಿಗರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಅವರ ಪೌರತ್ವವನ್ನು ರದ್ದು ಮಾಡಲಾಗಿದೆ. ಈಗಿನ ಸರ್ಕಾರ ಅಸ್ಸಾಂನ್ನು ಅಕ್ರಮ ವಲಸಿಗರಿಂದ ಮುಕ್ತವನ್ನಾಗಿಸಲು ಪಣತೊಟ್ಟಿದೆ. ಆದರೆ ಇದರಿಂದ ಯಾರಿಗೂ ತೊಂದರೆಯಾಗದಂತೆ ನಿಭಾಯಿಸಬೇಕಿದೆ.

ಕೃಪೆ: www.news18.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X