ವಿದ್ಯುತ್ ಪರಿವರ್ತಕಕ್ಕೆ ಕಾರು ಢಿಕ್ಕಿ ನಾಲ್ವರು ಪಾರು
![ವಿದ್ಯುತ್ ಪರಿವರ್ತಕಕ್ಕೆ ಕಾರು ಢಿಕ್ಕಿ ನಾಲ್ವರು ಪಾರು ವಿದ್ಯುತ್ ಪರಿವರ್ತಕಕ್ಕೆ ಕಾರು ಢಿಕ್ಕಿ ನಾಲ್ವರು ಪಾರು](https://www.varthabharati.in/sites/default/files/images/articles/2016/07/31/transformer.jpg)
ಮೂಡುಬಿದಿರೆ, ಜು.31: ವಿದ್ಯುತ್ ಪರಿವರ್ತಕಕ್ಕೆ ಕಾರೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಪರಿವರ್ತಕ ಮತ್ತು ಕಾರು ಸಂಪೂರ್ಣ ಜಖಂ ಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಭಾರೀ ಅನಾಹುತದಿಂದ ಪಾರಾಗಿದ್ದಾರೆ.
ಮೂಡುಬಿದಿರೆ ಸಮೀಪದ ಕಡಂ ದಲೆ ಬಳಿಯ ಗೋಳಿದಡಿ ಎಂಬಲ್ಲಿ ರವಿವಾರ ಸಂಜೆ ಈ ಘಟನೆ ನಡೆ ದಿದೆ. ಸಚ್ಚೇರಿಪೇಟೆ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಐ10 ಕಾರೊಂದು ಅತೀ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿಚರಂಡಿಯ ಮೂಲಕ ಹಾದು ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆ ದಿದೆ. ಈ ಸಂದರ್ಭ ಟ್ರಾನ್ಸ್ಫಾರ್ಮರ್ ಸಂಪೂರ್ಣ ನೆಲಕ್ಕುರುಳಿದ್ದು, ಕಾರು ಕೂಡ ಜಖಂಗೊಂಡಿದೆ. ಕಾರಿನಲ್ಲಿ ಚಾಲಕ ಸಹಿತ ನಾಲ್ವರು ಪ್ರಯಾಣಿಸು ತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂನ ಬೆಳ್ಮಣ್ ವಿಭಾಗದ ಶಾಖಾಧಿಕಾರಿ ಪ್ರದೀಪ್ ಕುಮಾರ್, ದಕ ಜಿಪಂ ಸದಸ್ಯ ಸುಚರಿತ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರವಾದ ಮೆಸ್ಕಾಂ ಮಾಜಿ ಉದ್ಯೋಗಿ
ಈ ಹಿಂದೆ ಮೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಸಿಬ್ಬಂದಿ ಗುಣಪಾಲ್ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಇವರಿಗೆ ಮೆಸ್ಕಾಂ ಉದ್ಯೋಗವನ್ನು ಖಾಯಂ ಮಾಡದಿದ್ದರೂ ಇವರು ಅಪಾಯವನ್ನು ತಪ್ಪಿಸಿದ್ದು, ಇದನ್ನು ನೆರೆದಿದ್ದ ಜನ ಶ್ಲಾಘಿಸಿದ್ದಾರೆ. ಇನ್ನೋರ್ವ ಸಿಬ್ಬಂದಿ ಪ್ರವೀಣ್ ಡಿಸೋಜಾ ರಸ್ತೆಗೆ ಬಿದ್ದ ಟ್ರಾನ್ಸ್ಫಾರ್ಮರ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ನೆರವಾದರು.