ಮುಸ್ಲಿಮ್ ಯುವಕರಿಗೆ ಹಲ್ಲೆ, ಅವಹೇಳನ
ಜೈ ಶ್ರೀರಾಮ್ ಘೋಷಣೆ ಕೂಗಿಸಿದ ಸಂಘ ಪರಿವಾರ ಕಾರ್ಯಕರ್ತರು
ಅಹ್ಮದಾಬಾದ್, ಆ.2: ಸಂಘ ಪರಿವಾರ ಕಾರ್ಯಕರ್ತರೆನ್ನಲಾದ ಕೆಲವರು ಇಬ್ಬರು ಮುಸ್ಲಿಮ್ ಯುವಕರಿಗೆ ಹಲ್ಲೆಗೈದು, ಅಲ್ಲಾಹುವನ್ನು ಅವಹೇಳನ ಮಾಡಿದ್ದಲ್ಲದೆ, ಅವರಿಂದ ಜೈ ಶ್ರೀ ರಾಮ್ ಘೋಷಣೆ ಕೂಗಿಸಿದ ವೀಡಿಯೋವೊಂದು ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಜನತಾ ಕಾ ರಿಪೋರ್ಟರ್ ವರದಿಯೊಂದು ಹೇಳಿದೆ.
ವೀಡಿಯೋದಲ್ಲಿ ಅಮಿತ್ ಸಿಂಗ್ ರಾಥೋಡ್ ಎಂಬಾತ ಇಬ್ಬರು ಮುಸ್ಲಿಮ್ ಯುವಕರನ್ನು ಥಳಿಸುತ್ತಿರುವ ದೃಶ್ಯವಿದೆ. ಅಲ್ಲದೆ ಹಲ್ಲೆಕೋರನು ಅಲ್ಲಾಹುವನ್ನು ಅವಹೇಳನ ಮಾಡಿ ಮಾತನಾಡುತ್ತಿದ್ದಾನೆ. ಸ್ವಲ್ಪಹೊತ್ತಿನಲ್ಲಿ ಆತನೊಂದಿಗೆ ಸೇರಿದ ಆತನ ಸಹಚರರು ಆ ಮುಸ್ಲಿಮ್ ಯುವಕರ ಅಸಹಾಯಕತೆಗೆ ಜೋರಾಗಿ ನಗುತ್ತಿರುವುದೂ ಕಾಣಿಸುತ್ತದೆ.
‘‘ಈ ವೀಡಿಯೋ ನೋಡಿದಾಗ ಕರುಳು ಚುರುಕ್ಕೆನ್ನುತ್ತದೆ. ಈ ಕ್ರಿಮಿನಲ್ ಗೂಂಡಾಗಳನ್ನು ಸಂಘ ಪರಿವಾರ ನಮ್ಮ ಜನರ ಮೇಲೆ ಛೂ ಬಿಟ್ಟಿದೆ’’ ಎಂದು ಈ ವೀಡಿಯೋ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಘಟನೆಯ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತ ಗೌರವ್ ಪಾಂಡಿ ಆಗ್ರಹಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ವೀಡಿಯೋವನ್ನು ಟ್ರುತ್ ಆಫ್ ಗುಜರಾತ್ ವೆಬ್ಸೈಟ್ ನಡೆಸುವ ಪ್ರತೀಕ್ ಸಿನ್ಹ ಅಪ್ಲೋಡ್ ಮಾಡಿದ್ದಾರೆ. ‘‘ಇದು ಕೇಸರಿ ಉಗ್ರವಾದದ ಮುಖ. ಅವರು ಉಪಯೋಗಿಸಿದ ಭಾಷೆ ತೀರಾ ಅವಮಾನಕಾರಿ. ಎಚ್ಚರಿಕೆಯಿಂದ ವೀಕ್ಷಿಸಿ(ಅವಮಾನಕರ ಕಮೆಂಟ್ ಮಾಡಿದವರನ್ನು ನಿಷೇಧಿಸಲಾಗುವುದು)’’ ಎಂದು ಅವರು ಬರೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ವೀಡಿಯೋಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿಯೊಂದರ ಪ್ರಕಾರ ಬಿಹಾರದ ಇಬ್ಬರು ಯುವ ವಲಸಿಗ ಕಾರ್ಮಿಕರನ್ನು ವ್ಯಕ್ತಿಯೊಬ್ಬ ಅವಹೇಳನಗೈಯ್ಯುವ ವೀಡಿಯೋ ಬಹಿರಂಗಗೊಂಡ ನಂತರ ಸೋಮವಾರ ಸೂರತ್ ನಗರದ ಲಿಂಬಾಯತ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗೊಡಾದರಾ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಿಂದ ಕೆಲಸಗಾರರನ್ನು ಅಮಿತ್ ಸಿಂಗ್ ರಾಥೋಡ್ ಎಂಬಾತ ಬಲವಂತವಾಗಿ ಹೊರದಬ್ಬುವ ದೃಶ್ಯ ವೀಡಿಯೊದಲ್ಲಿದೆ. ರಾಥೋಡ್ ಜತೆ ಇನ್ನಿತರ ಹಲವರು ಆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ರಾಥೋಡ್ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ
..@HMOIndia ACT & CATCH THESE MILITANTS. Blatantly persecuting Muslims for political aspirations.
— Gaurav Pandhi (@GauravPandhi) August 1, 2016
ABUSIVE CONTENT! pic.twitter.com/1dfdjH3okY