Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಒಲಿಂಪಿಕ್ ಗೆ 'ನಡೆದ' ಹಾಲು ಮಾರುವ ಹುಡುಗ...

ಒಲಿಂಪಿಕ್ ಗೆ 'ನಡೆದ' ಹಾಲು ಮಾರುವ ಹುಡುಗ ಮನೀಶ್ !

ಭಾರತದ ಒಲಿಂಪಿಕ್ ತಾರೆಗಳು

ವಾರ್ತಾಭಾರತಿವಾರ್ತಾಭಾರತಿ1 Aug 2016 5:29 PM IST
share
ಒಲಿಂಪಿಕ್ ಗೆ ನಡೆದ ಹಾಲು ಮಾರುವ ಹುಡುಗ ಮನೀಶ್ !

ಡೆಹ್ರಾಡೂನ್, ಆಗಸ್ಟ್ 1: ಬದ್ರೀನಾಥದ ಹೋಟೇಲ್‌ನಲ್ಲಿ ವೈಟರ್ ಕೆಲಸಮಾಡುವ ಜೊತೆಗೆ ಹಾಲು ಮಾರಾಟ ಮಾಡುತ್ತಿದ್ದ ಮನೀಷ್ ರಾವತ್ ತನ್ನ ಪರಿಶ್ರಮದಿಂದ ರಿಯೊ ಒಲಿಂಪಿಕ್ಸ್ ವರೆಗೆ ತಲುಪಿದ್ದಾನೆ. ಸದ್ಯ ಉತ್ತರಾಖಂಡಪೊಲೀಸ್‌ನಲ್ಲಿ ಉದ್ಯೋಗಿಯಾಗಿರುವ ಮನೀಷ್ 20ಕಿಲೋಮೀಟರ್ ನಡಿಗೆ ಸ್ಪರ್ಧಾ ವಿಭಾಗದಲ್ಲಿ ಭಾರತವನ್ನು ರಿಯೊ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಶುಕ್ರವಾರ ರಿಯೊಗೆ ಬಂದಿಳಿದಿರುವ ಮನೀಷ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರೆಗಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. "ಬೆರ್ಗಾನದಲ್ಲಿ ಕಾಲೇಜು ಓದುತ್ತಿದ್ದಾಗ ನನ್ನ ಮನೆಯಿಂದ ಏಳು ಕಿಲೋಮೀಟರ್ ದೂರದ ಕಾಲೇಜಿಗೆ ನಡೆದುಕೊಂಡು ಬರುತ್ತಿದ್ದೆ. ಹೀಗೆ ದಿನಾಲೂ ಹದಿನಾಲ್ಕು ಕಿಲೊಮೀಟರ್ ನಡೆದದ್ದರಿಂದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈಗ ಒಲಿಂಪಿಕ್ಸ್‌ಗೂ ಆಯ್ಕೆಯಾಗಿದ್ದೇನೆ ಎಂದು ಹೇಳಿದ್ದಾರೆ.

2002ರಲ್ಲಿ ಮನೀಷ್ ತಂದೆ ನಿಧನರಾದ ಬಳಿಕ ಹಿರಿಯ ಮಗಆಗಿದ್ದರಿಂದ ಮನೆಯ ಜವಾಬ್ದಾರಿ ಮನೀಷ್ ಹೆಗಲಿಗೇರಿತ್ತು. ಆದ್ದರಿಂದ ಕೃಷಿಕೆಲಸದ ಜೊತೆಗೆ ಎಲ್ಲ ಕೆಲಸವನ್ನು ಅವರು ಮಾಡುತ್ತಿದ್ದರು. ಈ ಕೆಲಸಗಳಿಂದ ಅವರಿಗೆ ಸ್ವಲ್ಪ ಸಂಪಾದನೆ ಆಗುತ್ತಿತ್ತು. 2006ರಲ್ಲಿ ಬದ್ರಿನಾಥದ ಒಂದು ಹೊಟೇಲ್‌ನಲ್ಲಿ ವೈಟರ್ ಆಗಿ ಕೆಲಸ ಮಾಡಿದ್ದರು. ಯಾತ್ರಾರ್ಥಿಗಳಿಗೆ ಗೈಡ್ ಆಗಿಯೂ ರುದ್ರನಾಥಕ್ಕೆ ಹೋಗುತ್ತಿದ್ದರು. ಬದುಕು ಎಲ್ಲ ಸವಾಲುಗಳನ್ನು ಎದುರಿಸುವ ಕಲೆಯನ್ನು ಅವರಿಗೆ ಕಲಿಸಿಕೊಟ್ಟಿತ್ತು. ಬಹಳ ಕಷ್ಟದಿಂದ ದಿನದೂಡಬೇಕಾದ ಸ್ಥಿತಿ ಅಂದಿದ್ದರೂ ಕ್ರೀಡೆಯ ಸಹವಾಸವನ್ನು ಅವರು ತೊರೆಯಲಿಲ್ಲ. ಒಂದು ಸಲ ಅವರು ಗೋಪೇಶ್ವರ ಸ್ಟೇಡಿಯಂನಲ್ಲಿ ಕೋಚ್ ಆಗಿದ್ದ ಅನೂಪ್ ಬಿಷ್ಟ್‌ರನ್ನು ಭೇಟಿಯಾಗಿದ್ದರು. ಅನೂಪ್‌ಮನಿಷ್‌ಗೆ ಗೋಪೇಶ್ವರದಲ್ಲಿ ಪ್ರವೇಶ ದೊರಕಿಸಿಕೊಟ್ಟಿದ್ದರು.

