ಶಾಲೆಗೆ ಶ್ರೀರಾಮಸೇನೆ ದಾಳಿ ಪ್ರಕರಣ:ಮೂವರ ಬಂಧನ
![ಶಾಲೆಗೆ ಶ್ರೀರಾಮಸೇನೆ ದಾಳಿ ಪ್ರಕರಣ:ಮೂವರ ಬಂಧನ ಶಾಲೆಗೆ ಶ್ರೀರಾಮಸೇನೆ ದಾಳಿ ಪ್ರಕರಣ:ಮೂವರ ಬಂಧನ](https://www.varthabharati.in/sites/default/files/images/articles/2016/07/31/IMG-20160730-WA0015_0.jpg)
ಮಂಗಳೂರು,ಜು.31: ನಗರದ ಹೊರವಲಯದ ನೀರುಮಾರ್ಗ ಸಮೀಪದ ಬೊಂಡಂತಿಲ ಪಡು ಎಂಬಲ್ಲಿರುವ ಸೈಂಟ್ ಥೋಮಸ್ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್, ಉರ್ದು ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ಶಾಲೆಗೆ ದಾಳಿ ನಡೆಸಿದ ಮೂವರು ಶ್ರೀರಾಮಸೇನೆ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮ ಸೇನೆಯ ಕಾರ್ಯಕರ್ತರಾದ ಸಂತೋಷ್, ನಿತಿನ್ ಮತ್ತು ದಿನೇಶ್ ಎಂಬವರನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಹಲವು ಕಾರ್ಯಕರ್ತರ ಶೋಧವನ್ನು ಪೊಲೀಸರು ನಡೆಸುತ್ತಿದ್ದಾರೆ.
Next Story