ಕರ್ನಾಟಕ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಶೂನ್ಯ ಪ್ರತಿಕ್ರಿಯೆ
ಉಡುಪಿ, ಜು.30: ಮಹಾದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಇಂದಿನ ಕರ್ನಾಟಕ ಬಂದ್ಗೆ ಉಡುಪಿ ಜಿಲ್ಲೆಯಲ್ಲಿ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರ ರದ್ದಾಗಿದ್ದು ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಬಂದ್ ಯಾವುದೇ ಪರಿಣಾಮ ಬೀರಲಿಲ್ಲ. ಜಿಲ್ಲೆಯ ಎಲ್ಲ ಶಾಲೆ-ಕಾಲೇಜು, ಸರಕಾರಿ ಹಾಗೂ ಖಾಸಗಿ ಕಚೇರಿಗಳು, ಅಂಗಡಿ-ಮುಂಗಟ್ಟುಗಳು ಪ್ರತಿದಿನದಂತೆ ಕಾರ್ಯ ನಿರ್ವಹಿಸಿದವು.
ಕೆಎಸ್ಸಾರ್ಟಿಸಿ ಸಿಬ್ಬಂದಿ ಬಂದ್ಗೆ ಬೆಂಬಲ ಘೋಷಿಸಿದ್ದರಿಂದ ಬಸ್ಗಳು ಇಂದು ರಸ್ತೆ ಗಿಳಿಯಲಿಲ್ಲ. ರಾಜ್ಯ ಸಾರಿಗೆ ಬಸ್ಗಳನ್ನು ನಂಬಿದ್ದ ಕುಂದಾಪುರದ ಗ್ರಾಮೀಣ ಪ್ರದೇಶಗಳ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ಮಾತ್ರ ಇಂದು ಖಾಸಗಿ ಬಸ್ಗಳನ್ನು ಅವಲಂಬಿ ಸಬೇಕಾಯಿತು. ಉಡುಪಿ-ಮಂಗಳೂರು ನಡುವಿನ ಎಕ್ಸ್ಪ್ರೆಸ್ ಹಾಗೂ ಸರ್ವಿಸ್ ಬಸ್ ಗಳ ಸಂಚಾರ ಎಂದಿನಂತಿತ್ತು. ಸಿಟಿ ಬಸ್ಗಳು ಸಹ ಪ್ರತಿದಿನದಂತೆ ಓಡಾ ಡಿದವು. ರಿಕ್ಷಾ, ಟ್ಯಾಕ್ಸಿಗಳೂ ಇದಕ್ಕೆ ಹೊರತಾಗಿರಲಿಲ್ಲ. ಒಟ್ಟಿನಲ್ಲಿ ಮಹಾ ದಾಯಿ ಸಮಸ್ಯೆಗೆ ಉಡುಪಿ ಜಿಲ್ಲೆಯ ಜನತೆ ನೀರಸ ಪ್ರತಿಕ್ರಿಯೆ ನೀಡಿದೆ.





