ಮಹಿಳೆಯರಿಗೆ ಹಲ್ಲೆ: ಆರೋಪಿಯ ಬಂಧನ
ಮಂಗಳೂರು,ಆ.1: ನಗರದ ಕದ್ರಿ ದೇವಸ್ಥಾನದ ಬಳಿ ಮನೆಯೊಂದಕ್ಕೆ ನುಗ್ಗಿ ಹಲ್ಲೆಗೈದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕದ್ರಿ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ದೇವಸ್ಥಾನದ ಮಹಿಳಾ ಸಿಬ್ಬಂದಿ ವಾಸ್ತವ್ಯವಿದ್ದು, ಅವರ ಮೇಲೆ ಈ ವ್ಯಕ್ತಿ ವಿನಾಕಾರಣ ಮರದ ತುಂಡಿನಿಂದ ಹಲ್ಲೆಗೈದಿದ್ದಾನೆ. ಮಹಿಳೆಯರ ಕೂಗಾಟಕ್ಕೆ ಸ್ಥಳೀಯರು ಸ್ಥಳಕ್ಕಾಗಮಿಸಿ, ವ್ಯಕ್ತಿಯನ್ನು ಹಿಡಿದು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Next Story





