Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ತೃತೀಯ ರಂಗ ರಚನೆಗೆ ಇದು ಸಕಾಲ.

ತೃತೀಯ ರಂಗ ರಚನೆಗೆ ಇದು ಸಕಾಲ.

ವಾರ್ತಾಭಾರತಿವಾರ್ತಾಭಾರತಿ31 July 2016 11:35 PM IST
share
ತೃತೀಯ ರಂಗ ರಚನೆಗೆ ಇದು ಸಕಾಲ.

ತೃತೀಯ ರಂಗ ರಚನೆಗೆ ಇದು ಸಕಾಲ.

- ಎಂ.ಸಿ.ನಾಣಯ್ಯ, ಜೆಡಿಎಸ್ ನಾಯಕ

ಇಲ್ಲವಾದರೆ ತನ್ನ ರಾಜಕೀಯ ಬದುಕು ಇಲ್ಲಿಗೇ ಮುಗಿದು ಹೋಗಬಹುದು ಎಂಬ ಆತಂಕವಿರಬೇಕು.

---------------------

ಮೋದಿ ಸರಕಾರದ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೇ ಆರ್ಥಿಕ ಸುಧಾರಣೆಗೆ ಅಡ್ಡಿ.

- ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

ದೇಶ ವಿರೋಧಿ ಮನಸ್ಥಿತಿ ಪರವಾಗಿಲ್ಲ ಅಂತೀರಾ?

---------------------

ಕನ್ನಡ ಭಾಷೆಯ ಉಳಿವಿಗಾಗಿ ಇಂದಿಗೂ ಹೋರಾಟ ನಡೆಸುತ್ತಿರುವುದು ವಿಷಾದನೀಯ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನೀವು ನಿಮ್ಮ ಉಳಿವಿಗಾಗಿ ಬಿಜೆಪಿಯೊಳಗೆ ಹೋರಾಟ ನಡೆಸುತ್ತಿರುವುದು ಕೂಡ.

---------------------

ನಮ್ಮನ್ನು ಜೆಡಿಎಸ್‌ನಲ್ಲೇ ಉಳಿಸಿಕೊಂಡರೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ.

-ಝಮೀರ್ ಅಹ್ಮದ್, ಜೆಡಿಎಸ್ ಭಿನ್ನಮತೀಯ ಶಾಸಕ

ನಿಮ್ಮನ್ನು ಹೊರ ಹಾಕಿ, ಕುಮಾರಸ್ವಾಮಿಯನ್ನು ಪ್ರಧಾನಮಂತ್ರಿ ಮಾಡುವ ಆಲೋಚನೆಯಲ್ಲಿದ್ದಾರೆ ದೇವೇಗೌಡರು.

---------------------

ತೆರಿಗೆಗಳ್ಳರಿಗೆ ಇನ್ನು ವಿನಾಯಿತಿ ಇಲ್ಲ.

- ಅರುಣ್ ಜೇಟ್ಲಿ, ಕೇಂದ್ರ ಸಚಿವ

ಕಳ್ಳರನ್ನೆಲ್ಲ ವಿದೇಶಗಳಿಗೆ ರವಾನಿಸಿದ ಬಳಿಕ ಘೋಷಣೆಯೇ?

---------------------

ಕೆಎಸ್ಸಾರ್ಟಿಸಿ ಲಾಭ ಮಾಡಿಕೊಳ್ಳುವುದಕ್ಕಾಗಿ ಹುಟ್ಟಿದ ಸಂಸ್ಥೆ ಅಲ್ಲ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕೆಎಸ್ಸಾರ್ಟಿಸಿ ಲಾಭ ಮಾಡದೇ ಇದ್ದರೇನಾಯಿತು, ರಾಜಕಾರಣಿಗಳು, ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರಲ್ಲ.

--------------------

ಮೋದಿ ಸರಕಾರದಲ್ಲಿ ಭಾರತ ಸುರಕ್ಷಿತವಾಗಿದೆ.