ಅನೂಪ್ ಬಿಷ್ಟ್ ಮಾರ್ಗದರ್ಶನದಂತೆ ಮನೀಷ್ ನಡಿಗೆ ಸ್ಪರ್ಧಾ ಕ್ಷೇತ್ರವನ್ನುಆಯ್ಕೆಮಾಡಿಕೊಂಡರು.. ಅಲ್ಲಿಂದ ತಾನು ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದೆ ಎಂದು ಮನೀಷ್ ಅನೂಪ್ ಬಿಸ್ಟ್‌ರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಮನೀಷ್‌ರಿಗೆ ತರಬೇತಿ ಮಾತ್ರವಲ್ಲ ಆರ್ಥಿಕ ಸಹಾಯವನ್ನು ಅನೂಪ್ ನೀಡಿದ್ದರು. ನಂತರ 2011ರಲ್ಲಿ ಉತ್ತರಾಖಂಡ ಪೊಲೀಸ್‌ನಲ್ಲಿ ಕ್ರೀಡಾ ಕೋಟದಲ್ಲಿ ಮನೀಷ್‌ಗೆ ಕೆಲಸ ಸಿಕ್ಕಿತ್ತು. 2012ರಲ್ಲಿಅವರು ಆಲ್‌ಇಂಡಿಯ ಪೊಲೀಸ್ ಚಾಂಪಿಯನ್ ಶಿಪ್‌ನ ನಡಿಗೆ ಸ್ಪರ್ಧೆಯಲ್ಲಿ ಕಂಚು ಗೆದ್ದರು. ಒಂದು ಗಂಟೆ ಇಪ್ಪತ್ತೈದು ನಿಮಿಷ ಸಮಯದಲ್ಲಿ ಇಲ್ಲಿ ದೂರವನ್ನು ಕ್ರಮಿಸಿದ್ದರು. ಲಂಡನ್ ಒಲಿಂಪಿಕ್‌ನಲ್ಲಿ ಕಂಚು ಪಡೆದಿದ್ದ ಕ್ರೀಡಾಪಟು ಒಂದು ಗಂಟೆ 22 ನಿಮಿಷದಲ್ಲಿ ಅವರಷ್ಟೇ ದೂರವನ್ನು ಕ್ರಮಿಸಿದ್ದರು. ಇದನ್ನು ನೋಡಿದ ಕೋಚ್ ಅನೂಪ್ ಸರ್ ಮನೀಷ್ ನಿನ್ನ ಗುರಿ ಒಲಿಂಪಿಕ್ ಎಂದು ಆಗ ಹೇಳಿದ್ದರು.ತಯಾರಿಗಾಗಿ ಪಟಿಯಾಲಕ್ಕೆ ಹೋಗಬೇಕೆಂದು ಸಲಹೆ ನೀಡಿದರು. ಅದರಂತೆ ಮನೀಷ್ ಪಟಿಯಾಲಕ್ಕೆ ಹೋದರು. ಅನೂಪ್ ಸರ್ ಅವರಿಗೆ ಬೇಕಾದ ಸಹಾಯಹಸ್ತ ಚಾಚುತ್ತಲೇ ಇದ್ದರು. ಹೀಗೆಲ್ಲ ಹಾದಿ ಕ್ರಮಿಸಿದ ವೈಟರ್ ಹುಡುಗ ಇದೀಗ ಒಲಿಂಪಿಕ್ಸ್‌ನ ಮೆಟ್ಟಲಲ್ಲಿ ಬಂದು ನಿಂತಿದ್ದಾನೆ. ಭಾರತಕ್ಕೆ ನಡಿಗೆ ವಿಭಾಗದಲ್ಲಿ ಪದಕ ದೊರಕಿಸಿಕೊಡುವ ಕನಸು ಕಾಣುತ್ತಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X