ಸಂಪೂರ್ಣ ಪಾನನಿಷೇಧ: ಬಿಹಾರ ಸರಕಾರ ಯು ಟರ್ನ್
ಶೇಂದಿ ಓಕೆ ! ಬ್ರಾಂಡಿ, ವಿಸ್ಕಿ ಯಾಕೆ?
ಪಟ್ನಾ, ಜು.31: ವಿಧಾನಸಭೆಯಲ್ಲಿ ಬಿಹಾರ ಪಾನನಿಷೇಧ ಹಾಗೂ ಅಬ್ಕಾರಿ ಮಸೂದೆ-2016ನ್ನು ಮಂಡಿಸಿದ 24 ಗಂಟೆಗಳ ಒಳಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದಿಢೀರ್ ನಿಲುವು ಬದಲಿಸಿ, ಪಾನನಿಷೇಧ ಪಟ್ಟಿಯಿಂದ ಶೇಂದಿಯನ್ನು ಹೊರಡಿರುವ ನಿರ್ಧಾರ ಕೈಗೊಂಡಿದ್ದಾರೆ.
ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ಒತ್ತಡಕ್ಕೆ ಮಣಿದು ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ. ಶುಕ್ರವಾರ ತಡರಾತ್ರಿ ಸಿಎಂ ನಿತೀಶ್ ಕುಮಾರ್ ಹಾಗೂ ಲಾಲೂ ನಡುವೆ ನಡೆದ ಮಾತುಕತೆಯಲ್ಲಿ, ಶೇಂದಿ ನಿಷೇಧ ಮಾಡದಂತೆ ಲಾಲೂ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ. ಬಿಹಾರ ಸಮ್ಮಿಶ್ರ ಸರಕಾರದಲ್ಲಿ ಆರ್ ಜೆಡಿ ಅತಿದೊಡ್ಡ ಅಂಗಪಕ್ಷವಾಗಿದೆ. ಆರ್ಜೆಡಿ 80, ಜೆಡಿಯು 71 ಹಾಗೂ ಕಾಂಗ್ರೆಸ್ 27 ಶಾಸಕರನ್ನು ಹೊಂದಿದೆ.
ಶನಿವಾರ ನಡೆದ ಸಂಪುಟಸಭೆಯಲ್ಲಿ ಈ ವಿಷಯ ಚರ್ಚಿಸಿ, ಶೇಂದಿ ನಿಷೇಧ ಹೇರದಿರಲು ನಿರ್ಧರಿಸಿ, ಮಸೂದೆಗೆ ಸೂಕ್ತ ತಿದ್ದುಪಡಿ ತರಲು ನಿರ್ಧರಿಸಲಾಯಿತು.
Next Story