ಫೆಲೋಶಿಪ್ಗೆ 23 ಜಾನಪದ ಅಧ್ಯಯನಕಾರರು ಆಯ್ಕೆ
ಉಡುಪಿ, ಆ.2: ಕರ್ನಾಟಕ ಜಾನಪದ ಅಕಾಡಮಿಯು ಸಾಹಿತಿ ಕಲಾವಿದರಿಗೆ ನೀಡುವ ಫೆಲೋಶಿಪ್ಗಾಗಿ 2015-16ನೆ ಸಾಲಿನಲ್ಲಿ ಪರಿಶಿಷ್ಟ ಜಾತಿಯ 10 ಮಂದಿ, ಪರಿಶಿಷ್ಟ ಪಂಗಡದ 10 ಮಂದಿ ಹಾಗೂ ಸಾಮಾನ್ಯ ವರ್ಗದ ಮೂರು ಮಂದಿ ಅಧ್ಯಯನಕಾರರನ್ನು ಆಯ್ಕೆ ಮಾಡಿದೆ. ಪರಿಶಿಷ್ಟ ಜಾತಿಯ ಡಾ.ಪಿ.ಎಂ.ಕುಮಾರ ಮಂಡ್ಯ(ಚಂದ್ರಮಂಡಲ ಆಚರಣೆ- ಮಂಟೇಸ್ವಾಮಿ ಸಂಪ್ರದಾಯ), ಡಾ.ಗಂಗಾಧರ ಧಾರವಾಡ (ಜಗ್ಗಲಿಗೆ ಪ್ರಕಾರದ ಅಧ್ಯಯನ), ಎಸ್.ಕಾಳಿಂಗಸ್ವಾಮಿ ಸಿದ್ಧಾರ್ಥ, ಚಾಮ ರಾಜನಗರ(ನೀಲಗಾರರ ಪದಗಳಲ್ಲಿ ಸಾಮಾಜಿಕತೆ), ಸುಮಿತ್ರಾ ದಾವಣಗೆರೆ (ಲಂಬಾಣಿ ನೃತ್ಯ), ರೇವಣ್ಣ ಸಿದ್ದಪ್ಪಬಳ್ಳಾರಿ(ಮಳೆರಾಯನ ಪದಗಳು- ಜೋಕುಮಾರಸ್ವಾಮಿ ಸಂಪ್ರದಾಯ), ರಮೇಶ ಗಬ್ಬೂರು ಕೊಪ್ಪಳ(ತತ್ವಪದಗಳು-ಸಾಮಾಜಿಕ ಸಮಾ ನತೆಯ ಆಶಯಗಳು), ಎಂ.ಗಂಗೂಲಪ್ಪ ಚಿಕ್ಕಬಳ್ಳಾಪುರ(ಕೈವಾರ ತಾತಯ್ಯ ತತ್ವಪದಗಳು), ಜಗನ್ನಾಥ ಕೆ. ಮಂಗಳೂರು (ಭೂತಕೋಲ), ಶಿವಣ್ಣ ಎಚ್.ಜಿ. ತುಮಕೂರು(ಸೂಫಿ ಪರಂಪರೆ, ಜಾನಪದ ಆಚರಣೆಗಳು), ಪದ್ಮಾಲಯ ನಾಗರಾಜು ಕೋಲಾರ(ಅಚಲ ತತ್ವಪದಕಾರರು), ಪರಿಶಿಷ್ಟ ಪಂಗಡದ ಕುಮುದಾ ಬಿ. ಶಿವಮೊಗ್ಗ(ಹಕ್ಕಿಪಿಕ್ಕಿಯರ ಪದಗಳು), ಸತೀಶ್ ಕುಮಾರ್ ತಿಮ್ಮಣ್ಣನವರ ಹಾವೇರಿ (ಜಾನಪದ ಮತ್ತು ರಾಷ್ಟ್ರೀಯವಾದ -ಸಂಬಂಧ ಸ್ವರೂಪ), ರತ್ನಮ್ಮ ಎಸ್. ಚಾಮರಾಜನಗರ(ಸೋಲಿಗರ ಆಚರಣೆ ಜಗತ್ತು), ಸಿದ್ದ ಜೆ.ಆರ್.ಮೈಸೂರು(ಜೇನು ಕುರುಬರ ಹಬ್ಬದಾಚರಣೆಗಳು), ಗೀತಾ ಸಿದ್ಧಿ ಉತ್ತರ ಕನ್ನಡ(ಸಿದ್ಧಿ ಆಚರಣೆಗಳು), ಶ್ರೀನಿವಾಸ ಗೌಡ, ಚಿಕ್ಕಮಗಳೂರು(ಗೌಡ್ಲು ಜಾನಪದ ಅಧ್ಯಯನ), ಗೌರಿ ಉಡುಪಿ(ಕೊರಗರ ಡೋಲು ಕುಣಿತ), ಕೃಷ್ಣಮೂರ್ತಿ ಕೆ.ವಿ.ರಾಮ ನಗರ(ಇರುಳಿಗರ ಸಾಂಪ್ರದಾಯಿಕ ಆಚರಣೆಗಳು), ಸಿದ್ದರಾಜು ಮೈಸೂರು (ಯರವರ ಪದಗಳು), ವಿಶ್ವ ಎ. ಚಿಕ್ಕಮಗಳೂರು(ಹಸಲರ ಪದಗಳು), ಸಾಮಾನ್ಯ ವರ್ಗದ ಡಾ.ವೇಮಗಲ್ ಡಿ. ನಾರಾಯಣಸ್ವಾಮಿ ಬೆಂಗಳೂರು(ಜಾನಪದ ಕಲೆ ಮತ್ತು ಕಾಯಕ ಸಂಸ್ಕೃತಿಯ ಸಂಬಂಧದ ಸ್ವರೂಪ), ಪೀರ್ ಬಾಷ ಕೊಪ್ಪಳ(ಮುಹರ್ರಂ ಪದಗಳು ಒಂದು ಆಚರಣೆ), ಉಜ್ಜಜ್ಜಿ ರಾಜಣ್ಣ, ಚಿತ್ರದುರ್ಗ(ಕಾಡುಗೊಲ್ಲರು ಒಂದು ಅಧ್ಯಯನ) ಆಯ್ಕೆಯಾಗಿದ್ದಾರೆ.
ಫೆಲೋಶಿಪ್ನ ಮೊತ್ತವು ತಲಾ 1 ಲಕ್ಷ ರೂ. ಆಗಿದ್ದು, ಇದರಲ್ಲಿ ಅಧ್ಯಯನ ವೇತನಕ್ಕಾಗಿ 70,000 ರೂ.ನ್ನು ಅಧ್ಯಯನಕಾರರಿಗೆ ಮೂರು ಕಂತಿನಲ್ಲಿ ವರದಿಗಳಿ ಗನುಸಾರವಾಗಿ ಬಿಡುಗಡೆ ಮಾಡಲಾಗುವುದು. ಉಳಿದ 30,000 ರೂ. ಆಯಾ ವಿಷಯದ ಪುಸ್ತಕವನ್ನು ಮುದ್ರಿಸಲು ಬಳಸಿಕೊಳ್ಳಲಾಗುವುದು ಎಂದು ಅಕಾ ಡಮಿಯ ರಿಜಿಸ್ಟ್ರಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.