- ಮೋಹನ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಭಾರತದ ಸುರಕ್ಷತೆಯ ಕುರಿತಂತೆ ಆತಂಕವಿದೆ.

--------------------

ಬದುಕಿನ ಪ್ರಶ್ನೆಗೆ ಉತ್ತರ ಹುಡುಕಿದವನು ಸಂತನಾಗುತ್ತಾನೆ.

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹಾಗೆ ಉತ್ತರ ಹುಡುಕಲು ಹೊರಟು ಜೈಲಿ ಸೇರಿದವರೂ ಇದ್ದಾರೆ.

--------------------

ಪಂಜಾಬನ್ನು ಬಿಡೆಂದರು, ಬಿಜೆಪಿಯನ್ನೇ ಬಿಟ್ಟೆ.

- ನವಜೋತ್ ಸಿಂಗ್‌ಸಿಧು, ರಾಜ್ಯಸಭೆಯ ಮಾಜಿ ಸದಸ್ಯ

ಬಿಜೆಪಿಯ ಅದೃಷ್ಟ, ಪಂಜಾಬಿನ ದುರದೃಷ್ಟ.

---------------------

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಮೇಲೆ ನಿಗಾ ವಹಿಸಲು ಶರಿಯಾ ರೀತಿಯ ಕಾನೂನಿನ ಅಗತ್ಯವಿದೆ.

- ರಾಜ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ

ಸದ್ಯಕ್ಕೆ ಸಂವಿಧಾನದ ಕಾನೂನುಗಳಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ.

--------------------

ಯೋತ್ಪಾದನೆ ವಿಷಯದಲ್ಲಿ ಮೋದಿ ಸರಕಾರ ಮೃದು ಧೋರಣೆ ಅನುಸರಿಸುತ್ತಿದೆ.

- ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

ಮತ್ತು ಶಿವಸೇನೆಯ ವಿಷಯದಲ್ಲಿ ಕಠಿಣ ಧೋರಣೆ ಅನುಸರಿಸುತ್ತಿದೆ ಎಂಬ ಆಕ್ಷೇಪವೇ?

---------------------

ಸಿದ್ದರಾಮಯ್ಯ ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.

- ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

ಅದೇನೇ ಸಂಚು ಮಾಡಿದರೂ ಸಿದ್ದರಾಮಯ್ಯ ಕೆಳಗೆ ಇಳಿಯದೇ ಇರುವ ಕಾರಣಕ್ಕಾಗಿಯೆ?

---------------------

ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದೆ.

- ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

ಗ್ರಾಮಪಂಚಾಯತ್‌ನ ಕುರ್ಚಿಯೂ ದಕ್ಕದ ಮಾಜಿ ಸಚಿವರ ಹತಾಷೆಯ ಹೇಳಿಕೆ.

---------------------

ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಲು ಪುನಃ ಅಧಿವೇಶನ ಕರೆಯಬೇಕು.

- ಈಶ್ವರಪ್ಪ, ಬಿಜೆಪಿ ನಾಯಕ

ಮತ್ತು ಬಳಿಕ ಧರಣಿಯ ಹೆಸರಲ್ಲಿ ಅದನ್ನು ಪೋಲು ಮಾಡಬೇಕು ಅಲ್ಲವೆ?

---------------------

ರಾಷ್ಟ್ರಪತಿ ಪ್ರಣವ್ ಮುಖರ್ಜಿ ನನ್ನ ಗುರು.

- ನರೇಂದ್ರ ಮೋದಿ, ಪ್ರಧಾನಿ

ಇಂತಹ ಅದೆಷ್ಟು ಗುರುಗಳು ಕಾಂಗ್ರೆಸ್‌ನೊಳಗೆ ಅಜ್ಞಾತವಾಗಿದ್ದಾರೆಯೋ ಯಾರಿಗೆ ಗೊತ್ತು?

---------------------

ಪ್ರಧಾನಿ ಮೋದಿ ನನ್ನನ್ನು ಕೊಲ್ಲಿಸಬಹುದು.

- ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಅವರ ಕಾರು ವೇಗವಾಗಿ ಹೋಗುತ್ತಿರುವಾಗ ಜಾಗೃತೆಯಾಗಿರಿ.

--------------------

ಬೇಳೆ ಕಾಳುಗಳನ್ನು ಹೊರತುಪಡಿಸಿ ಬೇರೆ ಯಾವ ಆಹಾರ ಉತ್ಪನ್ನಗಳ ಬೆಲೆಯೂ ಏರಿಲ್ಲ.

- ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಇಂತಹ ಹೇಳಿಕೆಗಳಿಂದ ತಮ್ಮ ಬೆಲೆ ದಿನದಿಂದ ದಿನಕ್ಕೆ ಇಳಿಯುತ್ತಿದೆ.

---------------------

ಭಾರತದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ.

- ನಳಿನ್ ಕುಮಾರ ಕಟೀಲು, ಸಂಸದ

ಅದನ್ನು ಶಾಖೆ ಎಂದು ತಿದ್ದಿದರೆ ಒಳ್ಳೆಯದಿತ್ತು.

--------------------

ಉಗ್ರ ಬುರ್ಹಾನ್‌ವಾನಿಗೆ ಜೀವದಾನ ನೀಡಬೇಕಿತ್ತು.

- ಮೆಹೆಬೂಬ ಮುಫ್ತಿ, ಜಮ್ಮುಕಾಶ್ಮೀರ ಮುಖ್ಯಮಂತ್ರಿ

ಜೀವ ತೆಗೆಯುವುದಕ್ಕೆಂದು ನಿಯೋಜಿಸಲ್ಪಟ್ಟವಲ್ಲಿ ಜೀವ ದಾನವನ್ನು ಕೇಳಿದರೆ ಹೇಗೆ?

---------------------

ನವಜೋತ್ ಸಿಂಗ್‌ಸಿಧು ರೀತಿಯ ಅವಕಾಶವಾದಿಗಳಿಗೆ ಪಂಜಾಬಿನಲ್ಲಿ ಜಾಗವಿಲ್ಲ.

- ಪ್ರಕಾಶ್ ಸಿಂಗ್ ಬಾದಲ್, ಪಂಜಾಬ್ ಮುಖ್ಯಮಂತ್ರಿ

ಬರೇ ಡ್ರಗ್ಸ್‌ವಾದಿಗಳಿಗೆ ಮಾತ್ರವೇ?

---------------------

ಪ್ರಧಾನಿ ಮೋದಿ ಜನರಿಗೆ ಏನು ಬೇಕೋ ಅದನ್ನು ಮಾಡುತ್ತಿಲ್ಲ.

- ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ಯಾವ ಪ್ರಶಸ್ತಿ ಬೇಕು ಹೇಳಿ, ಕೊಡುತ್ತೇವೆ ಎನ್ನುತ್ತಿದ್ದಾರೆ ಮೋದಿ ಬಳಗ.

---------------------

ಸಮಸ್ಯೆ ಮತ್ತು ಪರಿಹಾರ ಎರಡು ನಮ್ಮೊಳಗೇ ಇರುತ್ತವೆ.

- ರಮ್ಯಾ, ಕಾಂಗ್ರೆಸ್ ನಾಯಕಿ

ಯಾವ ಸಿನಿಮಾದ ಸಂಭಾಷಣೆ?

---------------------

ನನ್ನ ಜೀವನ ಮಹಿಳೆಯರಿಂದಲೇ ರೂಪಿತವಾಗಿದೆ.

-ಶಾರುಖ್ ಖಾನ್, ಬಾಲಿವುಡ್ ನಟ

ಅದೆಷ್ಟು ಮಹಿಳೆಯರು ಅದಕ್ಕಾಗಿ ಬಲಿಯಾಗಬೇಕಾಯಿತು ಎನ್ನುವುದನ್ನೂ ಹೇಳಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X